ಸಾವಿನ ಪ್ರಮಾಣ ಗಣನೀಯ ಏರಿಕೆ


Team Udayavani, Jun 17, 2020, 6:05 AM IST

pramana covid

ಬೆಂಗಳೂರು: ನಗರದಲ್ಲಿ ಮಂಗಳವಾರ ಒಂದೇ ದಿನ 47 ಜನರಲ್ಲಿ ಕೋವಿಡ್‌ 19 ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 772ಕ್ಕೆ ಏರಿಕೆಯಾಗಿದೆ. ಅಲ್ಲದೆ, ಮಂಗಳವಾರ ಒಂದೇ ದಿನ ಐವರು ನಗರದಲ್ಲಿ ಸೋಂಕಿನಿಂದ  ಮೃತಪಟ್ಟಿದ್ದಾರೆ. ಒಂದೇ ದಿನ ಐವರು ಮೃತಪಟ್ಟಿರುವುದು ಇದೇ ಮೊದಲು. ಈ ಮೂಲಕ ನಗರದಲ್ಲಿ ಕೋವಿಡ್‌ 19ದಿಂದ ಮೃತಪಟ್ಟವರ ಸಂಖ್ಯೆ 39ಕ್ಕೆ ಏರಿಕೆಯಾದಂತಾಗಿದೆ. ಇದೇ ಮೊದಲ ಬಾರಿಗೆ ಒಂದೇ ದಿನ 47ಜನರಲ್ಲಿ  ಸೋಂಕು ಇರುವುದು ದೃಢಪಟ್ಟಿದೆ.

ಒಂದೇ ದಿನ ಐವರು ಮೃತ: ಮೃತಪಟ್ಟ ಐವರಲ್ಲಿ ಎಲ್ಲರೂ ವಯೋವೃದ್ಧರೇ ಆಗಿದ್ದಾರೆ. 72 ವರ್ಷದ ವೃದ್ಧ, 60 ವರ್ಷದ ವೃದ್ಧ, 65 ವರ್ಷದ ವೃದ್ಧೆ, 85 ವರ್ಷದ ವೃದ್ಧೆ ಹಾಗೂ 86 ವರ್ಷದ ವೃದ್ಧೆ ಸೋಂಕಿನಿಂದ ಮೃತಪಟ್ಟಿದ್ದಾರೆ.  ಇದರಲ್ಲಿ ರೋಗಿ ಸಂಖ್ಯೆ -4317ರ ಸಂರ್ಪದಲ್ಲಿದ್ದ 72 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಇನ್ನು ಸುಂಕದಕಟ್ಟೆಯ 60 ವರ್ಷದ ವೃದ್ಧರೊಬ್ಬರು ಮೃತಪಟ್ಟ ಮೇಲೆ ಅವರಿಗೆ ಕೋವಿಡ್‌ 19 ಇರುವುದು ದೃಢಪಟ್ಟಿದೆ. ಉಳಿದ 4  ಪ್ರಕರಣಗಳಲ್ಲಿ ಸೋಂಕಿತರು ಜೂ.10ರ ನಂತರವೇ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ವಿಕ್ಟೋರಿಯಾ ಆಸ್ಪತ್ರೆ ಮತ್ತೂಬ್ಬ ಆರೋಗ್ಯ ಕಾರ್ಯಕರ್ತರಿಗೆ ( 36 ವರ್ಷ)ದ ಕೋವಿಡ್‌ 19 ಇರುವುದು ದೃಢಪಟ್ಟಿದೆ. ವಿಶ್ವೇಶ್ವರಪುರಂ ಸಂಚಾರ ಠಾಣೆ ಎಎಸ್‌ಐ ಒಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ತಮಿಳುನಾಡು, ಕೇರಳ, ಮಹಾರಾಷ್ಟ್ರ , ದೆಹಲಿ ಹಾಗೂ ಆಂಧ್ರಪ್ರದೇಶದಿಂದ ಬಂದ ತಲಾ ಒಬ್ಬರಲ್ಲಿ ಸೋಂಕು  ದೃಢಪಟ್ಟಿದೆ. ಅಲ್ಲದೆ, ಹಾಸನದಿಂದ ಬಂದ 35 ವರ್ಷದ ವ್ಯಕ್ತಿಯಲ್ಲಿ ಸೋಂಕಿರುವುದು ಖಚಿತವಾಗಿದೆ. ಸೋಂಕು ಲಕ್ಷಣದಿಂದ ಪರೀಕ್ಷೆಗೆ ಒಳಪಟ್ಟ 14 ಜನ ಹಾಗೂ ತೀವ್ರ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದ ಐವರಿಗೆ ಸೋಂಕುತಾಗಿದೆ.

