ಶಂಕರನಾರಾಯಣ: ಮೆಸ್ಕಾಂ ಕಟ್ಟಡಕ್ಕೆ ಜಾಗ ನೀಡಲು ಮನವಿ


Team Udayavani, Feb 4, 2022, 4:20 AM IST

ಶಂಕರನಾರಾಯಣ: ಮೆಸ್ಕಾಂ ಕಟ್ಟಡಕ್ಕೆ ಜಾಗ ನೀಡಲು ಮನವಿ

ಕುಂದಾಪುರ: ಶಂಕರ ನಾರಾಯಣ ವಿದ್ಯುತ್‌ ಉಪ ವಿಭಾಗವು ಇಲಾಖಾ ಅನುದಾನವು  ಲಭ್ಯವಿದ್ದರೂ ಸಹ ಸ್ವಂತ ಕಟ್ಟಡ ರಚನೆಗೆ ಜಾಗ ಗುರುತಿಸಲು ಕಂದಾಯ ಇಲಾಖೆ ಅಸಮರ್ಥವಾಗಿರುವುದರಿಂದ ತತ್‌ಕ್ಷಣ ವ್ಯವಸ್ಥೆ ಮಾಡಬೇಕು ಎಂದು ಉಡುಪಿ ಜಿಲ್ಲಾ ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಟದ ಜಿಲ್ಲಾ ಸಂಚಾಲಕ ಹಾಗೂ ಶಂಕರನಾರಾಯಣ ತಾಲೂಕು ರಚನ ಹೋರಾಟ ಸಮಿತಿ ಸಂಚಾಲಕ  ಚಿಟ್ಟೆ ರಾಜಗೋಪಾಲ ಹೆಗ್ಡೆ ಅವರು ಉಡುಪಿ ಜಿಲ್ಲಾ ನೂತನ ಉಸ್ತುವಾರಿ ಸಚಿವ ಹಾಗೂ ಮೀನುಗಾರಿಕೆ ಮತ್ತು ಬಂದರು,  ಒಳನಾಡು ಜಲಸಾರಿಗೆ  ಸಚಿವ ಎಸ್‌.ಅಂಗಾರ ಅವರನ್ನು ಗುರುವಾರ ಭೇಟಿಯಾಗಿ ಮನವಿ ಸಲ್ಲಿಸಿದರು.

ಶಂಕರನಾರಾಯಣ ಪೇಟೆಗೆ ಅತೀ ಸಮೀಪವೇ ಇರುವ ಹಲವು ಸರಕಾರಿ ಜಾಗಗಳ ಆರ್‌.ಟಿ.ಸಿ.ಯೊಂದಿಗೆ ಸಚಿವರ ಜತೆ ಚರ್ಚಿಸಿದ ಅವರು ಶೀಘ್ರದಲ್ಲೇ ನಿವೇಶನ ದೊರಕಿಸಿಕೊಡಲು ಒತ್ತಾಯಿಸಿದರು.

ಆರಂಭ:

2012ರಲ್ಲಿ ಅಂದಿನ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಸರಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಅಂದಿನ ಇಂಧನ ಸಚಿವೆ  ಶೋಭಾ ಕರಂದ್ಲಾಜೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಲಕ್ಷಿ$¾à ನಾರಾಯಣ ಹಾಗೂ ವಿದ್ಯುತ್‌ ಇಲಾಖಾ ಹಿರಿಯ  ಅಧಿಕಾರಿಗಳ ಶಿಫಾರಸು ಮೇರೆಗೆ ಶಂಕರನಾರಾಯಣ ತಾಲೂಕು ಹೋರಾಟ ಸಮಿತಿಯ ಕೋರಿಕೆ ಮೇರೆಗೆ ಬಹುದೊಡ್ಡ ವಿಭಾಗವಾದ  ಕುಂದಾಪುರ ವಿದ್ಯುತ್‌ ಉಪ‌ ವಿಭಾಗವನ್ನು ವಿಭಜಿಸಿ ನೂತನ ಶಂಕರನಾರಾಯಣ ವಿದ್ಯುತ್‌ ಉಪ ವಿಭಾಗ 26 ಗ್ರಾಮಗಳ ವ್ಯಾಪ್ತಿಯ ಕಚೇರಿ ಶಂಕರನಾರಾಯಣದಲ್ಲಿ ಆರಂಭಿಸಲಾಯಿತು.

