ಮನೆಯೇ ಚಿತ್ರಾಲಯ


Team Udayavani, Apr 6, 2020, 5:42 PM IST

ಮನೆಯೇ ಚಿತ್ರಾಲಯ

ಲಾಕ್‌ಡೌನ್‌ನ ಕಾರಣದಿಂದಾಗಿ, ಹೊಸ ಚಿತ್ರಗಳು ಬಿಡುಗಡೆಯಾಗಿಲ್ಲ. ಈ ಚಿತ್ರಗಳ ನಿರ್ಮಾಪಕರಿಗೆ, ಮಾರುಕಟ್ಟೆಯ ಕುರಿತು ಆತಂಕವಿದೆ. ಹೀಗಾಗಿ, ಆ ಸಿನಿಮಾಗಳು ಆನ್‌ ಲೈನ್‌ ಮನರಂಜನಾ ತಾಣಗಳಲ್ಲೇ ಮೊದಲು ಬಿಡುಗಡೆಯಾಗುವ ಸಾಧ್ಯತೆ ಗೋಚರಿಸುತ್ತಿದೆ.

 

ಲಾಕ್‌ಡೌನ್‌ ಆಗಿರುವ ಈ ಸಮಯದಲ್ಲಿ, ಮನೆಯಲ್ಲೇ ಕೂತು ಮನರಂಜನೆ ಪಡೆಯುವುದು ಅನಿವಾರ್ಯ. ಈ ಕಾರಣದಿಂದ, ಆನ್‌ ಲೈನ್‌ ಮನರಂಜನಾ ತಾಣ (ಓಟಿಟಿ- ಓವರ್‌ ದಿ ಟಾಪ್‌ ಸೇವೆ) ಗಳಾದ ಅಮೇಜಾನ್‌ ಪ್ರೈಮ್, ನೆಟ್‌ಫ್ಲಿಕ್ಸ್, ಝೀ 5, ಹಾಟ್‌ ಸ್ಟಾರ್‌ಗಳ ಚಂದಾದಾರರು ಶೇ.20ರಷ್ಟು ಹೆಚ್ಚಾಗಿದ್ದಾರೆ. ಇಷ್ಟು ದಿನ ಕೇವಲ ಒಂದು ವರ್ಗದ ಮಂದಿ ಮಾತ್ರವೇ ಓ.ಟಿ.ಟಿ. ತಾಣಗಳಿಗೆ ಚಂದಾದಾರರಾಗುತ್ತಿದ್ದರು. ಲಾಕ್‌ ಡೌನ್‌ನಿಂದಾಗಿ, ಇತರೆ ವರ್ಗಗಳ ಮಂದಿಯೂ ಈ ತಾಣಗಳ ಕಡೆ ಮುಖ ಮಾಡುವ ಸಾಧ್ಯತೆ ಇದೆ. ಪರಿಣಾಮ, ಹೊಸದೊಂದು ಶಕೆಗೆ ಮನರಂಜನಾ ಉದ್ಯಮ ಸಾಕ್ಷಿಯಾಗುವ ಲಕ್ಷಣ ಕಾಣಿಸುತ್ತಿದೆ.

ಲಾಕ್‌ಡೌನ್‌ ಆಗುವ ಸೂಚನೆ ಯಾರಿಗೂ ಇರಲಿಲ್ಲ. ಹಾಗಾಗಿ, ಬಹಳಷ್ಟು ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಗೆ ಸಿದ್ಧವಾಗಿದ್ದವು. ಅವೆಲ್ಲವೂ ಬಿಡುಗಡೆಗೆ ಕಾದು ಕುಳಿತಿವೆ. ಮೊದಲನೆಯದಾಗಿ, ಲಾಕ್‌ಡೌನ್‌ ಯಾವಾಗ ಮುಗಿಯುತ್ತದೆ ಎನ್ನುವುದರ ಬಗ್ಗೆ ಯಾರಿಗೂ ಖಚಿತ ಮಾಹಿತಿ ಇಲ್ಲ. ಲಾಕ್‌ಡೌನ್‌ ಕೊನೆಗೊಂಡರೂ, ಜನರು ಚಿತ್ರಮಂದಿರಗಳತ್ತ ತಲೆಹಾಕುವರೇ ಎನ್ನುವ ಅನುಮಾನವೂ ಇದೆ.

