ಶಕಿಬ್‌ಗೆ ಶರಣಾದ ಅಫ್ಘಾನಿಸ್ಥಾನ;ಶಕಿಬ್‌ 51 ರನ್‌ ಮತ್ತು 5 ವಿಕೆಟ್

ಶಕಿಬ್‌ 51 ರನ್‌ ಮತ್ತು 5 ವಿಕೆಟ್

Team Udayavani, Jun 25, 2019, 5:15 AM IST

AP6_24_2019_000193B

ಸೌತಾಂಪ್ಟನ್‌: ಶಕಿಬ್‌ ಅಲ್ ಹಸನ್‌ ಅವರ ಆಲ್ರೌಂಡ್‌ ಸಾಹಸದಿಂದ ಅಫ್ಘಾನಿಸ್ಥಾನ ವಿರುದ್ಧದ ಸೋಮವಾರದ ವಿಶ್ವಕಪ್‌ ಪಂದ್ಯದಲ್ಲಿ ಬಾಂಗ್ಲಾದೇಶ 62 ರನ್ನುಗಳ ಜಯ ಸಾಧಿಸಿದೆ. ಈ ಗೆಲುವಿನಿಂದ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ.

ಶಕಿಬ್‌ ಅಲ್ ಹಸನ್‌ 51 ರನ್‌ ಬಾರಿಸುವ ಜತೆಗೆ 29 ರನ್ನಿಗೆ 5 ವಿಕೆಟ್ ಉಡಾಯಿಸಿದರು. ಶಕಿಬ್‌ ವಿಶ್ವಕಪ್‌ ಪಂದ್ಯವೊಂದರಲ್ಲಿ 50 ಪ್ಲಸ್‌ ರನ್‌ ಜತೆಗೆ 5 ವಿಕೆಟ್ ಹಾರಿಸಿದ ಕೇವಲ 2ನೇ ಆಲ್ರೌಂಡರ್‌. ಯುವರಾಜ್‌ ಸಿಂಗ್‌ ಮೊದಲಿಗ.

ಮೊದಲು ಬ್ಯಾಟಿಂಗ್‌ ನಡೆಸಿದ ಬಾಂಗ್ಲಾದೇಶ 7 ವಿಕೆಟಿಗೆ 262 ರನ್‌ ಪೇರಿಸಿ ಸವಾಲೊಡ್ಡಿತು. ಜವಾಬಿತ್ತ ಅಫ್ಘಾನಿಸ್ಥಾನ 47 ಓವರ್‌ಗಳಲ್ಲಿ ಭರ್ತಿ 200 ರನ್ನಿಗೆ ಆಲೌಟ್ ಆಯಿತು. ಇದರೊಂದಿಗೆ ಅಫ್ಘಾನ್‌ ಆಡಿದ ಏಳೂ ಪಂದ್ಯಗಳಲ್ಲಿ ಸೋಲನುಭವಿಸಿತು.

ರಹೀಂ ಸರ್ವಾಧಿಕ 83 ರನ್‌
ಬಾಂಗ್ಲಾ ವಿಕೆಟ್ ಕೀಪರ್‌ ಬ್ಯಾಟ್ಸ್‌ಮನ್‌ ರಹೀಂ ಸರ್ವಾಧಿಕ 83 ರನ್‌ ಕೊಡುಗೆ ಸಲ್ಲಿಸಿದರು (87 ಎಸೆತ, 4 ಬೌಂಡರಿ, 1 ಸಿಕ್ಸರ್‌). ಶಕಿಬ್‌ 69 ಎಸೆತ ಎದುರಿಸಿ 51 ರನ್‌ ಹೊಡೆದರು. ಈ ಎಚ್ಚರಿಕೆಯ ಆಟದಲ್ಲಿ ಕೇವಲ ಒಂದು ಬೌಂಡರಿ ಸೇರಿತ್ತು. ಶಕಿಬ್‌-ರಹೀಂ ಜೋಡಿಯ 3ನೇ ವಿಕೆಟ್ ಜತೆಯಾಟದಲ್ಲಿ 61 ರನ್‌ ಒಟ್ಟುಗೂಡಿತು.

