ಸೋಂಕಿತರ ಶವ ಸಂಸ್ಕಾರಕ್ಕೂ ಹಿಂದೇಟು!
Team Udayavani, Jun 25, 2020, 5:16 AM IST
ಬೆಂಗಳೂರು: ಕೋವಿಡ್ 19 ಸೋಂಕಿನಿಂದ ಮೃತಪಡುತ್ತಿರುವವರ ಶವ ಸಂಸ್ಕಾರವೂ ಪಾಲಿಕೆಗೆ ಸದ್ಯ ತಲೆನೋವಾಗಿ ಪರಿಣಮಿಸಿದೆ. ನಗರದಲ್ಲಿ “ಸೋಂಕಿನಿಂದ ಮೃತಪಟ್ಟವರ ಮುಖ ನೋಡಲು, ಅಗಲಿದವರನ್ನು ಅಪ್ಪಿಕೊಂಡು ಅಳುವ ಅವಕಾಶ ಕೂಡ ಇಲ್ಲ’ ಎಂದು ಜನ ದುಃ ಖಪಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಶ
ವ ಸಂಸ್ಕಾರಕ್ಕೂ ಕುಟುಂಬದವರು ಬರದಿರುವುದು ವರದಿ ಆಗುತ್ತಿದೆ. ಈ ವೇಳೆ ಜನ ಇಲ್ಲದೆ, ಶವ ಸಂಸ್ಕಾರ ಮಾಡುವುದು ಪಾಲಿಕೆಗೆ ಸವಾಲಾಗಿದೆ. “ನಗರದ ಹಲವು ಭಾಗಗಳಲ್ಲಿ ಕುಟುಂಬದ ಒಂದಿಬ್ಬರು ಸದಸ್ಯರು ಮಾತ್ರ ಅಂತಿಮ ಸಂಸ್ಕಾರದ ಕಾರ್ಯದಲ್ಲಿ ಭಾಗಿಯಾಗುತ್ತಿದ್ದಾರೆ. ಶವ ಸಂಸ್ಕಾರಕ್ಕೆ ಕನಿಷ್ಠ ನಾಲ್ಕು ಜನ ಬೇಕು.
ಆದರೆ, ಜನ ಕೋವಿಡ್ 19 ಸೋಂಕಿತರ ಶವಸಂಸ್ಕಾರಕ್ಕೆ ಹಿಂದೇಟು ಹಾಕುತ್ತಿರುವ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಿಗೆ ತಲಾ ಎರಡು ಶ್ರದ್ಧಾಂಜಲಿ ವಾಹನ ವ್ಯವಸ್ಥೆ ಮಾಡಲಾಗಿದ್ದು, ಇದರಲ್ಲಿ ಇಬ್ಬರು ಸಿಬ್ಬಂದಿ ಹಾಗೂ ಪಿಪಿಇ ಕಿಟ್ ವ್ಯವಸ್ಥೆಯನ್ನೂ ಮಾಡಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