ಮನೆಯಲ್ಲೇ ಗ್ರ್ಯಾಂಡ್‌ ರಿಲೀಸ್‌ : ಇವೆಲ್ಲದರಿಂದಾಗಿ, ಚಿತ್ರ ನಿರ್ಮಾಪಕರಿಗೆ ಮಾರುಕಟ್ಟೆಯ ಕುರಿತು ಆತಂಕವಿದೆ. ಹೀಗಾಗಿ, ಆ ಸಿನಿಮಾಗಳು ಆನ್‌ಲೈನ್‌ ಮನರಂಜನಾ ತಾಣಗಳಲ್ಲೇ ಮೊದಲು ಬಿಡುಗಡೆಯಾಗುವ ಸಾಧ್ಯತೆಯೂ ಗೋಚರಿಸುತ್ತಿದೆ. ಹಾಲಿವುಡ್ಡಿನಲ್ಲಿ ಈಗಾಗಲೇ 16 ಸಿನಿಮಾಗಳು ಆನ್‌ ಲೈನ್‌ನಲ್ಲಿ ಮೊದಲು ಬಿಡುಗಡೆಯಾಗುವ ಮೂಲಕ ಈ ಶಕೆಗೆ ಮುನ್ನುಡಿ ಬರೆದಿವೆ. ದೇಶಿ ಸಿನಿಮಾ ಉದ್ಯಮ ಕೂಡಾ ಈ ಹಾದಿಯಲ್ಲಿ ನಡೆದರೆ ಅಚ್ಚರಿಯೇನಿಲ್ಲ. ಅಂಥದೊಂದು ಸಂದರ್ಭ ಬಂದರೆ, ಮುಖ್ಯವಾಹಿನಿ ಸಿನಿಮಾಗಳ ಗ್ರ್ಯಾಂಡ್‌ ರಿಲೀಸನ್ನು ಮನೆಮಂದಿಯೊಂದಿಗೆ ವೀಕ್ಷಿಸಬಹುದು. ಮನೆಯೇ ಚಿತ್ರಾಲಯಾಗುವ ಬದಲಾವಣೆ ಇಲ್ಲಿಂದಲೇ ಶುರುವಾಗಬಹುದು.

ಹೊಸ ಸಿನಿಮಾಗಳ ಆನ್‌ಲೈನ್‌ ಹಕ್ಕುಗಳನ್ನು ಪಡೆದುಕೊಳ್ಳುವ ರೇಸಿನಲ್ಲಿ, ಅಮೇಜಾನ್‌ ಪ್ರೈಮ್‌ ಮುಂಚೂಣಿಯಲ್ಲಿದೆ. ಸಾಮಾನ್ಯವಾಗಿ, ಬಾಲಿವುಡ್‌ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ 8 ವಾರಗಳ ನಂತರ, ಆನ್‌ಲೈನಿನಲ್ಲಿ ಬಿಡುಗಡೆಯಾಗುತ್ತವೆ. ಕನ್ನಡ, ತಮಿಳು, ತೆಲುಗು ಮುಂತಾದ ಪ್ರಾದೇಶಿಕ ಭಾಷೆಗಳ ಸಿನಿಮಾಗಳು, ನಾಲ್ಕೈದು ವಾರಗಳ ನಂತರ ಆನ್‌ಲೈನಿನಲ್ಲಿ ಬಿಡುಗಡೆ ಕಾಣುತ್ತಿವೆ. ಚಿತ್ರಮಂದಿರ ಮತ್ತು ಆನ್‌ಲೈನ್‌ ಬಿಡುಗಡೆಯ ನಡುವಿನ ಅಂತರ ತಗ್ಗಿದರೆ ಚಂದಾದಾರರ ಸಂಖ್ಯೆ ಹೆಚ್ಚುವು ದರಲ್ಲಿ ಅನುಮಾನವಿಲ್ಲ.

