ಬೇರೆಡೆ ವಾರಾಹಿ ನೀರು ಪೂರೈಕೆಗೆ ಅಪಸ್ವರ

 ಕಾರ್ಕಳ- ಕುಡಿಯುವ ನೀರಿಗೆ 1,215 ಕೋ.ರೂ, ಕೃಷಿಗೆ 108 ಕೋ.ರೂ.

Team Udayavani, Feb 11, 2022, 6:05 PM IST

ಬೇರೆಡೆ ವಾರಾಹಿ ನೀರು ಪೂರೈಕೆಗೆ ಅಪಸ್ವರ

ಕುಂದಾಪುರ: ಕಳೆದ 42 ವರ್ಷಗಳಿಂದ ಉಡುಪಿ ಜಿಲ್ಲೆಯ ಜನತೆಗೆ, ಕೃಷಿಗೆ ನೀರುಣಿಸುವ ವಾರಾಹಿ ನೀರಾವರಿ ಯೋಜನೆಯೇ ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೂ ಮುನ್ನ ಉಡುಪಿ, ಹೆಬ್ರಿ, ಕಾರ್ಕಳ ತಾಲೂಕಿಗೂ ನೀರು ಹರಿಸಲು ಮುಂದಾಗಿದೆ. ಇದಕ್ಕಾಗಿ 1,215 ಕೋ.ರೂ. ಬಿಡುಗಡೆಯಾಗಿದೆ. ಯೋಜನೆ ಪೂರ್ಣವಾಗುವ ಮೊದಲು ಎಲ್ಲೆಡೆ ನೀರು ಕೊಂಡೊಯ್ಯುವುದಕ್ಕೆ ರೈತರ ಅಪಸ್ವರ ಕೇಳಿ ಬಂದಿದೆ.

ಕಾರ್ಕಳ, ಹೆಬ್ರಿಗೆ
ವಾರಾಹಿ ನೀರನ್ನು ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ಜನರಿಗೆ ನೀಡುವ ಸಲುವಾಗಿ 1,215 ಕೋ.ರೂ. ಮಂಜೂರಾಗಿದೆ. 60 ಸಾವಿರ ಮನೆಗಳಿಗೆ 359 ಓವರ್‌ಹೆಡ್‌ ಟ್ಯಾಂಕ್‌ಗಳನ್ನು ನಿರ್ಮಿಸಿ 1,115 ಜನವಸತಿ ಪ್ರದೇಶಕ್ಕೆ ಸರಬರಾಜು ಮಾಡುವ ಗುರಿ ಇದೆ.

