ಉಪನಗರದಿಂದ ಮೆಟ್ರೋಗೆ ಸಂಪರ್ಕ

ವರ್ಚುವಲ್ ಕನೆಕ್ಟಿವಿಟಿ ಮೂಲಕ ಸಂಪರ್ಕ ಸಾಧ್ಯತೆ „ ಬಸ್‌ ಸಂಖ್ಯೆ ಹೆಚ್ಚಿಸಿ ಜನರನ್ನು ಕರೆತರುವ ಯೋಚನೆ

Team Udayavani, Oct 5, 2021, 11:43 AM IST

metro

ಬೆಂಗಳೂರು: “ನಮ್ಮ ಮೆಟ್ರೋ’ ಅನ್ನು ನಗರದಿಂದ ಉಪನಗರಗಳಿಗೆ ಕೊಂಡೊಯ್ಯುವ ಬದಲಿಗೆ ಉಪನಗರಗಳಿಂದಲೇ ಜನರನ್ನು ನೇರವಾಗಿ ಮೆಟ್ರೋ ನಿಲ್ದಾಣಗಳಿಗೆ ಕರೆತಂದು ಬಿಡುವಂತಾದರೆ ಹೇಗೆ?

ಹತ್ತಾರು ಸಾವಿರ ಕೋಟಿ ರೂ. ಸುರಿದು ಹತ್ತಾರು ವರ್ಷಗಟ್ಟಲೆ ಸಮಯ ಹಿಡಿಯುವ ಮೆಟ್ರೋ ಯೋಜನೆಯ ಎದುರು ನೋಡುವ ಬದಲು ಅತ್ಯಲ್ಪ ಅವಧಿಯಲ್ಲಿ ರಾಮನಗರ, ಮಾಗಡಿ, ಕೆ.ಆರ್‌.ಪುರದಿಂದ ಹೊಸಕೋಟೆ (ಭವಿಷ್ಯದಲ್ಲಿ), ರೇಷ್ಮೆ ಸಂಸ್ಥೆಯಿಂದ ಕನಕಪುರಕ್ಕೆ ಮೆಟ್ರೋ ಸಂಪರ್ಕ ಬಸ್‌ ಸೇವೆಗಳ ಮಾದರಿಯಲ್ಲಿ “ವಚ್ಯುìವಲ್‌ ಕನೆಕ್ಟಿವಿಟಿ’ ನೀಡಲು ಸಾಧ್ಯವಿದೆ.

ಇದನ್ನೂ ಓದಿ;- ಪ್ರಿಯಾಂಕಾ ಗಾಂಧಿ ಅವರ ಹಕ್ಕನ್ನು ಕಸಿದದ್ದು ಇಡೀ ಭಾರತೀಯ ಸಂಸ್ಕೃತಿಗೆ ಮಾಡಿದ ಅಪಮಾನ: ಡಿಕೆಶಿ

ಇದರಿಂದ ಕೆಎಸ್‌ಆರ್‌ಟಿಸಿ ಅಥವಾ ಬಿಎಂಟಿಸಿಗೂ ಲಾಭವಾಗುತ್ತದೆ. ಜತೆಗೆ ಮೆಟ್ರೋಗೆ ಜನರನ್ನೂ ಕರೆತಂದಂತೆ ಆಗುತ್ತದೆ. ಇಂತಹದ್ದೊಂದು ಸುಲಭ ಮತ್ತು ಸರಳವಾಗಿ ಅನುಷ್ಠಾನಗೊಳಿಸಬಹುದಾದ ಯೋಚನೆಯೊಂದನ್ನು ತಜ್ಞರು ಮುಂದಿಟ್ಟಿದ್ದಾರೆ. ಇದರಿಂದ ಸಾವಿರಾರು ಕೋಟಿ ರೂ. ಸುರಿಯುವ ಅಗತ್ಯ ಇರುವುದಿಲ್ಲ.ಯೋಜನೆ ಯಿಂದ ಜನರ ಮೇಲೆ ಆರ್ಥಿಕ ಹೊರೆಯೂ ಆಗುವು ದಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಮತ್ತು ಸಂಬಂಧಪಟ್ಟ ಸಂಸ್ಥೆಗಳು ಚಿಂತನೆ ನಡೆಸಬೇಕಿದೆ ಎಂದು ತಜ್ಞರು ಹೇಳುತ್ತಾರೆ.

