ರಾಜಧಾನಿಗೆ ತಲುಪಿದ ಕಾರ್ಕಳದ ಹೋಮ್‌ಮೇಡ್‌ ಅಣಬೆ ಬೆಡ್‌

ಒಂದು ಬೆಡ್‌ನಿಂದ ಸುಮಾರು 400 ಗ್ರಾಂ ಅಣಬೆ

Team Udayavani, Oct 23, 2019, 5:42 AM IST

anabe

ಉಡುಪಿ: ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಅಣಬೆ ಕೃಷಿ ತರಬೇತಿ ಪಡೆದ ರವಿ ಅವರ ಹೋಮ್‌ಮೇಡ್‌ ಮಶ್ರೂಮ್‌ ಬೆಡ್‌ಗಳು ರಾಜಧಾನಿ ಜನರ ಮನೆಯ ಕದ ತಟ್ಟಿದೆ.

ಕಾರ್ಕಳದ ರವಿ ಅವರು ಎರಡು ವರ್ಷಗಳ ಹಿಂದೆ ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ಅಣಬೆ ಬೇಸಾಯ ಪದ್ಧತಿ ಕುರಿತು ತರಬೇತಿ ಪಡೆದುಕೊಂಡಿದ್ದರು.
ಮನೆಯಲ್ಲಿ ಬೆಳೆದ ಅಣಬೆಯನ್ನು ಮಾರುಕಟ್ಟೆಗೆ ನೀಡದೆ ನೇರವಾಗಿ ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಕಡಿಮೆ ಬೆಲೆಯಲ್ಲಿ ತಾಜಾ ಮಶ್ರೂಮ್‌ ಹಾಗೂ ಗ್ರಾಹಕರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಅಣಬೆ ಬಯಸುವವರ ಮನೆಗೆ ರವಿ ಅವರು ಖುದ್ದಾಗಿ ತೆರಳಿ ಡೆಲಿವರಿ ಮಾಡುತ್ತಾರೆ. ಇದರಿಂದಾಗಿ ಮಧ್ಯವರ್ತಿಗಳ ಹಾವಳಿ ತಪ್ಪುತ್ತದೆ.

ರಾಜ್ಯಾದ್ಯಂತ ಗ್ರಾಹಕರು
ಈ ಬೆಡ್‌ಗೆ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಗ್ರಾಹಕರು ಇದ್ದಾರೆ. ವಿವಿಧ ದೂರದೂರುಗಳಿಗೆ ಇವರು ಬಸ್‌ಗಳ ಮೂಲಕ ಕಳುಹಿಸುತ್ತಾರೆ. ಮಶ್ರೂಮ್‌ ಬೆಡ್‌ ಗ್ರಾಹಕರ ಮನೆಗೆ ತಲುಪಿದ 10 ದಿನದೊಳಗೆ ಕಟಾವಿಗೆ ಸಿದ್ಧವಾಗುತ್ತದೆ. ಬೆಳೆ ಹೊರ ಬಂದ ಮೂರು ದಿನಗಳ ವರೆಗೆ ಮಶ್ರೂಮ್‌ ತನ್ನ ತಾಜಾತನವನ್ನು ಕಾಯ್ದುಕೊಳ್ಳುತ್ತದೆ. ಒಂದು ಬೆಡ್‌ನಿಂದ ಸುಮಾರು 400 ಗ್ರಾಂ ಅಣಬೆ ಪಡೆಯಬಹುದಾಗಿದೆ.

ತಯಾರಿ ಹೇಗೆ?
ರವಿ ಅವರು ಮಶ್ರೂಮ್‌ ಬೆಡ್‌ ಮನೆಯಲ್ಲಿ ತಯಾರಿಸುತ್ತಾರೆ. ಪ್ಲಾಸ್ಟಿಕ್‌ ಬ್ಯಾಗ್‌ನಲ್ಲಿ ಭತ್ತದ ಹುಲ್ಲು ತುಂಬಿ ಅದರ ತುದಿಯಲ್ಲಿ ಅಣಬೆ ಬೀಜ ಹಾಕುತ್ತಾರೆ. ಒಂದು ಬೆಡ್‌ಗೆ ಸುಮಾರು 100 ಗ್ರಾಂ. ಬೀಜ ಬಳಸಲಾಗುತ್ತದೆ. ಅನಂತರ ಬ್ಯಾಗಿನ ಕೆಳಗೆ ಮತ್ತು ಸುತ್ತ 4-5 ರಂಧ್ರ ಮಾಡಿ ಮೂರು ವಾರ ಹಾಗೆ ಬಿಡಲಾಗುತ್ತದೆ. 21ನೇ ದಿನದ ಗ್ರಾಹಕರಿಗೆ ಮನೆಗಳಿಗೆ ತಲುಪಿಸಲಾಗುತ್ತದೆ.