ಕುಂದಾಪುರಕ್ಕೆ
ಜಪ್ತಿಯಿಂದ ಕುಂದಾಪುರ ಪುರಸಭೆ ವ್ಯಾಪ್ತಿ, 7 ಗ್ರಾ.ಪಂ.ಗಳ ಜನರಿಗೆ ಶುದ್ಧ ಕುಡಿಯುವ ನೀರು ದೊರೆಯುತ್ತಿದೆ.
ಸೌಕೂರು: 1,350 ಹೆ.ಗೆ ನೀರು ವಾರಾಹಿ ನದಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಗುಡ್ಡೆಕೊಪ್ಪದಲ್ಲಿ ಹುಟ್ಟಿ ಪಶ್ಚಿಮಾಭಿಮುಖವಾಗಿ 88 ಕಿ.ಮೀ. ಹರಿದು ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪ ಅರಬಿ ಸಮುದ್ರ ಸೇರುತ್ತದೆ. ಈ ನದಿ ಪಾತ್ರದಲ್ಲಿ ಲಭ್ಯವಿರುವ ನೀರನ್ನು ಸಮರ್ಪಕವಾಗಿ ಬಳಸುವ ಉದ್ದೇಶದಿಂದ ತಾಲೂಕಿನ ಬಳ್ಕೂರು ಎಂಬಲ್ಲಿ ನದಿಗೆ ಅಡ್ಡಲಾಗಿ ಉಪ್ಪು ನೀರು ತಡೆ ಅಣೆಕಟ್ಟು ರಚಿಸಲಾಗಿದೆ.  ಸೌಕೂರು ಗ್ರಾಮದ ಹತ್ತಿರ ಜಾಕ್ವೆಲ್‌ ನಿರ್ಮಿಸಿ 0.589 ಟಿಎಂಸಿ ನೀರನ್ನು ಏರು ಕೊಳವೆ ಮುಖಾಂತರ ಹರಿಸಿ 1,350 ಹೆ. ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಸೌಕೂರು ಏತ ನೀರಾವರಿ ಯೋಜನೆ ಚಾಲನೆಯಲ್ಲಿದೆ. 81 ಕೋ.ರೂ.ಗಳ ಈ ಯೋಜನೆಯಲ್ಲಿ 8 ಗ್ರಾಮಗಳ ಕೃಷಿಗೆ ನೀರು ದೊರೆಯುತ್ತದೆ. ಪ್ರಸ್ತುತ ಕಾಮಗಾರಿಯಡಿ ಡೆಲಿವರಿ ಚೇಂಬರ್‌, ಜಾಕ್ವೆಲ್‌ ಕಂ ಪಂಪ್‌ಹೌಸ್‌ ನಿರ್ಮಾಣ ಅಂತಿಮ ಘಟ್ಟ ತಲುಪಿದ್ದು ಚೆಕ್‌ ಡ್ಯಾಂ, ರೈಸಿಂಗ್‌ ಮೇನ್‌, ಗ್ಯಾನಿಟಿ ಮೇನ್‌, ಸಬ್‌ಸ್ಟೇಶನ್‌ ಕಾಮಗಾರಿ ಪ್ರಗತಿಯಲ್ಲಿದೆ. ಪ್ರಸ್ತುತ ಯೋಜನೆಯಡಿ ಕಾಮಗಾರಿಗೆ 22.26 ಕೋ.ರೂ. ವ್ಯಯವಾಗಿದೆ.

ಉಡುಪಿಗೆ
ಉಡುಪಿ ನಗರಕ್ಕೆ ಕೊಳವೆ ಮೂಲಕ ವಾರಾಹಿ ನೀರು ಒದಗಿಸುವ 282 ಕೋ.ರೂ. ಅಮೃತ ಯೋಜನೆಯೂ ನಡೆಯುತ್ತಿದೆ. ಪೈಪ್‌ಲೈನ್‌ ಹಾದು ಹೋಗುವ ಗ್ರಾ.ಪಂ.ಗಳಿಗೆ ಶುದ್ಧನೀರು ಕೊಡುವ ಶರತ್ತಿನ ಮೇಲೆ ವಿಧಾನಸಭೆ ಅರ್ಜಿ ಸಮಿತಿ ಮೂಲಕ ರೈತಸಂಘದ ತಕರಾರು ಅರ್ಜಿ ಇತ್ಯರ್ಥಗೊಂಡು ಕಾಮಗಾರಿ ನಡೆಯುತ್ತಿದೆ.
ಕಾರ್ಕಳದ ಅಜೆಕಾರು ಗ್ರಾಮದ ಬಳಿ ವೆಂಟೆಡ್‌ ಡ್ಯಾಂ ನಿರ್ಮಿಸಿ ಬ್ಯಾರೇಜ್‌ ಹತ್ತಿರ ಏತ ನೀರಾವರಿ ರೂಪಿಸಿ ಏರುಕೊಳವೆಗಳ ಮೂಲಕ ನೀರಾವರಿ ಸೌಲಭ್ಯ ಒದಗಿಸುವ ಎಣ್ಣೆಹೊಳೆ ಏತ ನೀರಾವರಿ ಯೋಜನೆ ಸಾಕಾರಗೊಳ್ಳಲಿದೆ. 1 ಕ್ಯೂಸೆಕ್ಸ್‌ ನೀರನ್ನು ಏರುಕೊಳವೆಗಳ ಮೂಲಕ ಹರಿಸಿ 1,500 ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುತ್ತದೆ. 108 ಕೋಟಿ ರೂ. ಯೋಜನೆಗೆ ಆಡಳಿತಾತ್ಮಕ ಅನುಮೋದನೆ ದೊರಕಿದ್ದು ಟರ್ನ್ಕೀ ಆಧಾರದ ಮೇಲೆ 113.65 ಕೋಟಿ ರೂ.ಗೆ ಕಾಮಗಾರಿ ವಹಿಸಿಕೊಡಲಾಗಿದೆ.

