ಉಪ್ಪುಂದ : ಹೊಸ ಚಿನ್ನ ಮಾಡಿಸಿಕೊಡುವುದಾಗಿ ಹಳೆಯ ಚಿನ್ನಾಭರಣ ಪಡೆದು ಹಲವರಿಗೆ ಮೋಸ
Team Udayavani, Jun 30, 2022, 9:50 PM IST
ಉಪ್ಪುಂದ : ಹೊಸ ಚಿನ್ನಾಭರಣ ಮಾಡಿಸಿ ಕೊಡುವುದಾಗಿ ಹೇಳಿ ಹಳೆಯ ಚಿನ್ನ ಪಡೆದು ಬಳಿಕ ಹೊಸ ಚಿನ್ನವನ್ನು ನೀಡದೆ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಘಟನೆ ವಿವರ : ಸಿದ್ದಾಪುರ ಕೆಳಪೇಟೆ ಋಷಿಕೆರೆ ನಿವಾಸಿ ಉದಯ ಅವರು ಉಪ್ಪುಂದದಲ್ಲಿರುವ ನಿತ್ಯಾನಂದ ಶೇಟ್ ರವರ ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ್ ನಲ್ಲಿ ತನ್ನ ಅಕ್ಕನ ಮಗಳ ಮದುವೆಗೆಂದು ಕರಿಮಣಿ ಸರ ಹಾಗೂ ಬಳೆಗಳನ್ನು ಮಾಡಿಸಲು ಕಳೆದ ಅಕ್ಟೋಬರ್ 18 ರಂದು ಚಿನ್ನದ ಅಂಗಡಿಗೆ ಬಂದಿದ್ದಾರೆ ಈ ವೇಳೆ ಅಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ ಗಿರೀಶ್ ಶೇಟ್ ಹಾಗೂ ಆತನ ಸಹೋದರರಾದ ವೆಂಕಟೇಶ್ ಹಾಗೂ ಹರೀಶ್ ರವರಲ್ಲಿ ಹೊಸದಾಗಿ ಕರಿಮಣಿ ಸರ ಮತ್ತು ಬಳೆಗಳನ್ನು ಮಾಡಿಸುವ ಬಗ್ಗೆ ಮಾತನಾಡಿದ್ದಾರೆ ಈ ವೇಳೆ ಉದಯ ಅವರು ತಮ್ಮಲ್ಲಿದ್ದ ಹಳೆಯ ಚಿನ್ನ 35 ಗ್ರಾಂ ತೂಕದ ಕರಿಮಣಿ ಸರ, 12 ಗ್ರಾಂ ತೂಕದ ಚಿನ್ನದ ಚೈನ್ ಹಾಗೂ 16 ಗ್ರಾಂ ತೂಕದ ಎರಡು ಬಳೆಗಳನ್ನು ಮತ್ತು ಮುಂಗಡವಾಗಿ 45, 000/- ರೂಪಾಯಿ ನಗದು ಹಣವನ್ನು ನೀಡಿ ಹೊಸ ಚಿನ್ನ ಮಾಡಲು ಹೇಳಿದ್ದಾರೆ ಅದರಂತೆ ಚಿನ್ನದ ಅಂಗಡಿಯವರು ಹಳೆಯ ಚಿನ್ನಗಳನ್ನು ಪಡೆದುಕೊಂಡಿದ್ದಾರೆ ಬಳಿಕ ಸ್ವಲ್ಪ ದಿನಗಳು ಕಳೆದ ಬಳಿಕ ಹೊಸತಾಗಿ ಮಾಡಿದ ಕರಿಮಣಿ ಸರ ಮತ್ತು ಬಳೆಗಳನ್ನು ಕೊಂಡು ಹೋಗಲು ಬಂದಾಗ ಅಂಗಡಿಯವರು ಸ್ವಲ್ಪ ದಿನ ಬಿಟ್ಟು ನೀಡುವುದಾಗಿ ಹೇಳಿದ್ದಾರೆ, ಆ ಬಳಿಕ ಕೆಲವು ದಿನಗಳನ್ನು ಮುಂದಕ್ಕೆ ಹಾಕುತ್ತಾ ಮುಂದೂಡಿದ್ದಾರೆ.
ಹೀಗೆ ಕೆಲವು ಸಮಯದ ಬಳಿಕ ಮಾರುತಿ ಗೋಲ್ಡ್ ಜ್ಯುವೆಲ್ಲರ್ಸ ಗೆ ಹೋದಾಗ ಚಿನ್ನ ಪಡೆದುಕೊಂಡ ವ್ಯಕ್ತಿಗಳು ಅಂಗಡಿಯಲ್ಲಿ ಇರಲಿಲ್ಲ ಈ ವೇಳೆ ಫೋನ್ ಮಾಡಿದರೆ ಸ್ವೀಕರಿಸದೇ ತಲೆಮರೆಸಿಕೊಂಡಿದ್ದಾರೆ.
ಘಟನೆ ಕುರಿತು ಮಾಹಿತಿ ಕಲೆ ಹಾಕಿದಾಗ ಚಿನ್ನದ ಅಂಗಡಿಯವರು ಇದೆ ರೀತಿ ಹಲವು ಮಂದಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.
ಘಟನೆ ಕುರಿತು ಉದಯ ಅವರು ಬೈಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬಿಸಿದ್ದಾರೆ.
ಇದನ್ನೂ ಓದಿ : ಕೊರಟಗೆರೆ: ಕಾರು ಢಿಕ್ಕಿ; ಬೈಕ್ ಸವಾರರಿಗೆ ಗಂಭೀರ ಗಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?
ಇಂದು ಚಿಕ್ಕಬಳ್ಳಾಪುರ, ಬೆಂಗಳೂರಲ್ಲಿ ಮೋದಿ ಗರ್ಜನೆ: ಒಂದೂವರೆ ಲಕ್ಷ ಜನ ಸೇರುವ ನಿರೀಕ್ಷೆ