ಸೋಂಕಿತರಿಂದ 13 ಜನರಿಗೆ ಸೋಂಕು: ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದ ಒಟ್ಟು 13 ಜನರಿಗೆ ಇರುವುದು ದೃಢಪಟ್ಟಿದೆ. ಇದರಲ್ಲಿ 11ಜನ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರು ಹಾಗೂ ಇಬ್ಬರು  ದ್ವಿತೀಯ ಸಂಪರ್ಕದಲ್ಲಿ ಇದ್ದವರಾಗಿದ್ದಾರೆ. ರೋಗಿ ಸಂಖ್ಯೆ -2519ರ ದ್ವಿತೀಯ ಸಂಪರ್ಕದಲ್ಲಿದ್ದ 2ನೇ ಹಂತದ ಕೆಎಚ್‌ಬಿ ಕಾಲೋನಿಯ 29 ವರ್ಷದ ಯುವತಿ ಹಾಗೂ 30 ವರ್ಷದ ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಇನ್ನು  ರೋಗಿ ಸಂಖ್ಯೆ -6361ರ ಸಂಪರ್ಕದಲ್ಲಿದ್ದ ಲಿಂಗರಾಜಪುರದ 60 ವರ್ಷದ ವೃದ್ಧೆ ಹಾಗೂ 27 ವರ್ಷದ ಯುವಕನಿಗೆ ಸೋಂಕು ಹಬ್ಬಿದೆ. ರೋಗಿ ಸಂಖ್ಯೆ -3912ರ ಸಂಪರ್ಕದಲ್ಲಿದ್ದ ಓಲ್ಡ್‌ ಪಿನ್ಸಿನೋ ಮಹಲ್‌ನ 20 ವರ್ಷದ ಯುವಕ, 30 ಹಾಗೂ 29 ವರ್ಷದ ಯುವಕ ಸೇರಿ ಮೂವರಿಗೆ ಸೋಂಕು ಹಬ್ಬಿದೆ. ರೋಗಿ ಸಂಖ್ಯೆ -7229ರ ಸಂಪರ್ಕದಲ್ಲಿದ್ದ ಶಿವಾಜಿ ನಗರದ 8ನೇ ಕ್ರಾಸ್‌ನ 33 ವರ್ಷದ ಪುರುಷ ಹಾಗೂ 78 ವರ್ಷದ ವೃದ್ಧರೊಬ್ಬರಿಗೆ ಸೋಂಕು ದೃಢಪಟ್ಟಿದೆ. ರೋಗಿ  ಸಂಖ್ಯೆ -6389ರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಿತ್ತೂರು ರಾಣಿ ಚೆನ್ನಮ್ಮ ಕಾಲೇಜ್‌ನ 24 ವರ್ಷದ ಯುವತಿ ಹಾಗೂ ರೋಗಿ ಸಂಖ್ಯೆ -7214ರ ಸಂಪರ್ಕದಲ್ಲಿದ್ದ ರಾಮಚಂದ್ರ ಅಗ್ರಹಾರದ 35 ವರ್ಷದ ಪುರುಷ ಹಾಗೂ 68 ವರ್ಷದ  ವೃದ್ಧರೊಬ್ಬರಿಗೆ ಸೋಂಕು ಹರಡಿದೆ.

ವಾಸನೆ ಗ್ರಹಿಕೆ ಕಳೆದುಕೊಂಡವರಿಗೆ ಸೋಂಕು: ಆಹಾರ ಪದಾರ್ಥ ಮತ್ತು ಕೆಲವು ವಸ್ತುಗಳ ವಾಸನೆ ಗ್ರಹಿಕೆ ಕಳೆದುಕೊಂಡ ಹಿನ್ನೆಲೆಯಲ್ಲಿ ಸೋಂಕು ಪರೀಕ್ಷೆಗೆ ಒಳಪಟ್ಟ ಶ್ರೀರಾಮಪುರದ ಹನುಮಂತಪುರದಲ್ಲಿನ 24 ವರ್ಷದ  ಯುವಕನಿಗೆ ಸೋಂಕು ದೃಢಪಟ್ಟಿದೆ. ತಮಿಳುನಾಡಿನಿಂದ ಬಂದ 40 ವರ್ಷದ ಪುರುಷ, ಕೇರಳದಿಂದ ಬಂದ 28 ವರ್ಷದ ಯುವಕ, ದೆಹಲಿಯಿಂದ ಬಂದ 11 ತಿಂಗಳ ಮಗು, ಮಹಾರಾಷ್ಟ್ರದಿಂದ ಬಂದ 24 ವರ್ಷದ ಯುವಕ ಹಾಗೂ  ಆಂಧ್ರಪ್ರದೇಶದಿಂದ ಬಂದ 38 ವರ್ಷದ ಪುರುಷರೊಬ್ಬರಲ್ಲಿ ಸೋಂಕು ದೃಢಪಟ್ಟಿದೆ.