ವಾರಾಹಿ ಮೇಲೆ ಕಣ್ಣು
ಜಿಲ್ಲೆಯಲ್ಲಿ ಹಲವಾರು ತುಂಬಿ ಹರಿಯುವ ನದಿಗಳಿರುವಾಗ ಎಲ್ಲರ ಕಣ್ಣು ವಾರಾಹಿ ನದಿ ಮೇಲೆ ಏಕೆ ಎಂದು ರೈತ ಸಂಘ ಪ್ರಶ್ನಿಸಿದೆ. ಸ್ವರ್ಣ, ಸೀತಾ, ಮಡಿಸಾಲು ಮುಂತಾದ ತುಂಬಿ ಹರಿಯುವ ನದಿಗಳು ಇರುವಾಗ ಜಿಲ್ಲೆಯ ಕುಡಿಯುವ ನೀರಿನ ಹೆಸರಿನಲ್ಲಿ ವಾರಾಹಿ ನದಿ ನೀರನ್ನು ಬೇರೆಡೆಗೆ ಕೊಂಡೊಯ್ಯುವ ಯೋಜನೆಗಳ ಹಿಂದೆ ವಾರಾಹಿ ನೀರಾವರಿ ಮೂಲ ಯೋಜನೆಯನ್ನು ಹಳ್ಳ ಹಿಡಿಸುವ ಷಡ್ಯಂತ್ರವಿದೆ ಎಂಬ ಆರೋಪವಿದೆ.

1979ರಲ್ಲಿ ಆರಂಭ
1979ರಲ್ಲಿ ಆರಂಭವಾಗಿ ಕುಂಟುತ್ತಾ ಸಾಗಿ ಎಡದಂಡೆಯಷ್ಟೇ ದೊರೆತಿದೆ. ಬಲದಂಡೆ ಪ್ರಗತಿಯ
ಲ್ಲಿದೆ. ಜಿಲ್ಲೆಯ 38,800 ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಕುಂದಾಪುರ ಹಾಗೂ ಉಡುಪಿ ತಾಲೂಕನ್ನು ಕೇಂದ್ರೀಕರಿಸಿ ಆರಂಭಿಸಲಾಗಿತ್ತು. 9.43 ಕೋ.ರೂ.ಗಳಲ್ಲಿ ಆರಂಭವಾದ ಯೋಜನೆ 650 ಕೋ. ರೂ.ಗೆ ತಲುಪಿದೆ.

ರೈತ ವಿರೋಧಿ ಕ್ರಮ
ಎಡ ದಂಡೆ, ಬಲ ದಂಡೆ, ಏತ ನೀರಾವರಿ ವ್ಯಾಪ್ತಿಯ 15 ಸಾವಿರ ಹೆ.ಗೆ ಇನ್ನೂ ನೀರು ಹಾಯಿಸದೆ ಬೇರೆ ಬೇರೆ ಹೆಸರಿನಲ್ಲಿ ವಾರಾಹಿ ನೀರನ್ನು ಕೊಂಡೊಯ್ಯುವುದು ರೈತ ವಿರೋಧಿ ಕ್ರಮ.
-ಕೆ. ವಿಕಾಸ್‌ ಹೆಗ್ಡೆ ,ಉಡುಪಿ ಜಿಲ್ಲಾ ರೈತ ಸಂಘದ ಜಿಲ್ಲಾ ವಕ್ತಾರ

-ಲಕ್ಷ್ಮೀ ಮಚ್ಚಿನ

ಟಾಪ್ ನ್ಯೂಸ್

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eqewqe

JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

Udupi: ಅನುಮತಿಯಿಲ್ಲದೆ ಪೋಸ್ಟರ್‌ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್

1-qwewweq

K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ 

1-BVR-1

Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.