ಬಾಡಿಗೆ ಕಟ್ಟಡ :

2013ರಿಂದಲೂ ತಿಂಗಳಿಗೆ 18 ಸಾವಿರ ರೂ. ಬಾಡಿಗೆ ಮೇಲೆ ಬಾಡಿಗೆ ಕಟ್ಟಡದಲ್ಲಿ ಕಾರ್ಯಾಚರಿಸುವ ಈ ಇಲಾಖೆಗೆ ಇಲಾಖಾ ಅನುದಾನ ಲಭ್ಯವಿದ್ದರೂ ಸ್ವಂತ ಕಚೇರಿ, ಅಧಿಕಾರಿಗಳ ಕ್ವಾರ್ಟರ್ಸ್‌, ಮಳೆಗಾಲದಲ್ಲಿ ಗಾಳಿಮಳೆಗೆ ಕಂಬ ತುಂಡಾದರೆ ಸಿಡಿಲಿಗೆ ಟಿಸಿ ಭಸ್ಮವಾದರೆ ಕಂಬ, ಟಿಸಿ, ವಯರು ದಾಸ್ತಾನು ಇಡಲು ಗೋದಾಮು, ಗ್ರಾಹಕರಿಗೆ ಬಿಲ್‌ ಕಟ್ಟಲು ಕೌಂಟರ್‌ ಆವಶ್ಯಕತೆ ಇದ್ದು, ಇಲಾಖಾ ಹಿರಿಯ ಅಧಿಕಾರಿಗಳ ಹಾಗೂ ಜನ ಸಂಪರ್ಕ ಸಭೆಯಲ್ಲೂ ಸ್ವಂತ ಕಟ್ಟಡ ಆವಶ್ಯಕತೆ ಕುರಿತು ಚರ್ಚೆ ಆಗುತ್ತಲೇ ಇವೆ.

26 ಗ್ರಾಮಗಳ ವ್ಯಾಪ್ತಿ :

ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ (ಎಇಇ) ಹುದ್ದೆ ಹೊಂದಿದ ಈ ಉಪ ವಿಭಾಗವು ಬೆಳ್ವೆ, ಹಾಲಾಡಿ, ಸಿದ್ದಾಪುರ, ಅಂಪಾರು, ಹೊಸಂಗಡಿಯಲ್ಲಿ ಕಿರಿಯ ಎಂಜಿನಿಯರ್‌ (ಜೆಇ) ಕಚೇರಿ ಶಾಖೆಯನ್ನು ಹೊಂದಿ ಹಳ್ಳಿಹೊಳೆಯಿಂದ ಕಾವ್ರಾಡಿ, ಹಳ್ಳಾಡಿ – ಹರ್ಕಾಡಿ, ಅಮಾಸೆಬೈಲು, ಶೇಡಿಮನೆ, ಮಡಾಮಕ್ಕಿವರೆಗೆ ಸುಮಾರು 25ರಿಂದ 26 ಗ್ರಾಮಗಳ ವ್ಯಾಪ್ತಿ ಹೊಂದಿದೆ.

“ಸುದಿನ’ ವರದಿ :

ಈ ಸಮಸ್ಯೆ ಕುರಿತು “ಉದಯವಾಣಿ’ “ಸುದಿನ’ 2021ರ ಎ. 23ರಂದು ಕಾದಿರಿಸಿದ ಅರಣ್ಯ ನೆಪ; 26 ಗ್ರಾಮಗಳ ವ್ಯಾಪ್ತಿ, ಶಂಕರನಾರಾಯಣ ವಿದ್ಯುತ್‌ ಉಪ ವಿಭಾಗ ಕಚೇರಿಗೆ ಸಂಕಷ್ಟ ಎಂದು ವರದಿ ಮಾಡಿತ್ತು.

ನೂತನ ಉಸ್ತುವಾರಿ ಸಚಿವರಿಗೆ ಎಲ್ಲ ವಿವರಣೆ ನೀಡಿ, ಲಭ್ಯ ಸರಕಾರಿ ಸ್ಥಳದ ಮಾಹಿತಿ ನೀಡಿ ಶೀಘ್ರ ಕಡತ ವಿಲೇವಾರಿಗೆ ಸೂಚಿಸುವಂತೆ ಮನವಿ ಮಾಡಲಾಗಿದೆ. ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. -ಚಿಟ್ಟೆ ರಾಜಗೋಪಾಲ ಹೆಗ್ಡೆ ಹೋರಾಟಗಾರರು 

ಟಾಪ್ ನ್ಯೂಸ್

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

voter

Vote ಮಾಡದಿದ್ದರೆ ಬ್ಯಾಂಕ್‌ ಖಾತೆಯಿಂದ 350 ರೂ. ಕಡಿತ?

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

Byndoor ವಿವಾಹಿತ ಮಹಿಳೆ ಯುವಕನ ಜತೆ ಪರಾರಿ

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-rain

Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ

1-24-saturday

Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್‌ ಧನಪ್ರಾಪ್ತಿ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

Heavy Rain; ದುಬಾೖ ಪ್ರಯಾಣ ಬೇಡ: ಸಲಹೆ

1-qweqwqe

Ban in Singapore; ಎವರೆಸ್ಟ್‌ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.