ಕುಸಿಯುತ್ತಿದೆ ವಡೇರಹೋಬಳಿ ರಸ್ತೆ ಸಂಪರ್ಕ 


Team Udayavani, Nov 26, 2021, 3:00 AM IST

ಕುಸಿಯುತ್ತಿದೆ ವಡೇರಹೋಬಳಿ ರಸ್ತೆ ಸಂಪರ್ಕ 

ಕುಂದಾಪುರ:  ಇಲ್ಲಿನ  ಪುರಸಭೆ ವ್ಯಾಪ್ತಿಯ ವಡೇರಹೋಬಳಿಯಲ್ಲಿ ರಸ್ತೆ ಸಂಪರ್ಕ  ಕುಸಿಯಲು ಆರಂಭಿಸಿದೆ. ಅಲ್ಲೇ ಪಕ್ಕದಲ್ಲಿ ಚರಂಡಿಯಲ್ಲೇ ವಿದ್ಯುತ್‌ ಕಂಬಗಳನ್ನು ನೆಡಲಾಗಿದೆ. ಪರಿಣಾಮ ಚರಂಡಿಯಲ್ಲಿ ನೀರು ಹರಿಯದೇ ರಸ್ತೆಯಲ್ಲಿ ಹರಿಯುತ್ತದೆ.

ಚರಂಡಿಯಲ್ಲಿ  ವಿದ್ಯುತ್‌ ಕಂಬಗಳು:

ಭಂಡಾರ್‌ಕಾರ್ಸ್‌ ಕಾಲೇಜಿನ ಸಮೀಪದಿಂದ ಹಾದುಹೋಗಿ, ಕುಂದೇಶ್ವರ ದೇವಾಲಯದ ಹಿಂದಿನ ರಸ್ತೆ ಮೂಲಕ ವ್ಯಾಸರಾಜ ಮಠ, ಎಲ್‌ಐಸಿ ರಸ್ತೆಯನ್ನು ಸಂಪರ್ಕಿಸಬಹುದು. ಅಂತೆಯೇ ವಡೇರಹೋಬಳಿ ಶಾಲೆ, ಬಿಎಸ್‌ಎನ್‌ಎಲ್‌

ಮೂಲಕವೂ ನೆಹರೂ ಮೈದಾನ ಬಳಿಗೂ ಬರಬಹುದು. ಈ ರಸ್ತೆ ಪಕ್ಕದಲ್ಲಿ  ಹಾದು ಹೋದ ಚರಂಡಿಯಲ್ಲಿ ವಿದ್ಯುತ್‌ ಕಂಬಗಳನ್ನು ನೆಡಲಾಗಿದೆ. ಒಂದು ಕಡೆಯಿಂದ ಹಾಸ್ಟೆಲ್‌, ಪಿಜಿ ಇತ್ಯಾದಿಗಳ ನೀರು ಈ ಚರಂಡಿ ಮೂಲಕ ಬರುತ್ತದೆ. ಮತ್ತೂಂದು ಕಡೆಯಿಂದ ಹೊಟೇಲ್‌ನ ಸಂಸ್ಕರಿತ ನೀರು ಇದೇ ಚರಂಡಿಯಲ್ಲಿ   ಹರಿಯುತ್ತದೆ. ಈ ವಿದ್ಯುತ್‌ ಕಂಬಗಳಿಗೆ  ಕಾಂಕ್ರಿಟ್‌ ಸ್ಲಾéಬ್‌ ಅಳವಡಿಸಲಾಗಿದೆ. ಹಾಗಾಗಿ ಚರಂಡಿ ನೀರು ಸರಾಗವಾಗಿ ಹರಿಯಲು ಅಡ್ಡಿಯಾಗಿ ಚರಂಡಿ ಸ್ಲಾéಬ್‌ನ ಮೇಲೆಯೇ ಹರಿಯುತ್ತದೆ. ಈ ಕಂಬಗಳನ್ನು ಸ್ಥಳಾಂತರಿಸಲು ಸ್ಥಳೀಯರು  ಹಲವು ಬಾರಿ ಮಾಡಿದ ಮನವಿ ನಿರರ್ಥಕವಾಗಿದೆ.

ಕುಸಿದ ಸ್ಲ್ಯಾಬ್‌:

