ಬರೇ ಚರ್ಚೆ, ಗದ್ದಲ; ವಿಶ್ವಾಸಮತ ಯಾಚನೆ ಮತ್ತೆ ಮುಂದೂಡಿಕೆ,ಮಂಗಳವಾರ ಡೆಡ್ ಲೈನ್
Team Udayavani, Jul 23, 2019, 12:07 AM IST
ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಪಕ್ಷದ ಶಾಸಕರು ಸೋಮವಾರ ರಾತ್ರಿ 12.42ರವರೆಗೆ ಸುದೀರ್ಘವಾಗಿ ಚರ್ಚೆ ನಡೆಸಿದರು. ಕೊನೆಗೂ ಸಿಎಂ ಕುಮಾರಸ್ವಾಮಿ ವಿಶ್ವಾಸಮತ ಯಾಚಿಸದೇ ಕಲಾಪವನ್ನು ಮತ್ತೆ ಮಂಗಳವಾರಕ್ಕೆ ಸ್ಪೀಕರ್ ರಮೇಶ್ ಕುಮಾರ್ ಮುಂದೂಡಿದ್ದಾರೆ. ನಾಳೆ ವಿಶ್ವಾಸಮತ ಯಾಚನೆ ಮುಗಿಸುತ್ತೇವೆ ಎಂದು ಮನವಿ ಮಾಡಿದ ಸಿದ್ದರಾಮಯ್ಯಗೆ, ಎಷ್ಟು ಗಂಟೆಗೆ ಪೂರ್ಣಗೊಳಿಸುತ್ತೀರಿ ಎಂದು ಸ್ಪಷ್ಟವಾಗಿ ಹೇಳಿ ಎಂದು ಸ್ಪೀಕರ್ ತಾಕೀತು ಮಾಡಿದ್ದರು. ಮಂಗಳವಾರ 8ಗಂಟೆಯೊಳಗೆ ವಿಶ್ವಾಸಮತ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದಾಗ ಬಿಜೆಪಿಯ ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು. ತದನಂತರ ಮಂಗಳವಾರ 6ಗಂಟೆಗೆ ಅಂತಿಮ ಗಡುವು ಎಂದು ರೂಲಿಂಗ್ ನೀಡಿ ಸದನವನ್ನು ಮಂಗಳವಾರ 10ಗಂಟೆಗೆ ಮುಂದೂಡಿದರು. ಈ ಸಂದರ್ಭದಲ್ಲಿ ಸಿಎಂ ಕುಮಾರಸ್ವಾಮಿ, ಡಿಸಿಎಂ ಪರಮೇಶ್ವರ್ ಸದನದಲ್ಲಿ ಗೈರುಹಾಜರಾಗಿದ್ದರು.