ಕಳ್ಳಭಟ್ಟಿ: ಕ್ರಮಕ್ಕೆ ಚಿಂತನೆ
ಸಾಂಕ್ರಾಮಿಕ ರೋಗ ಕಾಯ್ದೆಯಡಿ ಅಗತ್ಯ ಕ್ರಮ
Team Udayavani, Apr 30, 2020, 2:25 PM IST
ಬೆಂಗಳೂರು: ರಾಜ್ಯದಲ್ಲಿ ಒಂದು ತಿಂಗಳ ಅವಧಿಯಲ್ಲಿ ಇಪ್ಪತೈದು ಹೊಸ ಕಳ್ಳಭಟ್ಟಿ ತಯಾರಿಕಾ ಕೇಂದ್ರಗಳು ಹುಟ್ಟಿ ಕೊಂಡಿವೆ. ಜತೆಗೆ ಈ ಹಿಂದೆ ಕಾರ್ಯ ಸ್ಥಗಿತಗೊಳಿಸಿದ್ದ
124 ಕೇಂದ್ರಗಳು ಮತ್ತೆ ದಂಧೆ ಶುರುವಿಟ್ಟುಕೊಂಡಿರುವುದು ಅಬಕಾರಿ ಹಾಗೂ ಪೊಲೀಸ್ ಇಲಾಖೆಗೆ ಸವಾಲಾಗಿದೆ. ಆಂಧ್ರ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಗೋವಾ ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಕಳ್ಳಭಟ್ಟಿ ತಯಾರಿಕೆ ಹೆಚ್ಚಾಗಿ ಕಂಡು ಬಂದಿದೆ. ಗಡಿ ಭಾಗವಾದ ಕುಪ್ಪಂ, ಹಿಂದೂಪುರ, ಕೆಜಿಎಫ್, ಚಾಮರಾಜನಗರ, ಬೆಳಗಾವಿ ಭಾಗದಲ್ಲಿ ಕಳ್ಳಭಟ್ಟಿ ದಂಧೆ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಲು ಸಾಂಕ್ರಾಮಿಗಳ ರೋಗಗಳ ಕಾಯ್ದೆಯಡಿ ತಂದು ಕಠಿಣ ಕ್ರಮ ಕೈಗೊಳ್ಳುವ ಬಗ್ಗೆ ಯೂ ಸರ್ಕಾರ ಚಿಂತನೆ ನಡೆಸಿದೆ. ಈ ಕುರಿತು ಉದಯವಾಣಿ ಜತೆ ಮಾತನಾಡಿದ ಅಬಕಾರಿ ಸಚಿವ ಎಚ್. ನಾಗೇಶ್, ಮದ್ಯ ಮಾರಾಟ ನಿರ್ಬಂಧ ಬೆನ್ನಲ್ಲೇ ಕಳ್ಳಭಟ್ಟಿ ದಂಧೆ ನಮಗೆ ಸಮಸ್ಯೆ ತಂದೊಡ್ಡಿದೆ. ಹಳೆಯ ಜಾಲದ ಜತೆಗೆ ಹೊಸಬರು ಸೇರಿಕೊಂಡು ಕೇಂದ್ರ ಪ್ರಾರಂಭಿಸಿರುವುದು ಪತ್ತೆಯಾಗಿದೆ. ಇದುವರೆಗೂ 3735 ಲೀಟರ್ ಕಳ್ಳ ಭಟ್ಟಿ ವಶಕ್ಕೆ ಪಡೆದು 25 ಪ್ರಕರಣ ದಾಖಲಿಸಲಾಗಿದೆ. ಈಗಿನ ಶಿಕ್ಷೆಗಿಂತ ಕಠಿಣ ಶಿಕ್ಷೆ ನೀಡುವ ಬಗ್ಗೆ ಯೂ ಮಾತುಕತೆ ನಡೆದಿದೆ. ಕಠಿಣ ಕಾಯ್ದೆಯಡಿ ಕಳ್ಳಭಟ್ಟಿ ದಂಧೆ ತರಲಾಗುವುದು ಎಂದು ಹೇಳಿದ್ದಾರೆ.
ಆದಾಯಕೆ ಕೊಕ್ಕೆ
ಕೊರೊನಾ ಎಫೆಕ್ಟ್ನಿಂದಾಗಿ ಅಬಕಾರಿ ಇಲಾಖೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದಿನ ಮಾರಾಟ ಸ್ಥಗಿತಗೊಳಿಸಿದಂತಾಗಿದೆ. ಲಾಕ್ಡೌನ್ನಿಂದಾಗಿ ಏಪ್ರಿಲ್ನಲ್ಲಿ ಅಬಕಾರಿ ಆದಾಯ 1745 ಕೋಟಿ ರೂ. ಖೋತಾ ಆಗಿದೆ. ಮಾರ್ಚ್ ನಲ್ಲೂ 400 ಕೋಟಿ ರೂ. ಕಡಿಮೆ ಆಗಿತ್ತು ಎಂದು ಹೇಳಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ
Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್ ಆತ್ಮಹತ್ಯೆ
MUST WATCH
ಹೊಸ ಸೇರ್ಪಡೆ
Crime: ಸ್ನೇಹಿತನನ್ನೇ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳ ಸೆರೆ
Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!
Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ
Glanders infection: ಗ್ಲ್ಯಾಂಡರ್ಸ್ ಸೋಂಕು; ಬೆಂಗಳೂರು ತೊರೆದ ಕುದುರೆ ಮಾಲೀಕ, ಸವಾರ
Chain theft: ಒಂಟಿ ಮಹಿಳೆಯರ ಸರ ಕದಿಯುತ್ತಿದ್ದ 5 ಬಂಧನ; 10.82 ಲಕ್ಷದ ವಸ್ತು ಜಪ್ತಿ