ಹೆದ್ದಾರಿಯಲ್ಲಿ ಸರ್ವಿಸ್‌ ರಸ್ತೆಗಳಷ್ಟೇ ಓಡಾಟಕ್ಕೆ ಮುಕ್ತವಾಗಿದ್ದು ಒಂದು ಸರ್ವಿಸ್‌  ರಸ್ತೆಯಿಂದ ಇನ್ನೊಂದು ರಸ್ತೆಗೆ ಫ್ಲೈ ಒವರ್‌ ಹಾಗೂ ಅಂಡರ್‌ಪಾಸ್‌ ಮೂಲಕವೇ ಬರಬೇಕಾಗುತ್ತದೆ. ಇದರಿಂದಾಗಿ ಎಲ್‌ಐಸಿ  ರಸ್ತೆ, ಲೋಕೋಪಯೋಗಿ ಕಚೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಡೇರಹೋಬಳಿ ರಸ್ತೆ, ವ್ಯಾಸರಾಜ ಮಠ ಮೊದಲಾದೆಡೆಗೆ ಬರುವವರು ಶಾಸ್ತ್ರಿ  ಸರ್ಕ್‌ಲ್‌ನಿಂದ ಫ್ಲೈಒವರ್‌ ಅಡಿಯಲ್ಲಿ ಸಾಗಿ ಬಸ್ರೂರು ಮೂರು ಕೈ ತಲುಪಿ ಅಂಡರ್‌ಪಾಸ್‌ ಮೂಲಕ ಇನ್ನೊಂದು ಬದಿಯ ಸರ್ವಿಸ್‌ ರಸ್ತೆಗೆ ಬಂದು ಬೊಬ್ಬರ್ಯನಕಟ್ಟೆ ತಲುಪಬೇಕಾಗುತ್ತದೆ. ಕೊಂಕಣ ಸುತ್ತಿ ಮೈಲಾರ ಬರುವ ವ್ಯವಸ್ಥೆ ಬೇಡ ಎಂದು ಅನೇಕರು ಈಗ ಸುತ್ತುಬಳಸುವ ದಾರಿ ಬದಲು ಭಂಡಾರ್‌ಕಾರ್ಸ್‌ ಕಾಲೇಜು ಸಮೀಪದ ರಸ್ತೆ ಮೂಲಕ ಕಾಲೇಜಿನ ಹಿಂದಿನಿಂದಾಗಿ ವ್ಯಾಸರಾಜ ಮಠದ ರಸ್ತೆ ಮೂಲಕ ಎಲ್‌ಐಸಿ ರಸ್ತೆ ತಲುಪುತ್ತಿದ್ದಾರೆ. ಅಥವಾ ವಡೇರಹೋಬಳಿ ಶಾಲೆ ಬಳಿಯ ರಸ್ತೆಯಿಂದಾಗಿ ತೆರಳುತ್ತಾರೆ.  ಹೀಗೆ ಹೋಗುವಲ್ಲಿ ಪ್ರಮುಖ ಸಂಪರ್ಕ ಕಲ್ಪಿಸುವ ರಸ್ತೆ ವ್ಯಾಸರಾಜ ಮಠದ ಮೂಲಕ ಸಾಗುತ್ತದೆ. ಅಲ್ಲಿ ಚರಂಡಿಗೆ ಹಾಕಿದ ಸ್ಲ್ಯಾಬ್‌ ಕುಸಿದಿದೆ. ಪಕ್ಕನೆ ನೋಡುವಾಗ ರಸ್ತೆಯೇ ಕುಸಿದಂತಿದೆ. ಸಣ್ಣಪುಟ್ಟ ವಾಹನಗಳು, ಕಾರು ಈ ರಸ್ತೆ ಮೂಲಕ ಹೋಗುವಾಗ  ಅದರ ಅಡಿಭಾಗ ರಸ್ತೆಗೆ ತಾಗುತ್ತದೆ. ಇದರಿಂದ ನಿಯಂತ್ರಣ ತಪ್ಪುತ್ತದೆ. ಈ ಕುರಿತು ಪುರಸಭೆ ಗಮನ ಹರಿಸಿದಂತಿಲ್ಲ. ಇಲ್ಲಿ ವಾಹನಗಳ ಓಡಾಟ ಈಚಿನ ದಿನಗಳಲ್ಲಿ ಹೆಚ್ಚಾಗಿದೆ. ಆದ್ದರಿಂದ ದುರಸ್ತಿ ಅನಿವಾರ್ಯವಾಗಿದೆ.

ಚರಂಡಿಯಲ್ಲಿಯೇ ವಿದ್ಯುತ್‌ ಕಂಬ  ಇರುವುದು, ರಸ್ತೆ ಕುಸಿತಕ್ಕೊಳ ಗಾಗಿರುವುದು ತಿಳಿದುಬಂದಿದ್ದು ಪುರಸಭೆ ಗಮನಕ್ಕೆ ತರಲಾಗಿದೆ. ದುರಸ್ತಿಗೆ ಕ್ರಮ ಕೈಗೊಳ್ಳುವ ಭರವಸೆ ದೊರೆತಿದೆ.-ರೋಹಿಣಿ ಉದಯ ಕುಮಾರ್‌, ಸದಸ್ಯರು, ಪುರಸಭೆ

ವಡೇರಹೋಬಳಿ ಬಳಿ ರಸ್ತೆ  ಕುಸಿತ ಹಾಗೂ ವಿದ್ಯುತ್‌ ಕಂಬ ಚರಂಡಿಯಲ್ಲಿ ಇರುವ  ಕುರಿತು ಎಂಜಿನಿಯರ್‌ ಅವರನ್ನು ಸ್ಥಳ ಪರಿಶೀಲನೆಗೆ ಕಳುಹಿಸಿ ಸರಿಪಡಿಸಲಾಗುವುದು.-ವೀಣಾ ಭಾಸ್ಕರ ಮೆಂಡನ್‌,ಅಧ್ಯಕ್ಷರು, ಪುರಸಭೆ

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

yaksh

Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

jaಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

ಅಭಿವೃದ್ಧಿ ಎಂದರೆ ಏನೆಂದು ತೋರಿಸಲು ಈ ಬಾರಿ ಅವಕಾಶ ಕೊಡಿ: ಜೆ.ಪಿ. ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.