ಕೊಮೆ-ಕೊರವಡಿ ಮೀನುಗಾರರಿಂದ ವಿಶೇಷ ಸಮುದ್ರ ಪೂಜೆ
Team Udayavani, Jun 24, 2021, 2:55 PM IST
ತೆಕ್ಕಟ್ಟೆ: ಇಲ್ಲಿನ ಕೊಮೆ ಕೊರವಡಿ ಶ್ರೀ ಬೊಬ್ಬರ್ಯ ಹಾಗೂ ಹಳೆಯಮ್ಮನ ದೈವಸ್ಥಾನದಲ್ಲಿ ಕೊಮೆ-ಕೊರವಡಿ ಮೀನುಗಾರ ಮುಖಂಡರು ಅರ್ಚಕ ಮಂಜುನಾಥ ಹೊಳ್ಳ ಅವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ಹಿರಿಯ ಮೀನುಗಾರ ಮುಖಂಡ ಸೋಮ ಕಾಂಚನ್ ಹಾಗೂ ಸಾಕು ದಂಪತಿಗಳು ಸಂಪ್ರದಾಯದಂತೆ ಸಮುದ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಜೂ.24 ರಂದು ಬಾಗಿನ ಅರ್ಪಿಸಿದರು.
ಈ ಸಂದರ್ಭದಲ್ಲಿ ದೇವಳದ ಪಾತ್ರಿಗಳಾದ ರಾಘವೇಂದ್ರ, ರಾಮ, ರವಿ, ಮಂಜುನಾಥ, ದೈವಸ್ಥಾನದ ಅರ್ಚಕ ಬಸವ ಹಟ್ಟಿಮನೆ, ತೆಕ್ಕಟ್ಟೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಾಂಚನ್ ಕೊಮೆ, ಕೈರಂಪಣಿ ದೋಣಿಯ ಮಾಲಕರಾದ ರಾಮ ಕಾಂಚನ್, ವಿಶ್ವನಾಥ ಕೊರವಡಿ, ಸೀತಾರಾಮ, ಸೋಮ ಪುತ್ರನ್, ಹಾಗೂ ಕಂತಲೆ ಬಲೆ ದೋಣಿಯ ಮಾಲಕರಾದ ಯೋಗೀಶ್ ಕುಂದರ್, ರಾಘವೇಂದ್ರ ಕಾಂಚನ್, ಆನಂದ, ತಿಮ್ಮಣ್ಣ, ರಾಘವೇಂದ್ರ, ಪ್ರಕಾಶ್, ರಾಘವೇಂದ್ರ ಬಿ.ಡಿ., ಶೇಖರ ಇಂಬಾಳಿಮನೆ ಹಾಗೂ ಕೊಮೆ,ಕೊರವಡಿ ಪರಿಸರದ ನೂರಾರು ಮೀನುಗಾರರು ಉಪಸ್ಥಿತರಿದ್ದರು.