ಆಮ್ರಕಲ್ಲು-ಸೂರ್ಗೋಳಿ ರಸ್ತೆ ಜರ್ಜರಿತ: ಸಂಚಾರ ದುಸ್ತರ
ಬೆಳ್ವೆ - ಸೂರ್ಗೋಳಿ ರಸ್ತೆಯು ಹೊಂಡಮಯ
Team Udayavani, Jul 26, 2022, 11:30 AM IST
ಗೋಳಿಯಂಗಡಿ: ಆಮ್ರಕಲ್ಲು – ಸೂರ್ಗೋಳಿ ಕ್ರಾಸ್ ರಸ್ತೆ ಹಾಗೂ ಬೆಳ್ವೆಯಿಂದ ಸೂರ್ಗೋಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಅಲ್ಲಲ್ಲಿ ಬಹಳಷ್ಟು ಹೊಂಡಗಳು ಉಂಟಾಗಿದ್ದು ಸಂಚಾರ ದುಸ್ತರಗೊಂಡಿದೆ. ಒಟ್ಟು 6 ಕಿ.ಮೀ. ದೂರದವರೆಗೆ ವಾಹನ ಸವಾರರು ಪರದಾಡುವಂತಾಗಿದೆ.
ಬೆಳ್ವೆ, ಹಿಲಿಯಾಣ, ನಾಲ್ಕೂರು ಈ 3 ಗ್ರಾಮಗಳನ್ನು ಬೆಸೆಯುವ ಆಮ್ರಕಲ್ಲು – ಸೂರ್ಗೋಳಿ 4 ಕಿ.ಮೀ. ದೂರದ ರಸ್ತೆಯಲ್ಲಿ ಅಲ್ಲಲ್ಲಿ ಬೃಹತ್ ಹೊಂಡ ಬಿದ್ದಿದ್ದು, ಈ ರಸ್ತೆಯಲ್ಲಿ ಸಂಚಾರ ಪ್ರಯಾಸ ತರುವಂತಿದೆ. ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಹಲವರು ಇದೇ ಮಾರ್ಗ ಆಶ್ರಯಿಸಿದ್ದಾರೆ.
ಬೆಳ್ವೆ – ಸೂರ್ಗೋಳಿ ರಸ್ತೆ
ಈ ಆಮ್ರಕಲ್ಲು – ಸೂರ್ಗೋಳಿ ರಸ್ತೆ ಸಂಪರ್ಕಿಸುವ ಬೆಳ್ವೆಯಿಂದ ಸೂರ್ಗೋಳಿ ಕಡೆಗೆ ತೆರಳುವ ಸುಮಾರು 2 ಕಿ.ಮೀ. ದೂರದ ರಸ್ತೆಯು ಸಂಪೂರ್ಣ ಹೊಂಡಮಯವಾಗಿದೆ.
ಈ ಮಾರ್ಗದಲ್ಲಿ ನಿತ್ಯ ನೂರಾರು ಮಂದಿ ಸಂಚರಿಸುತ್ತಾರೆ. ಆಮ್ರಕಲ್ಲು – ಸೂರ್ಗೋಳಿ ರಸ್ತೆಯು ಆಮ್ರಕಲ್ಲು, ತಾರಿಕಟ್ಟೆ ಹಾಗೂ ಸೂರ್ಗೋಳಿ ಭಾಗದ ಜನರಿಗೆ ಬೇರೆ ಬೇರೆ ಕಡೆಗಳಿಗೆ ಸಂಚರಿಸಲು ಮುಖ್ಯ ರಸ್ತೆಯಾಗಿದೆ. ಇನ್ನು ಬೆಳ್ವೆ – ಸೂರ್ಗೋಳಿ ಹಾಗೂ ಸೂರ್ಗೋಳಿ – ಆಮ್ರಕಲ್ಲು ರಸ್ತೆಯು ಬೆಳ್ವೆ, ಆರ್ಡಿ- ಅಲಾºಡಿ, ಮಡಾಮಕ್ಕಿ, ಮಾಂಡಿ ಮೂರುಕೈ ಭಾಗದ ಜನರಿಗೆ ಮಂದಾರ್ತಿ ದೇವಸ್ಥಾನಕ್ಕೆ ತೆರಳಲು ಹತ್ತಿರದ ಮಾರ್ಗವಾಗಿದೆ. ಬೆಳ್ವೆಯಿಂದ ಮಂದಾರ್ತಿಗೆ ಬೇರೆ ರಸ್ತೆಯಿದ್ದರೂ ಈ ಮಾರ್ಗವಾಗಿ ಸುಮಾರು 2 ಕಿ.ಮೀ.ನಷ್ಟು ಹತ್ತಿರವಾಗಲಿದೆ.
