ನಿಮ್ಮ ಅಜೆಂಡಾ ನನ್ನ ಅಜೆಂಡಾ ಅಲ್ಲ: ಸ್ಪೀಕರ್
ಸದನದಲ್ಲಿ ಏನೇನೋ ಚರ್ಚೆಯಾಗುತ್ತಿದೆ, ಕೆಲವೆಲ್ಲಾ ನೀವೇ ಸೃಷ್ಟಿಸಿಕೊಂಡ ನಿರ್ಬಂಧ ಆಗಬಾರದು: ಕಾಗೇರಿ
Team Udayavani, Jul 19, 2019, 5:05 AM IST
ವಿಧಾನಸೌಧ: ‘ನಿಮ್ಮ ಅಜೆಂಡಾ ನನ್ನ ಅಜೆಂಡಾ ಆಗುವುದಿಲ್ಲ. ನನ್ನ ಅಜೆಂಡಾ ವಿಶ್ವಾಸಮತ ಯಾಚನೆ ಚರ್ಚೆ ಸಂಬಂಧ ಕ್ರಿಯಾಲೋಪ ತೆಗೆದಿದ್ದು, ಅದರ ಚರ್ಚೆಗೆ ಅವಕಾಶ ನೀಡಲಾಗಿದೆ’ ಎಂದು ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ ಕುಮಾರ್ ಸದನಕ್ಕೆ ತಿಳಿಸಿದರು.
ಗುರುವಾರ ಮಧ್ಯಾಹ್ನ ಭೋಜನಾ ನಂತರದ ಕಲಾಪದಲ್ಲಿ ಬಿಜೆಪಿಯ ವಿ.ಸೋಮಣ್ಣ, ಸದನದಲ್ಲಿ ಬೆಳಗ್ಗೆಯಿಂದ ನಾನಾ ವಿಚಾರ ಚರ್ಚೆಯಾಗಿ ಕಾಲಹರಣವಾಗುತ್ತಿದೆ. ಅಜೆಂಡಾ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದಾಗ ಸಭಾಧ್ಯಕ್ಷರು ಮೇಲ್ಕಂಡ ಉತ್ತರ ನೀಡಿದರು.
ಆಗ ಸೋಮಣ್ಣ, ‘ನಾನು ನಿಮ್ಮನ್ನು 30 ವರ್ಷಗಳಿಂದ ನೋಡಿದ್ದೇನೆ. ನೀವು ನಮ್ಮ ರಮೇಶ್ ಕುಮಾರ್ ಆಗಬೇಕು’ ಎಂದರು. ಇದಕ್ಕೆ ಗದ್ದಲವೆಬ್ಬಿಸಿದ ಕಾಂಗ್ರೆಸ್, ಜೆಡಿಎಸ್ ಶಾಸಕರು, ಬಿಜೆಪಿ ಸ್ಪೀಕರ್ ಆಗಬೇಕು ಎಂದು ಹೇಳುತ್ತೀರಾ ಎಂದು ದೂರಿದರು. ಇದಕ್ಕೆ ದನಿ ಗೂಡಿಸಿದ ಉಪಮುಖ್ಯಮಂತ್ರಿ ಡಾ.ಜಿ.ಪರ ಮೇಶ್ವರ್, ನಮ್ಮ ರಮೇಶ್ ಕುಮಾರ್ ಆಗಬೇಕು ಎಂದರೆ ಏನರ್ಥ ಎಂದು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ರಮೇಶ್ ಕುಮಾರ್, ‘ವೈಯಕ್ತಿಕ ಸ್ನೇಹದಿಂದ ಅವರು ಆ ರೀತಿ ಹೇಳಿದ್ದಾರೆ. ನನ್ನ ಸ್ವಭಾವವೇ ಹಾಗೆ. ಒಂದು ಘಳಿಗೆ ಇದ್ದಂತೆ ಮತ್ತೂಂದು ಘಳಿಗೆ ಇರುವುದಿಲ್ಲ. 42 ವರ್ಷ ಸಂಸಾರ ಮಾಡಿದ ಪತ್ನಿಯೇ ಬೆಳಗ್ಗೆ ನಿಮ್ಮ ಮನಸ್ಥಿತಿ ಹೇಗಿದೆ ಎಂದು ಪ್ರಶ್ನಿಸುತ್ತಾರೆ. ನಿಮ್ಮ ರಮೇಶ್ ಕುಮಾರ್ ಆಗಿರುತ್ತೇನೆ. ಸ್ಪೀಕರ್ ಆಗಿ ಬೇರೆ ಆಗಿರುತ್ತೇನೆ’ ಎಂದು ಹೇಳಿದರು.
ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ‘ಸದನದಲ್ಲಿ ಏನೇನೋ ಚರ್ಚೆ ಯಾಗುತ್ತಿದೆ. ಕೆಲವೆಲ್ಲಾ ನೀವೇ ಸೃಷ್ಟಿಸಿಕೊಂಡ ನಿರ್ಬಂಧ ಆಗಬಾರದು ಎಂದು ಕೆಣಕಿದರು. ಆಗ ಸಚಿವ ಕೃಷ್ಣ ಬೈರೇಗೌಡ, ಸ್ಪೀಕರ್ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಈ ನಡುವೆ ಸಭಾಧ್ಯಕ್ಷ ರಮೇಶ್ ಕುಮಾರ್, ‘ರಾಜೀನಾಮೆ ನೀಡಿದ 15 ಶಾಸಕರು ನನಗೆ ಪತ್ರವನ್ನೂ ಬರೆದಿರಲಿಲ್ಲ. ಸಮಯವನ್ನೂ ಕೇಳಿರಲಿಲ್ಲ. ಸುಪ್ರೀಂಕೋರ್ಟ್ ಮೊರೆ ಹೋಗಿ ನಂತರ ರಾಜೀನಾಮೆ ಸಲ್ಲಿಸಿದರು’ ಎಂದು ಹೇಳಿದರು. ಇದಕ್ಕೆ ಬೇಸರಗೊಂಡ ಬಿಜೆಪಿಯ ಜೆ.ಸಿ.ಮಾಧುಸ್ವಾಮಿ, ಅದಕ್ಕೂ ಇದಕ್ಕೂ ಏನು ಸಂಬಂಧ. ಇಲ್ಲಿರುವ ವಿಚಾರವೇ ಬೇರೆ, ಚರ್ಚೆಯಾಗುತ್ತಿರುವುದೇ ಬೇರೆ ಎಂದು ಹೇಳಿದರು. ಆಗ ಕಾಂಗ್ರೆಸ್, ಜೆಡಿಎಸ್ ಶಾಸಕರು ಸಿಡಿಮಿಡಿಕೊಂಡು ಟೀಕಿಸಲಾರಂಭಿಸಿದರು.
ಕೋಪಗೊಂಡ ರಮೇಶ್ ಕುಮಾರ್, ‘ನಾನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೆಲಸ ಮಾಡಲು ಸಾಧ್ಯವಿಲ್ಲ. ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದರು. ಬಳಿಕ ಮಾಧುಸ್ವಾಮಿ ಸೇರಿ ದಂತೆ ಹಲವು ಬಿಜೆಪಿ ಶಾಸಕರು, ವಿಶ್ವಾಸಮತ ಯಾಚನೆ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಆಗ್ರ ಹಿಸಿದರು. ಗದ್ದಲ ಹೆಚ್ಚಾಗುತ್ತಿದ್ದಂತೆ ಸಭಾಧ್ಯಕ್ಷರು ಕಲಾಪವನ್ನು 10 ನಿಮಿಷ ಮುಂದೂಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
Lok Sabha Polls: “ಮೋದಿ ಮತ್ತೊಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
MOTHER: ತಾಯಿಗಿಂತ ಮಿಗಿಲಾದ ದೇವರಿಲ್ಲ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
Village Life: ಅಪರೂಪವೆನಿಸುತ್ತಿರುವ ಹಳ್ಳಿಗಾಡಿನ ಜೀವನ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