ಒಳಗಣ್ಣಿಂದಲೇ ಜಗತ್ತನ್ನು ಗೆಲ್ಲುವ ಹಂಬಲ

ಸಹಾಯ ಹಸ್ತ ಸಿಕ್ಕರೆ ರಜನಿ ಶಿಕ್ಷಕಿಯಾಗುತ್ತಾಳೆ !

Team Udayavani, Apr 23, 2019, 6:27 AM IST

olagannu

ಕುಂದಾಪುರ: ಸಾಧನೆಗೆ ವೈಕಲ್ಯ ಶಾಪವಲ್ಲ ಎನ್ನುವ ಆಕೆಯ ದಿಟ್ಟ ನಿರ್ಧಾರದ ಮುಂದೆ ಅಂಧತ್ವ ಸೋತು ಮಂಡಿಯೂರಿದೆ.

ಅಂಧಳಾಗಿ ಬಡ ಕುಟುಂಬದಲ್ಲಿ ಜನಿಸಿದರೂ ಕಷ್ಟವನ್ನು ಮೆಟ್ಟಿನಿಂತು, ದ್ವಿತೀಯ ಪಿಯು ಪರೀಕ್ಷೆಯಲ್ಲಿ ಶೇ. 70 ಅಂಕಗಳೊಂದಿಗೆ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದವಳು ರಜನಿ ಭಂಡಾರಿ. ಕುಂದಾಪುರದ ಕುಂದಬಾರಂದಾಡಿ ಗ್ರಾಮದ ಮಾಣಿಕೊಳಲು ನಿವಾಸಿ ಶಂಕರ ಭಂಡಾರಿ ಮತ್ತು ಜ್ಯೋತಿ ದಂಪತಿಯ ಪುತ್ರಿ ಈಕೆ.

ರಜನಿ ಶಾಲೆಗೆ ದಾಖಲಾಗಿದ್ದೇ ಇಲ್ಲ. ಹಕ್ಲಾಡಿ ಶಾಲೆಯಲ್ಲಿ ತರಗತಿಗಷ್ಟೇ ಹಾಜರಾಗುತ್ತಿದ್ದಳು. 3-4ನೇ ತರಗತಿಯನ್ನು ಮಂಗಳೂರಿನ ಚಿಲಿಂಬಿಯ ರೋಮನ್‌ ಕ್ಯಾಥಲಿನ್‌ ಸಂಸ್ಥೆಯಲ್ಲಿ ಓದಿದಳು. 9 ಮತ್ತು 10ನೇ ತರಗತಿಯನ್ನು ಬೆಂಗಳೂರಿನ ಶೇಷಾದ್ರಿಪುರಂನ “ದ ಕರ್ನಾಟಕ ಅಸೋಸಿಯೇಶನ್‌ ಆಫ್‌ ಬ್ಲೆ„ಂಡ್‌’ ಎನ್ನುವ ವಿಶೇಷ ಸಂಸ್ಥೆಯಲ್ಲಿ ಮುಗಿಸಿದಳು.

ಎಸೆಸೆಲ್ಸಿಯಲ್ಲಿ ಶೇ. 55 ಅಂಕ ಗಳಿಸಿದ ಈಕೆ, ಪಿಯು ಶಿಕ್ಷಣವನ್ನು ರಾಜಾಜಿನಗರದಲ್ಲಿರುವ ಶ್ರೀ ಹೊಂಬೆಗೌಡ ಪ.ಪೂ. ಕಾಲೇಜಿನಲ್ಲಿ ಪಡೆದಳು. ಪಿಯು ವಾರ್ಷಿಕ ಪರೀಕ್ಷೆಯನ್ನು ಸಹಾಯಕರ ನೆರವಿನಿಂದ ಆಂಗ್ಲ ಮಾಧ್ಯಮದಲ್ಲಿ ಉತ್ತರಿಸಿ ಶೇ. 70 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ಉತ್ತೀ ರ್ಣಳಾಗಿದ್ದಾಳೆ. ಪ್ರಾಥಮಿಕ -ಪ್ರೌಢ ಶಿಕ್ಷಣವನ್ನು ಸಾಂಪ್ರದಾಯಿಕ ರೀತಿಯಲ್ಲಿ ಪಡೆಯದೆ ಇದ್ದರೂ ಅದೊಂದು ಸಮಸ್ಯೆಯೇ ಅಲ್ಲ ಎಂಬಂತೆ ಈಕೆ ಸಾಧನೆ ಮಾಡಿರುವುದು ವಿಶೇಷ.

ಬಡ ಕುಟುಂಬ
ತಂದೆ ಶಂಕರ ಭಂಡಾರಿ ಗ್ರಾಮೀಣ ಪ್ರದೇಶವಾದ ಕುಂದಬಾರಂದಾಡಿಯಲ್ಲಿ ಸಣ್ಣ ಕೌÒರದ ಅಂಗಡಿ ಹೊಂದಿದ್ದಾರೆ. ಮಗಳನ್ನು ಚೆನ್ನಾಗಿ ಓದಿಸಬೇಕು ಎನ್ನುವ ಮಹದಾಸೆಯಿದ್ದರೂ ಹಣ ಹೊಂದಿಸುವುದು ಸಮಸ್ಯೆಯಾಗಿತ್ತು. ತಾಯಿ ಗೃಹಿಣಿ. ಸಹೋದರ ರಂಜಿತ್‌ ಕೂಡ ಅಂಧರಾಗಿದ್ದು, ದ್ವಿತೀಯ ಪಿಯುಸಿವರೆಗೆ ಓದಿದ್ದಾರೆ.