ದಶಕದ ಹಿಂದೆ ಡಾಮರು
ಈ ಮಾರ್ಗಕ್ಕೆ ಶಾಸಕರ ಮುತು ವರ್ಜಿಯಲ್ಲಿ 10 ವರ್ಷಗಳಿಗೂ ಹಿಂದೆ ಡಾಮರು ಆಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಮಾರ್ಗದ ಯಾವುದೇ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಕೆಲವೊಮ್ಮೆ ಹೊಂಡಗಳಿಗೆ ತೇಪೆ ಹಾಕುವ ಕಾರ್ಯ ಆಗಿದ್ದು, ಬಿಟ್ಟರೆ, ರಸ್ತೆ ಮರು ಡಾಮರು ಕಾಮಗಾರಿ ಈವರೆಗೆ ನಡೆದಿಲ್ಲ. ಕಳೆದ ಬಾರಿಯೂ ತೇಪೆ ಹಾಕದೇ, ಈಗ ಸಂಚರಿಸಲು ಸಾಧ್ಯವಿಲ್ಲದಷ್ಟು ಹೊಂಡ ಬಿದ್ದಿದೆ.
ಅಭಿವೃದ್ಧಿಗೆ ಬೇಡಿಕೆ
ಆಮ್ರಕಲ್ಲು – ತಾರಿಕಟ್ಟೆ- ಸೂರ್ಗೋಳಿ ಕ್ರಾಸ್ ರಸ್ತೆ ಹಾಗೂ ಬೆಳ್ವೆ – ಸೂಗೋಳಿ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ರಸ್ತೆಯ ಅಲ್ಲಲ್ಲಿ ದೊಡ್ಡ ಹೊಂಡ ಬಿದ್ದಿರುವುದರಿಂದ ಅಪಘಾತಗಳು ಸಂಭವಿಸುವ ಸಾಧ್ಯತೆಯೂ ಇದೆ. ಶೀಘ್ರ ಈ ರಸ್ತೆಯ ಮರು ಡಾಮರು ಕಾಮಗಾರಿ ಆಗಲಿ ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.
50 ಲ.ರೂ. ಅನುದಾನ: ಬೆಳ್ವೆ – ಸೂರ್ಗೋಳಿ ರಸ್ತೆಯ ಅಭಿವೃದ್ಧಿಗೆ ಕುಂದಾಪುರ ಶಾಸಕರ ಮುತುವರ್ಜಿಯಲ್ಲಿ 50 ಲಕ್ಷ ರೂ. ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆಯಲ್ಲಿದೆ. ಇನ್ನು ಆಮ್ರಕಲ್ಲು – ಸೂರ್ಗೋಳಿ ರಸ್ತೆಯು ಕುಂದಾಪುರ ಹಾಗೂ ಉಡುಪಿ ಎರಡು ಕ್ಷೇತ್ರಗಳ ವ್ಯಾಪ್ತಿಯಾಗಿದ್ದು, ಇಬ್ಬರು ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ. 3-4 ಕಿ.ಮೀ. ಆಗಿರುವುದರಿಂದ ದೊಡ್ಡ ಅನುದಾನದ ಅಗತ್ಯವಿದೆ. – ಸೂರ್ಗೋಳಿ ಚಂದ್ರಶೇಖರ ಶೆಟ್ಟಿ, ಬೆಳ್ವೆ ಗ್ರಾ.ಪಂ. ಅಧ್ಯಕ್ಷರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