ಲೆಕ್ಕಾಚಾರ ಹೀಗಿದೆ: ಒಂದು ಕಿ.ಮೀ. ಮೆಟ್ರೋ ನಿರ್ಮಾಣಕ್ಕೆ 200 ಕೋಟಿ ರೂ. ಖರ್ಚಾಗುತ್ತದೆ. 50 ಕಿ.ಮೀ. ಅಂದಾಜು12ರಿಂದ 15 ಸಾವಿರ ಕೋಟಿ ರೂ. ವ್ಯಯಿಸಬೇಕು. ಇದಕ್ಕೆ ಸಾಕಷ್ಟು ಸಮಯವೂ ಹಿಡಿಯುತ್ತದೆ. ಭೂಸ್ವಾಧೀನ ಸೇರಿದಂತೆ ಹಲವು ಪ್ರಕ್ರಿಯೆಗಳನ್ನೂ ಕೈಗೊಳ್ಳಬೇಕು. ಆದರೆ, ಕೆಎಸ್‌ಆರ್‌ಟಿಸಿ ಅಥವಾಬಿಎಂಟಿಸಿಯೊಂದಿಗೆ ಕೈಜೋಡಿಸಿ, ಬಸ್‌ ರ್ಯಾಪಿಡ್‌ ಟ್ರಾನ್ಸಿಟ್‌ ಸಿಸ್ಟ್‌ಂ (ಬಿಆರ್‌ಟಿಎಸ್‌) ಮಾದರಿಯಲ್ಲಿ ಇದೇ ಮಾರ್ಗದಲ್ಲಿ ಸರ್ಕಾರಿ ಬಸ್‌ಗಳನ್ನು ಪರಿಚಯಿಸಬಹುದು.

ಬಸ್‌ಗಳನ್ನು ಒಪ್ಪಂದದ ಮೇರೆಗೆ ಪಡೆದು ಅಥವಾ ಆದಾಯ ಹಂಚಿಕೆ ಆಧಾರದಲ್ಲಿ ಕಾರ್ಯಾಚರಣೆ ಮಾಡಿದರೆ, ಸಮೂಹಸಾರಿಗೆಗೆ ಉತ್ತೇಜನ ನೀಡುವುದರ ಜತೆಗೆ ಆರ್ಥಿಕವಾಗಿಯೂ ಸಾಧುವೂ ಆಗುತ್ತದೆ ಎಂದುಬಿಎಂಆರ್‌ಸಿಎಲ್‌ ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಅಭಿಪ್ರಾಯಪಡುತ್ತಾರೆ.

ಪ್ರಸ್ತುತ ಒಂದು ಬಸ್‌ಗೆ ದಿನದ ಬಾಡಿಗೆ 10-12ಸಾವಿರ ರೂ. ಇದೆ. 50 ಕಿ.ಮೀ. ದೂರದಲ್ಲಿರುವ ರಾಮನಗರಕ್ಕೆ ನಿತ್ಯ ಬಸ್ಸೊಂದು ಕನಿಷ್ಠ 6 ಟ್ರಿಪ್‌ಗ್ಳನ್ನುಪೂರೈಸುತ್ತದೆ. ಕೆಂಗೇರಿಯಿಂದ ಈ ಅಂತರ ಕಡಿಮೆ ಆಗುವುದರ ಜತೆಗೆ ಸಂಚಾರದಟ್ಟಣೆ ಕಿರಿಕಿರಿ ಇರುವುದಿಲ್ಲ ಹಾಗೂ ಹತ್ತುಪಥದ ರಸ್ತೆಯೂ ಆ ಮಾರ್ಗದಲ್ಲಿ ಬರುತ್ತಿದೆ. ಹಾಗಾಗಿ, ಹೆಚ್ಚು ಟ್ರಿಪ್‌ಗ್ಳು ಪೂರೈಸಲೂ ಸಾಧ್ಯವಿದೆ. 6 ಟ್ರಿಪ್‌ಗ್ಳ ಲೆಕ್ಕಾಚಾರ