ಉಪನ್ಯಾಸಕಿಯಾಗುವ ಕನಸು
ಬಿಎ, ಬಿಎಡ್‌ ಪೂರೈಸಿ ಉಪನ್ಯಾಸಕಿಯಾಗುವ ಬೆಟ್ಟ ದಂತಹ ಕನಸು ರಜನಿ ಅವರದ್ದು. ಆದರೆ ಅದಕ್ಕೆ ವೈಕಲ್ಯಕ್ಕಿಂತಲೂ ಹಣಕಾಸಿನ ಸಮಸ್ಯೆಯೇ ಅಡ್ಡಿ
ಯಾಗಿದೆ. ಆರಂಭದಲ್ಲಿ ಬೆಂಗಳೂರಿನ ಬಸ್‌ಗಳಲ್ಲಿ ಓಡಾಡುವುದು ಕಷ್ಟವಾಗುತ್ತಿತ್ತು. ಅದಕ್ಕೆ ಕಾಲೇಜು ಸಮೀಪವೇ ದಾನಿಯೊಬ್ಬರ ನೆರವಿನಿಂದ ಪಿಜಿಗೆ ಸೇರಿಕೊಂಡೆ ಎನ್ನುತ್ತಾರೆ ರಜನಿ.

ಬಿಎ ಕಲಿಯುವೆ
10ನೇ ತರಗತಿಯ ವರೆಗೆ ಮಾತ್ರ ನಮಗೆ ವಿಶೇಷ ಶಾಲೆಗಳಿರುತ್ತವೆ. ನಾನು ಸೇರಿದ ರಾಜಾಜಿನಗರದ ಕಾಲೇಜಿನಲ್ಲಿ ನಾನೊಬ್ಬಳೇ ಅಂಧಳು. ಹಾಗಾಗಿ ಮೊದಲಿಗೆ ಕಷ್ಟವಾಗುತ್ತಿತ್ತು. ಸ್ನೇಹಿತರೆಲ್ಲ ಸಹಾಯ ಮಾಡಿದರು. ಪದವಿಯನ್ನೂ ಅಲ್ಲೇ ಪೂರೈಸುವೆ.
– ರಜನಿ ಭಂಡಾರಿ

ಅವಕಾಶ ನೀಡಲಿ
ನಮ್ಮ ಸಂಸ್ಥೆಯಿಂದ ಸಾಧ್ಯವಾದಷ್ಟು ಸಹಾಯ ಮಾಡಿದ್ದೇವೆ. ಆಕೆಗೆ ಉನ್ನತ ವ್ಯಾಸಂಗದ ಕನಸಿದೆ. ಯಾವುದಾದರೂ ಶಿಕ್ಷಣ ಸಂಸ್ಥೆ ಆಕೆಯನ್ನು ದತ್ತು ಪಡೆದು ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದರೆ ಅನುಕೂಲ.
– ಬನ್ನಂಜೆ ಗೋವಿಂದ ಭಂಡಾರಿ, ಸವಿತಾ ಸಮಾಜದ ಮಾಜಿ ಅಧ್ಯಕ್ಷರು

ಟಾಪ್ ನ್ಯೂಸ್

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

Rain ಕರಾವಳಿಯ ವಿವಿಧೆಡೆ ಗಾಳಿ ಸಹಿತ ಉತ್ತಮ ಮಳೆ

1-pak

Pak ಆತ್ಮಾಹುತಿ ದಾಳಿ: ಐವರು ಜಪಾನೀಯರು ಪಾರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-congress

Udupi-ಚಿಕ್ಕಮಗಳೂರಿನಲ್ಲಿ ಬಿಜೆಪಿಗರೂ ಜೆಪಿ-ಜೆಪಿ ಎನ್ನುತ್ತಿದ್ದಾರೆ: ನಿಕೇತ್‌ರಾಜ್‌ ಮೌರ್ಯ

7

Kundapur: ಬೈಕ್‌ ಢಿಕ್ಕಿ; ಸ್ಕೂಟರ್‌ ಸವಾರೆಗೆ ಗಾಯ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

ಚಿಕ್ಕಮಗಳೂರು-ಉಡುಪಿ ಕ್ಷೇತ್ರ: ಜನಹಿತ ಕಾರ್ಯಕ್ಕೆ ಸದಾ ಬದ್ಧ: ಹೆಗ್ಡೆ

suicide

ಕಾಶ್ಮೀರದಲ್ಲಿ ಗುಂಡು ಹಾರಿಸಿ ಬಿಹಾರ ಕಾರ್ಮಿಕನ ಹತ್ಯೆ  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.