ಟಿ.ವಿ., ಕಂಪ್ಯೂ ಟರ್‌, ಸ್ಮಾರ್ಟ್ ಫೋನ್‌ ಪರದೆ ಮೇಲೆ ಸಿನಿಮಾ ನೋಡುವುದರಿಂದ ಚಿತ್ರಮಂದಿರಗಳಿಗೆ ಹೊಡೆತ ಬೀಳುತ್ತದೆ ಎಂಬುದು, ಇದೇ ಸಂದರ್ಭದಲ್ಲಿ ಕೇಳಿಸುತ್ತಿರುವ ಮಾತು. ಈ ಸಂಬಂಧವಾಗಿ ಚರ್ಚೆಗಳು ನಡೆಯುತ್ತಾ ಇವೆ. ಖ್ಯಾತ ಹಾಲಿವುಡ್‌ ನಿರ್ದೇಶಕ ಕ್ವೆಂಟಿನ್‌ ಟರಾಂಟಿನೋ ಹೇಳುವಂತೆ, “ಒಂದು ಸಿನಿಮಾದ ನೀಡುವ ಅನುಭವವನ್ನು ಪಡೆಯಬೇಕೆಂದರೆ, ಸಿನಿಮಾಮಂದಿರದಲ್ಲಿ ವೀಕ್ಷಿಸುವುದೊಂದೇ ಮಾರ್ಗ’. ಹೀಗಾಗಿ, ಹೊಸ ಬದಲಾವಣೆಯಿಂದ, ಸಿನಿಪ್ರಿಯರ ಮಧ್ಯೆ ಕುಳಿತು ಸಿನಿಮಾ ನೋಡುವ ಅನುಭವದಿಂದ ವಂಚಿತರಾಗುವ ಬೇಸರವೂ ಇದೆ. ­

 

 

– ಹವನ

ಟಾಪ್ ನ್ಯೂಸ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

18

ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

ತಾಳಿಭಾಗ್ಯ ಯೋಜನೆ ತಂದ ಕಾಂಗ್ರೆಸ್ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

ತಾಳಿಭಾಗ್ಯ ಯೋಜನೆ ತಂದ ‘ಕಾಂಗ್ರೆಸ್’ ಕಿತ್ತುಕೊಳ್ಳುವ ಕೆಲಸ ಎಂದೂ ಮಾಡಲ್ಲ: H.K. Patil

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!

Mumbai Airport: ನ್ಯೂಡಲ್ಸ್‌ ಪ್ಯಾಕೇಟ್‌ ನೊಳಗೆ ಕೋಟ್ಯಂತರ ಮೌಲ್ಯದ ವಜ್ರ ಕಳ್ಳಸಾಗಣೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

ಕೇಜ್ರಿವಾಲ್‌, ಕವಿತಾಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಸ್ತರಣೆ: ದೆಹಲಿ ಕೋರ್ಟ್

Team India; Not Hardik; Bhajji has suggested the name of Team India’s next T20 captain

Team India; ಹಾರ್ದಿಕ್ ಅಲ್ಲ; ಟೀಂ ಇಂಡಿಯಾದ ಮುಂದಿನ ಟಿ20 ನಾಯಕನ ಹೆಸರು ಸೂಚಿಸಿದ ಭಜ್ಜಿ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

ಬಿಜೆಪಿ ದಲಿತರ ಪರ ಮೊಸಳೆ ಕಣ್ಣೀರು: ಬಿ.ಕೆ. ಹರಿಪ್ರಸಾದ

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.