ಶಾಂತಜ್ಜಿಗೆ ನಿರ್ಮಾಣವಾಯಿತು ಸ್ವಂತ‌ ಸೂರು


Team Udayavani, Nov 14, 2020, 4:24 AM IST

ಶಾಂತಜ್ಜಿಗೆ ನಿರ್ಮಾಣವಾಯಿತು ಸ್ವಂತ‌ ಸೂರು

ನ. 23ರಂದು ಉದ್ಘಾಟನೆಗೊಳ್ಳಲಿರುವ ಶಾಂತಜ್ಜಿಯವರ ಹೊಸ ಮನೆ.

ಕುಂದಾಪುರ: ಶಂಕರ ನಾರಾಯಣ ಗ್ರಾ.ಪಂ. ವ್ಯಾಪ್ತಿಯ ಕುಳ್ಳುಂಜೆ ಗ್ರಾಮದ ಮಾವಿನಕೊಡ್ಲು ಬಳಿಯ ಕೋವಿನ ಗುಡ್ಡೆಯಲ್ಲಿ ಅನೇಕ ವರ್ಷಗಳಿಂದ ಟರ್ಪಾಲಿನ ಜೋಪಡಿಯಲ್ಲಿದ್ದ ದಿನ ಕಳೆಯುತ್ತಿದ್ದ ಶಾಂತಾಬಾಯಿ ಅಜ್ಜಿಗೆ ಸೂರು ನಿರ್ಮಾಣಗೊಂಡಿದೆ. ಕುಂದಾಪುರ ತಾ.ಪಂ. ಸದಸ್ಯ ಉಮೇಶ್‌ ಶೆಟ್ಟಿ ಕಲ್ಗದ್ದೆ ಅವರ ಮುಂದಾಳ್ವತದಲ್ಲಿ ಮನೆ ನಿರ್ಮಾಣವಾಗಿದ್ದು, ನ. 23ರಂದು ಬೆಳಗ್ಗೆ 10.30 ಕ್ಕೆ ಗೃಹಪ್ರವೇಶ ನಡೆಯಲಿದೆ.

2015-16ನೇ ಸಾಲಿನಲ್ಲಿ ಅಂಬೇಡ್ಕರ್‌ ಯೋಜನೆಯಡಿ ಮನೆ ಮಂಜೂರಾಗಿ ದ್ದರೂ, ಮನೆ ಕಟ್ಟಲು ಆರಂಭವಾದ ಅನಂತರ ಹಣ ಮಂಜೂರಾಗುವುದರಿಂದ ಮನೆ ಕಟ್ಟಲು ಆರಂಭಿಸುವಷ್ಟು ಅನು ಕೂಲ ಇವರಲ್ಲಿರಲಿಲ್ಲ. ಅಜ್ಜಿಯೊಂದಿಗೆ ಪುತ್ರಿ ಸೀತಾ ಬಾಯಿ ಹಾಗೂ ಅವರ 10 ವರ್ಷದ ಪುತ್ರಿಯಿದ್ದಾರೆ.

ನೆರವಾದ ತಾ.ಪಂ. ಸದಸ್ಯ
“ಉದಯವಾಣಿ’ ವರದಿಗೆ ಸ್ಪಂದಿಸಿದ ತಾ.ಪಂ. ಸದಸ್ಯ ಉಮೇಶ್‌ ಶೆಟ್ಟಿ ಕಲ್ಗದ್ದೆ ಈ ಅಜ್ಜಿಗೆ ಮನೆ ಕಟ್ಟಿಕೊಡುವ ಮಹತ್ತರ ಕಾರ್ಯಕ್ಕೆ ಮುಂದಾದರು. ಮನೆಗೆ ಸುಮಾರು 10 ಲಕ್ಷ ರೂ.ವರೆಗೆ ಖರ್ಚಾಗಿದ್ದು, ಈ ಪೈಕಿ 1.20 ಲಕ್ಷ ರೂ. ಆಶ್ರಯ ಯೋಜನೆಯಡಿ (ಅದರಲ್ಲಿ 30 ರೂ. ಬಾಕಿ ಇದೆ), 1.20 ಲಕ್ಷ ರೂ. ಅನೇಕ ಮಂದಿ ದೇಣಿಗೆ ರೂಪದಲ್ಲಿ ನೀಡಿದ್ದು, ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮನೆಗೆ ಬೇಕಾದ ಎಲ್ಲ ಹಂಚನ್ನು ಕೊಟ್ಟಿದ್ದಾರೆ. ಉಳಿದ ಹಣವನ್ನು ಉಮೇಶ್‌ ಶೆಟ್ಟಿಯವರೇ ಸ್ವತಃ ಭರಿಸಿದ್ದಾರೆ.

ಸುದಿನ ವರದಿ
ಶಾಂತಾ ಬಾಯಿ ಅಜ್ಜಿಯ ಸಂಕಷ್ಟದ ಕಥೆಯ ಬಗ್ಗೆ “ಉದಯವಾಣಿ ಸುದಿನ’ವು 2018ರ ಜೂ. 28ರಂದು “ಶಾಂತಜ್ಜಿಯ ಗೋಳು ಕೇಳುವವರೇ ಇಲ್ಲ’ ಎನ್ನುವುದಾಗಿ ಮೊದಲ ಬಾರಿಗೆ ವಿಸ್ತೃತ ವರದಿಯನ್ನು ಪ್ರಕಟಿಸಿ, ಗಮನಸೆಳೆದಿತ್ತು.

ಸಂತೃಪ್ತಿಯ ಭಾವ
ಅಜ್ಜಿಯ ಸಂಕಷ್ಟದ ಬದುಕು ನೋಡಿ ಆ ಅಜ್ಜಿಗೊಂದು ಮನೆ ಕಟ್ಟಿಕೊಡಬೇಕು ಎನ್ನುವುದು ಕನಸಾಗಿತ್ತು. ಶಾಸಕರು, ಒಂದಿಷ್ಟು ಸಹೃದಯಿ ಸ್ನೇಹಿತರ ಸಹಕಾರದಿಂದ ಈಡೇರಿದೆ. ಈಗ ಅಜ್ಜಿಯ ಮುಖದಲ್ಲಿನ ನಗು ಸಂತೃಪ್ತಿಯ ಭಾವ ಮೂಡಿಸಿದೆ.
– ಉಮೇಶ್‌ ಶೆಟ್ಟಿ ಕಲ್ಗದ್ದೆ, ತಾ.ಪಂ. ಸದಸ್ಯರು

 

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Bramavara; ಹೆದ್ದಾರಿಯಲ್ಲಿ ಭೀಕರ ಅಪಘಾತ: ಲಾರಿಗೆ ಸಿಲುಕಿ ಬೈಕ್ ಸವಾರ ದುರ್ಮರಣ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wqeqwew

BJP ನುಡಿದಂತೆ ನಡೆಯದ ಕೇಂದ್ರ ಸರಕಾರ, 15 ಲ.ರೂ. ಬಂದಿದೆಯೇ?: ಜೆ.ಪಿ. ಹೆಗ್ಡೆ

4

ಕೋತಲಕಟ್ಟೆ: ಹೆದ್ದಾರಿ ಬಳಿ ನಿಲ್ಲಿಸಿದ್ದ ಸ್ಕೂಟಿ ಕಳವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.