ಮಂಗಳೂರಿಗಿಂದು ವಿಮಾನ: ಗರ್ಭಿಣಿಯರೇ ಹೆಚ್ಚು


Team Udayavani, May 12, 2020, 9:29 AM IST

mangalurige indu

ಬೆಂಗಳೂರು: ಕೊರೊನಾ ಜಗತ್ತಿನಾದ್ಯಂತ ಆತಂಕದ ಜೊತೆಗೆ ಅಚ್ಚರಿಗಳನ್ನೂ ಸೃಷ್ಟಿಸುತ್ತಿದೆ. ಈಗ ಅಂತಹ ಅಚ್ಚರಿಗಳಲ್ಲಿ, ದುಬೈನಿಂದ ರಾಜ್ಯಕ್ಕೆ ಆಗಮಿಸುವವರಲ್ಲಿ ಗರ್ಭಿಣಿಯರೇ ಹೆಚ್ಚಿನ ಸಂಖ್ಯೆಯಲ್ಲಿರುವುದು ವಿಶೇಷ. ಕೊರೊನಾ ಲಾಕ್‌ಡೌಹಿನ್ನೆಲೆಯಲ್ಲಿ ವಿಶ್ವಾದ್ಯಂತ ಅಂತಾರಾಷ್ಟ್ರೀಯ ವಿಮಾನ ಯಾನ ರದ್ದುಪಡಿಸಿದ್ದರಿಂದಲಕ್ಷಾಂತರ ಕನ್ನಡಿಗರು ವಿದೇಶದಳಲ್ಲಿಯೇ ಸಿಲುಕಿ ಕೊಳ್ಳುವಂತಾಗಿತ್ತು.

ಈಗ ಅನಿವಾಸಿ ಕನ್ನಡಿಗರಿಗೆ ರಾಜ್ಯಕ್ಕೆ ವಾಪಸ್‌  ಆಗಲು ಹಾಗೂ ಕೇಂದ್ರ ಸರ್ಕಾರಗಳು ವಿಶೇಷ ವಿಮಾ®ಸೇವೆ ಆರಂಭಿಸಿದ್ದು, ಈಗಾಗಲೇ ಲಂಡನ್‌ ನಿಂದ ಮೊದಲ ವಿಮಾನ ಬೆಂಗಳೂರಿಗೆ ಆಗಮಿಸಿದ್ದು, ದುಬೈನಿಂದ ಮಂಗಳವಾರ ಸಂಜೆ ( ಮೇ 12) ಮಂಗಳೂರಿಗೆ ಮೊದಲ ವಿಮಾನ  ಬರಲಿದೆ. ಈ ವಿಮಾನದ ವಿಶೇಷ ಏನೆಂದರೆ ರಾಜ್ಯಕ್ಕೆ ಬರುತ್ತಿರುವ 177 ಪ್ರಯಾಣಿಕರಲ್ಲಿ 30 ಜನ ಗರ್ಭಿಣಿಯರಿದ್ದಾರೆ.

ಹೆಚ್ಚಿದ ಗರ್ಭಿಣಿಯರು: ಕೇಂದ್ರ ಸರ್ಕಾರ ಅನಿವಾಸಿ ಕನ್ನಡಿಗರನ್ನು ಕರೆತರಲು ವಿಶೇಷ ವಿಮಾನ ಏರ್ಪಾಡು ಮಾಡುತ್ತಿದ್ದಂತೆ ವಾಪಸ್‌ ಬರಲು ದುಬೈ ರಾಯಭಾರಿ ಕಚೇರಿಯಲ್ಲಿಹೆಸರು ನೋಂದಾಯಿಸಿ ಕೊಳ್ಳುವವರಲ್ಲಿ ಗರ್ಭಿಣಿಯರ  ಸಂಖ್ಯೆಯೇ ಹೆಚ್ಚಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈಗಾಗಲೇ ರಾಜ್ಯಕ್ಕೆ ಆಗಮಿಸಲು ಬಯಸಿ ಹೆಸರು ನೋಂದಾಯಿಸಿ  ದವರಲ್ಲಿ 148 ಜನ ಗರ್ಭಿಣಿಯರಿದ್ದಾರೆ. ಎಲ್ಲರೂ ಮೊದಲ ವಿಮಾನದಲ್ಲಿಯೇ ಹಾರಿ ದೇಶಕ್ಕೆ ಮರಳಲು  ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ.