ಡೆತ್‌ ಓವರ್‌ಗಳಲ್ಲಿ ಮೊಸದ್ದೆಕ್‌ ಹೊಸೈನ್‌ ಬಿರುಸಿನ ಆಟವಾಡಿ ರನ್‌ಗತಿ ಹೆಚ್ಚಿಸಿದರು. ಅವರ 35 ರನ್‌ 24 ಎಸೆತಗಳಿಂದ ಬಂತು (4 ಬೌಂಡರಿ). ಈ ನಡುವೆ ಮೊಹಮದುಲ್ಲ 27 ರನ್‌ ಮಾಡಿದರು. ಬಾಂಗ್ಲಾ ಆರಂಭಿಕರಲ್ಲಿ ಬಡ್ತಿ ಪಡೆದು ಬಂದ ಲಿಟನ್‌ ದಾಸ್‌ (16) ಬೇಗನೇ ನಿರ್ಗಮಿಸಿದರೆ, ತಮಿಮ್‌ ಇಕ್ಬಾಲ್ 36ರ ತನಕ ಸಾಗಿದರು.

ಅಫ್ಘಾನ್‌ ಬೌಲರ್‌ಗಳಲ್ಲಿ ಸ್ಪಿನ್ನರ್‌ ಮುಜೀಬ್‌ ದಾಳಿ ಹೆಚ್ಚು ಪರಿಣಾಮಕಾರಿಯಾಗಿತ್ತು. 10 ಓವರ್‌ಗಳ ಸ್ಪೆಲ್ನಲ್ಲಿ ಕೇವಲ 39 ರನ್‌ ನೀಡಿದ ಅವರು 3 ವಿಕೆಟ್ ಉರುಳಿಸಿದರು.

ಹಿಂದಿನ ಆರೂ ಪಂದ್ಯ ಸೋತು ಈಗಾಗಲೇ ಹೊರಬಿದ್ದಿರುವುದರಿಂದ ಅಫ್ಘಾನಿಸ್ಥಾನ ಪಾಲಿಗೆ ಇದು ಕೇವಲ ಔಪಚಾರಿಕ ಪಂದ್ಯವಾಗಿತ್ತು. ಆದರೆ ಬಾಂಗ್ಲಾದೇಶಕ್ಕೆ ಇದು ಮಹತ್ವದ ಮುಖಾಮುಖೀ ಆಗಿತ್ತು. ಮುಂದಿನೆರಡೂ ಪಂದ್ಯಗಳನ್ನು ಗೆದ್ದರೆ ಮೊರ್ತಜ ಪಡೆ ನಾಕೌಟ್ ಕನಸು ಕಾಣಬಹುದು.