ಹೆಚ್ಚಿದ ಬೇಡಿಕೆ
ಹೋಮ್‌ ಮೇಡ್‌ ಮಶ್ರೂಮ್‌ ಬೆಡ್‌ ಕಳೆದ ಒಂದು ವರ್ಷದಲ್ಲಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದೆ. ತಿಂಗಳಿಗೆ ಸುಮಾರು 1000 ಮಶ್ರೂಮ್‌ ಬೆಡ್‌ ಮಾರಾಟವಾಗುತ್ತಿದೆ.

ಏನೆಲ್ಲ ಬೇಕು?
ಭತ್ತದ ಹುಲ್ಲನ್ನು 3-4 ಇಂಚು ಉದ್ದ ಕತ್ತರಿಸಿ ತಣ್ಣೀರಿನಲ್ಲಿ ನೆನೆಸಬೇಕು. ಹಲ್ಲು ಸೋಂಕು ತಪ್ಪಿಸಲು ಬಿಸಿ ನೀರಿನಲ್ಲಿ ಅರ್ಧ ಗಂಟೆ ಕುದಿಸಬೇಕು. ಕುದಿಸಲಾದ ಹುಲ್ಲನ್ನು ಸಂಪೂರ್ಣವಾಗಿ ನೆರಳಿನಲ್ಲಿ ಒಣಗಿಸಬೇಕು. ಇದು ಅಣಬೆ ಹುಲುಸಾಗಿ ಬೆಳೆಯಲು ಇದು ಸಹಕಾರಿ.

ಏನೆಲ್ಲ ತಯಾರಿಸಬಹುದು?
ಅಣಬೆಯನ್ನು ಬಳಸಿ ಬಾಯಲ್ಲಿ ನೀರೂರಿಸುವ ರುಚಿಕಟ್ಟಾದ ಪದಾರ್ಥಗಳನ್ನು ತಯಾರಿಸಬಹುದು. ಅಣಬೆ ಕರಿ, ಬಿರಿಯಾನಿ, ಸೂಪ್‌, ಪಕೋಡ, ಪಲಾವ್‌, ಮೊಟ್ಟೆ ಪಲ್ಯ, ಟೊಮೆಟೋ ಕರಿ, ಕಟ್ಲೆಟ್‌, ಅಣಬೆ ಪಾಯಸ, ಅಷ್ಟೇ ಏಕೆ ಅಣಬೆ ಉಪ್ಪಿನ ಕಾಯಿಯನ್ನೂ ತಯಾರಿಸಬಹುದು.

ಬಾಳೆ ಎಲೆ ಪ್ಯಾಕ್‌!
ಬ್ರಹ್ಮಾವರ ಕೃಷಿ ಕೇಂದ್ರದಲ್ಲಿ ತರಬೇತಿಯನ್ನು ಪಡೆದುಕೊಂಡು ಹೋಮ್‌ಮೇಡ್‌ ಮಶ್ರೂಮ್‌ ತಯಾರಿಸಲಾಗುತ್ತಿದೆ. ಒಮ್ಮೆ ಖರೀದಿಸಿದ ಗ್ರಾಹಕರು ಇನ್ನೊಬ್ಬ ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ. ಇದರಿಂದ ವ್ಯಾಪಾರ ವೃದ್ಧಿಸುತ್ತಿದೆ. ಊರ ಸಮೀಪದ ಮನೆಗಳಿಗೆ ಮಶ್ರೂಮ್‌ ನೀಡುವ ಬಾಳೆ ಎಲೆಯಲ್ಲಿ ಪ್ಯಾಕ್‌ ಮಾಡಿ ಡೆಲಿವರಿ ಮಾಡಲಾಗುತ್ತದೆ. ಮಶ್ರೂಮ್‌ ಬೀಜಗಳನ್ನು ಬೆಂಗಳೂರಿನಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
– ರವಿ , ಮಶ್ರೂಮ್‌ ಬೆಡ್‌ ತಯಾರಕ

ಟಾಪ್ ನ್ಯೂಸ್

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

4-annamalai

Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.