ಗೊಂದಲ ಸೃಷ್ಟಿಸಿದ ನೋಂದಣಿ: ಬಹುತೇಕ ಮಹಿಳೆಯರು ಹೇಗಾದರೂ ಮಾಡಿ ವಾಪಸ್‌ ದೇಶ ಸೇರಬೇಕು ಎನ್ನುವ ಕಾರಣಕ್ಕೆ ತಾವು ಗರ್ಭಿಣಿಯರು ಎಂದು ನಮೂದಿಸಿದ್ದಾರೆಎನ್ನಲಾಗಿದ್ದು, ಇದರಿಂದ ಗೊಂದಲಕ್ಕೆ ಸಿಲುಕಿರುವ  ಭಾರತೀಯ ರಾಯಭಾರ ಕಚೇರಿ ಗರ್ಭಿಣಿಯಾಗಿರುವ ಬಗ್ಗೆ ಕಡ್ಡಾಯವಾಗಿ ವೈದ್ಯರ ಪ್ರಮಾಣ ಪತ್ರ ಸಲ್ಲಿಸುವಂತೆ ಸೂಚಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಕೆಲವರು ಗರ್ಭಿಣಿಯಾಗಿ ಹದಿನೈದು ದಿನ, ತಿಂಗಳು ಎಂದು ಹೇಳಿ ಮೊದಲ  ವಿಮಾನದಲ್ಲಿಯೇ ದೇಶ ಸೇರಲು ಪ್ರಯತ್ನಿಸುತ್ತಿದ್ದು, ಕನಿಷ್ಠ 5 ತಿಂಗಳು ಆದವರಿಗೆ ಮೊದಲ ಆದ್ಯತೆ ನೀಡಲು ರಾಯಭಾರ ಕಚೇರಿ ತೀರ್ಮಾನಿಸಿದೆ ಎಂದು ತಿಳಿದು ಬಂದಿದೆ.

ರಾಜ್ಯಕ್ಕೆ ವಾಪಸ್‌ ಆಗುತ್ತಿರುವ ದುಬೈನಲ್ಲಿರುವ ಕನ್ನಡಿಗರಲ್ಲಿ ಗರ್ಭಿಣಿಯರು ಪ್ರಯಾಣ ಮಾಡುತ್ತಿದ್ದಾರೆ. ಅವರ ಸುರಕ್ಷತೆಗೆ ಕನ್ನಡಿಗರು ಹೆಲ್ಪ್ಲೈನ್‌ ವತಿಯಿಂದ ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. 
-ನವೀದ್‌ ಮಾಗುಂಡಿ, ದುಬೈನ ಅನಿವಾಸಿ ಕನ್ನಡಿಗರ ಅಧ್ಯಕ್ಷ

ಗರ್ಭಿಣಿಯರಿಗೆ ಬಿಪಿ, ಶುಗರ್‌ ಇಲ್ಲದವರಿಗೆ ಪ್ರಯಾಣಕ್ಕೆ ತೊಂದರೆಯಿಲ್ಲ. ಆದರೆ, ವಿಮಾನ ಲ್ಯಾಂಡ್‌ ಆಗುವಾಗ ಸ್ವಲ್ಪ ಜರ್ಕ್‌ ಆದಾಗ ಸಮಸ್ಯೆಯಾಗುತ್ತದೆ. ಅಂತ ಸಮಯದಲ್ಲಿ ಗರ್ಭಿಣಿಯರು ಸೀಟ್‌ಬೆಲ್ಟನ್ನು ಸಡಿಲ ಗೊಳಿಸಬೇಕು. ಅವರು ಕಾಲು ಅಲುಗಾಡಿಸುತ್ತಿ ರಬೇಕು. ಹೈ ರಿಸ್ಟ್ ಗರ್ಭಿಣಿಯರಾಗಿದ್ದಾರೆ. ಅವರು ಕಡ್ಡಾಯವಾಗಿ ವೈದ್ಯರನ್ನು ಸಂಪರ್ಕಿಸಿ ಮೆಡಿಕೇಶನ್‌ ಬಳಿಕ ಪ್ರಯಾಣಿಸಬೇಕು.
-ಡಾ. ಶಾಂತಿ, ದುಬಾಯ್‌ ಆಸ್ಟ್ರ್‌ ಮೆಡಿಕಲ್‌ ಆಸ್ಪತ್ರೆ ತಜ್ಞೆ

* ಶಂಕರ ಪಾಗೋಜಿ

ಟಾಪ್ ನ್ಯೂಸ್

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

Politics: ಡಿ.ಕೆ.ಶಿವಕುಮಾರ್‌ ಸಿಎಂ ಆಗುತ್ತಾರೆ: ಎಚ್‌.ವಿಶ್ವನಾಥ್‌

13

Politics: ಸಿದ್ದರಾಮಯ್ಯ ಸರಕಾರ ಬಂದ ಬಳಿಕ ಮುಸ್ಲಿಂ ಮೂಲಭೂತವಾದಿಗಳು ಹೆಚ್ಚಳ; ಅಶೋಕ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

1-qwwqeqw

Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.