ಸ್ಕೋರ್‌ ಪಟ್ಟಿ
ಬಾಂಗ್ಲಾದೇಶ
ಲಿಟನ್‌ ದಾಸ್‌ ಸಿ ಶಾಹಿದಿ ಬಿ ಮುಜೀಬ್‌ 16
ತಮೀಮ್‌ ಇಕ್ಬಾಲ್‌ ಬಿ ನಬಿ 36
ಶಕಿಬ್‌ ಅಲ್‌ ಹಸನ್‌ ಎಲ್‌ಬಿಡಬ್ಲ್ಯು ಮುಜೀಬ್‌ 51
ಮುಶ್ಫಿಕರ್‌ ರಹೀಂ ಸಿ ನಬಿ ಬಿ ಡಿ.ಜದ್ರಾನ್‌ 83
ಸೌಮ್ಯ ಸರ್ಕಾರ್‌ ಎಲ್‌ಬಿಡಬ್ಲ್ಯು ಮುಜೀಬ್‌ 3
ಮೊಹಮದುಲ್ಲ ಸಿ ನಬಿ ಬಿ ನೈಬ್‌ 27
ಮೊಸದ್ದೆಕ್‌ ಹೊಸೈನ್‌ ಬಿ ನೈಬ್‌ 35
ಮೊಹಮ್ಮದ್‌ ಸೈಪುದ್ದೀನ್‌ ಔಟಾಗದೆ 2
ಇತರ 9
ಒಟ್ಟು (50 ಓವರ್‌ಗಳಲ್ಲಿ 7 ವಿಕೆಟಿಗೆ) 262
ವಿಕೆಟ್‌ ಪತನ: 1-23, 2-82, 3-143, 4-151, 5-207, 6-251, 7-262.
ಬೌಲಿಂಗ್‌:
ಮುಜೀಬ್‌ ಉರ್‌ ರೆಹಮಾನ್‌ 10-0-39-3
ದೌಲತ್‌ ಜದ್ರಾನ್‌ 9-0-64-1
ಮೊಹಮ್ಮದ್‌ ನಬಿ 10-0-44-1
ಗುಲುºದಿನ್‌ ನೈಬ್‌ 10-1-56-2
ರಶೀದ್‌ ಖಾನ್‌ 10-0-52-0
ರಹಮತ್‌ ಶಾ 1-0-7-0
ಅಫ್ಘಾನಿಸ್ಥಾನ
ಗುಲ್ಬದಿನ್‌ ನೈಬ್‌ ಸಿ ದಾಸ್‌ ಬಿ ಶಕಿಬ್‌ 47
ರಹಮತ್‌ ಶಾ ಸಿ ತಮಿಮ್‌ ಬಿ ಶಕಿಬ್‌ 24
ಹಶ್ಮತುಲ್ಲ ಶಾಹಿದಿ ಸ್ಟಂಪ್ಡ್ ರಹೀಂ ಬಿ ಮೊಸದ್ದೆಕ್‌ 11
ಅಸYರ್‌ಅಫ್ಘಾನ್‌ ಸಿ ಶಬ್ಬೀರ್‌ (ಬದಲಿ) ಬಿ ಶಕಿಬ್‌ 20
ಮೊಹಮ್ಮದ್‌ ನಬಿ ಬಿ ಶಕಿಬ್‌ 0
ಸಮಿಯುಲ್ಲ ಶಿನ್ವರಿ ಔಟಾಗದೆ 49
ಇಕ್ರಮ್‌ ಅಲಿ ಖೀಲ್‌ ರನೌಟ್‌ 11
ನಜಿಬುಲ್ಲ ಜದ್ರಾನ್‌ ಸ್ಟಂಪ್ಡ್ ರಹೀಮ್‌ ಬಿ ಶಕಿಬ್‌ 23
ರಶೀದ್‌ ಖಾನ್‌ ಸಿ ಮೊರ್ತಜ ಬಿ ಮುಸ್ತಫಿಜುರ್‌ 2
ದೌಲತ್‌ ಜದ್ರಾನ್‌ ಸಿ ರಹೀಂ ಬಿ ಮುಸ್ತಫಿಜುರ್‌ 0
ಮುಜೀಬ್‌ ಉರ್‌ ರಹಮಾನ್‌ ಬಿ ಸೈಫ‌ುದ್ದೀನ್‌ 0
ಇತರ 13
ಒಟ್ಟು (47 ಓವರ್‌ಗಳಲ್ಲಿ ಆಲೌಟ್‌) 200
ವಿಕೆಟ್‌ ಪತನ: 1-49, 2-79, 3-104, 4-104, 5-117, 6-132, 7-188, 8-191.
ಬೌಲಿಂಗ್‌:
ಮಶ್ರಫೆ ಮೊರ್ತಜ 7-0-37-0
ಮುಸ್ತಫಿಜುರ್‌ ರಹಮಾನ್‌ 8-1-32-2
ಮೊಹಮ್ಮದ್‌ ಸೈಫ‌ುದ್ದೀನ್‌ 8-0-33-1
ಶಕಿಬ್‌ ಅಲ್‌ ಹಸನ್‌ 10-1-29-5
ಮೆಹಿದಿ ಹಸನ್‌ 8-0-37-0
ಮೊಸದ್ದೆಕ್‌ ಹೊಸೈನ್‌ 6-0-25-1
ಪಂದ್ಯಶ್ರೇಷ್ಠ: ಶಕಿಬ್‌ ಅಲ್‌ ಹಸನ್‌