ಹಾಕಿದರೂ ಹತ್ತು ಬಸ್‌ಗಳನ್ನು ನಿಯೋಜಿಸಿ, ಒಂದು ಬಸ್‌ನಲ್ಲಿ ಸರಾಸರಿ 50 ಜನರಂತೆ ಅನಾಯಾಸವಾಗಿ 3ರಿಂದ 4 ಸಾವಿರ ಜನರನ್ನು ಕರೆತರಬಹುದು ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಹೇಳುತ್ತಾರೆ. ಈಗಾಗಲೇ ಉದ್ದೇಶಿತ ಮಾರ್ಗಗಳಲ್ಲಿ ಬಸ್‌ಗಳಿರಬಹುದು. ಆದರೆ, ವಿಶೇಷವಾಗಿ ಮೆಟ್ರೋ ಸಂಪರ್ಕ ಸೇವೆಗಳಿಗಾಗಿಯೇ ಮೀಸಲಾಗಿಲ್ಲ. ಬಸ್‌ ಮತ್ತು ಮೆಟ್ರೋ ಕಾರ್ಯಾಚರಣೆ ನಡುವೆ ಒಂದಕ್ಕೊಂದು ಹೊಂದಾಣಿಕೆ ಇಲ್ಲ. ಅಷ್ಟೇ ಅಲ್ಲ, ಪ್ರಯಾಣಿಕರು ಬಸ್‌ಗಳಿಗಾಗಿ ಕಾಯಬೇಕಾಗುತ್ತದೆ.

ಬೇರೆ ಕಡೆಯಿಂದ ಬರುವ ಬಸ್‌ಗಳು ಮೊದಲೇ ಭರ್ತಿ ಆಗಿರುತ್ತವೆ. ಈ ಎಲ್ಲ ಕಾರಣಗಳಿಂದ ಜನ ಹಿಂದೇಟು ಹಾಕುತ್ತಾರೆ.

ಮೆಟ್ರೋ ಪ್ರಯಾಣಿಕರಿಗೆ ರಿಯಾಯ್ತಿ ದರ

ಬಿಎಂಆರ್‌ಸಿಎಲ್‌ ಮನಸ್ಸು ಮಾಡಿದರೆ, ಉದ್ದೇಶಿತ ಮಾರ್ಗಗಳಲ್ಲಿ ಬಸ್‌ಗಳಲ್ಲಿ ಪ್ರಯಾಣಿಸುವ “ನಮ್ಮ ಮೆಟ್ರೋ’ ಪ್ರಯಾಣಿಕರಿಗೆ ರಿಯಾಯ್ತಿ ದರವನ್ನೂ ನಿಗದಿಪಡಿಸಬಹುದು. ಹೇಗೆಂದರೆ, ಮೆಟ್ರೋ ಸ್ಮಾರ್ಟ್‌ ಕಾರ್ಡ್‌ ಹೊಂದಿರುವವರಿಗೆ ರಿಯಾಯ್ತಿ ದರ. ಉಳಿದವರಿಗೆ ಮಾಮೂಲು ಪ್ರಯಾಣ ದರ ನಿಗದಿಪಡಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾÃ

“ಸರ್ಕಾರದಿಂದ ಹಣ ಭರಿಸಲಿ’

ದೂರದ ಊರುಗಳ ನಡುವೆ ಸಂಪರ್ಕ ಸೇವೆಗಳಲ್ಲಿ ಸಣ್ಣ ತಾಂತ್ರಿಕ ಸಮಸ್ಯೆಯೂ ಇದೆ. ಉದಾಹರಣೆಗೆ ಬೆಳಗ್ಗೆ ರಾಮನಗರದಿಂದ ಬೆಂಗಳೂರಿಗೆ ಬರುವ ಜನ ಹೆಚ್ಚಿರುತ್ತಾರೆ. ಅದೇ ರೀತಿ, ಸಂಜೆ ನಗರದಿಂದ ಹೊರಗೆ ಹೋಗುವವರು ಹೆಚ್ಚು. ಇಂತಹ ಸಂದರ್ಭದಲ್ಲಿ ಒಂದು ಮಾರ್ಗದಲ್ಲಿ ಪ್ರಯಾಣಿಕರ ಕೊರತೆ ಎದುರಿಸಬೇಕಾಗುತ್ತದೆ. ಇದಕ್ಕಾಗಿ ದರದಲ್ಲಿ ಹೊಂದಾಣಿಕೆ ಮಾಡಬಹುದುಅಥವಾ ಸರ್ಕಾರದಿಂದ ಆ ಕೊರತೆಯಾಗುವ ಹಣವನ್ನು ಭರಿಸುವಂತಾಗಬೇಕು.

ಟಾಪ್ ನ್ಯೂಸ್

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

Rap song: ವೋಟು ನಮ್ಮ ಪವರ್‌ ರ್‍ಯಾಪ್ ಸಾಂಗ್‌‌ ಬಿಡುಗಡೆ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

12-review

Movie Review: ಒಂದು ಸರಳ ಪ್ರೇಮ ಕಥೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.