ಯಾವ ಪ್ರದೇಶದಲ್ಲಿ ಸೋಂಕು ದೃಢ?: ಚಾಮರಾಜಪೇಟೆಯ 47 ವರ್ಷದ ಪುರುಷ, ಶಿವಾಜಿನಗರದ 8ನೇ ಕ್ರಾಸ್‌ನ 65 ವರ್ಷದ ವೃದ್ಧೆ, ಶ್ವಾಸಕೋಶ ಸಮಸ್ಯೆ ಎದುರಿಸುತ್ತಿದ್ದ ಶ್ಯಾಮ ವಿದ್ಯಾಶಾಲ ಮಾರ್ಗದ ವಸತಿ ಸಮುಚ್ಚಯವೊಂದರ  42 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.  ಆನಂದಪುರಂನ 45 ವರ್ಷದ ಮಹಿಳೆ, ಹರಿ ಕಾಲೋನಿ ಬಿಎಸ್‌ಕೆ 2ನೇ ಹಂತದ 32 ವರ್ಷದ ಪುರುಷ, ಸಿಡಿ ದೇವಸ್ಥಾನ ರಸ್ತೆ ಜಾಲಿ ಮಹನ್‌ ಸಮೀಪದ 45 ವರ್ಷದ ಪುರುಷ,

ಚಾಮರಾಜಪೇಟೆ 4ನೇ ಕ್ರಾಸ್‌ನ 62 ವರ್ಷದ  ವೃದ್ಧ, ಡಿಜಿ ಹಳ್ಳಿಯ 32 ವರ್ಷದ ಪುರುಷ, ಜಿಜಿಡಿ ಸಲಾಡ್‌ ಭವನ್‌ ಸಮೀಪದ 38 ವರ್ಷದ ಪುರುಷ, ನಾಯಂಡಹಳ್ಳಿ ಮೆಟ್ರೋ ಲೇಔಟ್‌ನ 27 ವರ್ಷದ ಯುವತಿ ಹಾಗೂ ಮಾಗಡಿ ರಸ್ತೆಯ  12ನೇ ಕ್ರಾಸ್‌ನ 31 ವರ್ಷದ ಪುರುಷನಿಗೆ ಸೋಂಕು ತಾಕಿದೆ. ಸಬರ್‌ವಾಲ್‌ ಪ್ರದೇಶದ 60 ವರ್ಷದ ವೃದ್ಧ, ಗೊನ್‌ಗೊಂಡ ಹಳ್ಳಿಯ 85 ವರ್ಷದ ವೃದ್ಧೆ, ಚಾಮರಾಜಪೇಟೆ ಎಂಡಿ ಬ್ಲಾಕ್‌ನ 66 ವರ್ಷದ ವೃದ್ಧ, ನಂದಿನಿ ಲೇಔಟ್‌ನ 59  ವರ್ಷದ ವೃದ್ಧೆ, ಚಾಮರಾಜಪೇಟೆ ಬಾಬಾ ಲೈನ್‌ ವ್ಯಾಪ್ತಿಯಲ್ಲಿ 62 ವರ್ಷದ ವೃದ್ಧ,

ಕುಮಾರಸ್ವಾಮಿ ಲೇಔಟ್‌ ನ 38 ವರ್ಷದ ಪುರುಷ, ಕಲಾಸಿಪಾಳ್ಯದ 55 ವರ್ಷದ ಮಹಿಳೆ, ಇಂದಿರಾ ನಗರದ ಕೃಷ್ಣ ದೇವಸ್ಥಾನ ಸಮೀಪದ 86 ವರ್ಷದ  ವೃದ್ಧೆಗೆ ಸೋಂಕು ಇರುವುದು ದೃಢಪಟ್ಟಿದೆ. ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಮಂಗಳವಾರ 13 ಜನರಲ್ಲಿ ಸೋಂಕು ಇರುವುದು ದೃಢಪಟ್ಟಿದೆ. ವಿಭೂತಿಪುರದ 33 ವರ್ಷದ ಪುರುಷ, ಯಲಚೇನಹಳ್ಳಿಯ 29 ವರ್ಷದ ಯುವತಿ, ಮಾರತ್ತಹಳ್ಳಿಯ 65 ವರ್ಷದ ವೃದ್ಧೆ, ತಿಂಡ್ಲುನ 38 ವರ್ಷದ ಮಹಿಳೆ ಹಾಗೂ ಮಾರತ್ತಹಳ್ಳಿಯ 23 ವರ್ಷದ ಯವತಿಗೆ ಸೋಂಕು ಹಬ್ಬಿದೆ.

ಟಾಪ್ ನ್ಯೂಸ್

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.