ಟಾಪ್ ನ್ಯೂಸ್

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Lok Sabha Polls: ಮಾ. 21 ರಂದು ನನ್ನ ರಾಜಕೀಯ ನಡೆಯ ಬಗ್ಗೆ ನಿರ್ಧಾರ: ಸಂಸದ ಸಂಗಣ್ಣ ಕರಡಿ

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Sandalwood: ಪ್ರೇಮಲೋಕ-2 ಐವತ್ತಕ್ಕೂ ಹೆಚ್ಚು ಸೆಟ್‌ನಲ್ಲಿ ಶೂಟಿಂಗ್‌!

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್

Patanjali Ads case:‌ಖುದ್ದು ಹಾಜರಾಗಿ- ಬಾಬಾ ರಾಮ್‌ ದೇವ್‌, ಬಾಲಕೃಷ್ಣಗೆ ಸುಪ್ರೀಂ ಸಮನ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಹರ್‌ ಘರ್‌ ತಿರಂಗಾ: ಗೌರವಕ್ಕೆ ಧಕ್ಕೆ ತರಬೇಡಿ

ಸ್ವಾತಂತ್ರ್ಯ ಅಮೃತಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಅಮೃತ ಮಹೋತ್ಸವ: ಸ್ವಾತಂತ್ರ್ಯಕ್ಕಾಗಿ ಸರ್ವಸ್ವವನ್ನೂ ತ್ಯಜಿಸಿದ್ದ ತ್ಯಾಗಿ “ಕಾರ್ನಾಡ್”

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಸ್ವಾತಂತ್ರ್ಯ ವೀರರಿಗೆ ಸಲಾಂ

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

ಅಮೃತ ಮಹೋತ್ಸವ: ಇತಿಹಾಸ ಎಂದೂ ಮರೆಯದ 10 ಮಂದಿ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರು

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

ಆನೆಗೊಂದಿ-ಕಡೆಬಾಗಿಲು ಚೆಕ್ ಪೋಸ್ಟ್ ಬಳಿ 32.95 ಲಕ್ಷ ರೂ.ದಾಖಲೆ ಇಲ್ಲದ ಹಣ ವಶಕ್ಕೆ

10-ramanagara

Ramanagara ಅಪಘಾತ; ವಿದ್ಯಾರ್ಥಿಗಳ ಪ್ರತಿಭಟನೆ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Telangana: ಜಾರ್ಖಂಡ್‌ ಗವರ್ನರ್‌ ಗೆ ಹೆಚ್ಚುವರಿ ಹೊಣೆಗಾರಿಕೆ, ತಮಿಳಿಸೈ ರಾಜೀನಾಮೆ ಅಂಗೀಕಾರ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

Road mishap: ಆಟೋ ರಿಕ್ಷಾ – ಕಂಟೇನರ್ ಅಪಘಾತ; ಓರ್ವ ಮೃತ್ಯು, ನಾಲ್ವರಿಗೆ ಗಾಯ

9-udupi

ಶ್ರೀ ನಿತ್ಯಾನಂದ ಸ್ವಾಮಿ ಮಂದಿರ ಮಠ; ಧ್ಯಾನ ಮಂದಿರ, ಭೋಜನ ಶಾಲೆ ನಿರ್ಮಾಣ ಕಾಮಗಾರಿಗೆ ಚಾಲನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.