ಚೀನ ವಸ್ತು ಆಮದಿನಿಂದ ಸೋಂಕು? : ಜಾವೇದ್ ಅಖ್ತರ್
Team Udayavani, Apr 1, 2020, 7:00 PM IST
ಬೆಂಗಳೂರು: ವಿದೇಶ ಪ್ರಯಾಣದ ಹಿನ್ನೆಲೆ ಮತ್ತು ಸೋಂಕಿತರೊಂದಿಗೆ ಸಂಪರ್ಕ ಇಲ್ಲದಿದ್ದರೂ ನಂಜನಗೂಡು ಔಷಧ ತಯಾರಿಕೆ ಕಂಪೆನಿ ಉದ್ಯೋಗಿಗೆ ಸೋಂಕು ದೃಢಪಟ್ಟ ಹಿನ್ನೆಲೆ ಕಂಪೆನಿಯು ಚೀನದಿಂದ ಆಮದು ಮಾಡಿಕೊಳ್ಳುತ್ತಿದ್ದ ಕಚ್ಚಾ ವಸ್ತುಗಳ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ ಎಂದು ಆರೋಗ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್ ತಿಳಿಸಿದರು.
ನಂಜನಗೂಡು ಔಷಧ ತಯಾರಿಕೆ ಕಂಪೆನಿಯ ಉದ್ಯೋಗಿಗೆ ಸೋಂಕು ತಗಲಿದ ಬಳಿಕ ಮತ್ತೆ ಕಂಪೆನಿಯ 9 ಮಂದಿಗೆ ಸೋಂಕು ಹರಡಿದೆ. ಸೋಂಕಿನ ಮೂಲದ ಬಗ್ಗೆ ತನಿಖೆ ನಡೆಸಲು ನಿರ್ಧರಿಸಲಾಗಿದೆ ಎಂದರು.
ಐಐಎಸ್ಸಿಯಿಂದ ಪರೀಕ್ಷಾ ಕಿಟ್ ಖರೀದಿ
ಕೊರೊನಾ ಪರೀಕ್ಷಾ ಕಿಟ್ಗಳನ್ನು ಐಐಎಸ್ಸಿ ಅಭಿವೃದ್ಧಿ ಪಡಿಸಿದ್ದು, ಅನುಮೋದನೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆಗೆ ಕಳುಹಿಸಲಾಗಿದ್ದು, ಒಪ್ಪಿಗೆ ಬಳಿಕ ಸರಕಾರ ಪರೀಕ್ಷಾ ಕಿಟ್ಗಳ ಖರೀದಿಸಲಿದೆ ಎಂದರು.
ಶೀಘ್ರವೇ ವೆಂಟಿಲೇಟರ್
ಸರಕಾರ 1,000 ವೆಂಟಿಲೇಟರ್ ಖರೀದಿಗೆ ಚಿಂತಿಸಿದ್ದು, 471 ವೆಂಟಿಲೇಟರ್ಗಾಗಿ ಆರ್ಡರ್ ಮಾಡಿದ್ದೇವೆ. ಈಗಾಗಲೇ 9 ವೆಂಟಿಲೇಟರ್ಗಳು ಬಂದಿದ್ದು ಅಳವಡಿಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ
Sagara: ರಾತ್ರೋ ರಾತ್ರಿ ಅತಿಕ್ರಮ ಮನೆ ನಿರ್ಮಾಣ… ತಹಶೀಲ್ದಾರ್ರಿಂದ ಪರಿಶೀಲನೆ
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