ವಿದ್ಯುತ್‌ ಬಿಲ್‌ನಲ್ಲಿ ದೋಷವಿಲ್ಲ


Team Udayavani, May 14, 2020, 4:16 AM IST

bil current

ಬೆಂಗಳೂರು: ಕಳೆದ ಮಾರ್ಚ್‌, ಏಪ್ರಿಲ್‌ ತಿಂಗಳ ವಿದ್ಯುತ್‌ ಬಳಕೆಗೆ ಸಂಬಂಧಪಟ್ಟಂತೆ ಎಸ್ಕಾಂಗಳು ರಾಜ್ಯಾದ್ಯಂತ ವಿತರಿಸಿರುವ ಬಿಲ್‌ ಸಮರ್ಪಕ ವಾಗಿದ್ದು, ಯಾವುದೇ ಲೋಪವಾಗಿಲ್ಲ. ಲೆಕ್ಕಾಚಾರ ತಪ್ಪಾಗಿದೆ ಎನಿಸಿ ದರೆ ಎಸ್ಕಾಂನಿಂದ ಸ್ಪಷ್ಟನೆ ಪಡೆದು ನಂತರವೇ ಪಾವತಿ ಸಬಹುದು ಎಂದು ಇಂಧನ ಇಲಾಖೆ ಸ್ಪಷ್ಪಡಿಸಿದೆ. ಬೆಸ್ಕಾಂ ವ್ಯಾಪ್ತಿಯಲ್ಲಿ ಕಂಟೈನ್‌ಮೆಂಟ್‌, ಸೀಲ್‌ಡೌನ್‌ ಪ್ರದೇಶದ ಬಳಕೆದಾರರು ಹಾಗೂ ಮೀಟರ್‌ ಮಾಪನ ಸಾಧ್ಯವಾಗದ,  ಬಳಕೆದಾರರಿ ಲ್ಲದ ಸಂಪರ್ಕಗಳಿಗೂ ಸರಾ ಸರಿ ಮೊತ್ತದ ಬಿಲ್‌ ನೀಡಲಾಗಿದ್ದು, ಆ ಬಳಕೆದಾರ ರಿಗೆ ಜೂ. 30ರವರಗೆ ಬಿಲ್‌ ಪಾವತಿಗೆ ಅವಕಾಶ ನೀಡ ಲಾಗಿದೆ.

ಗ್ರಾಹಕರು ಫೆಬ್ರವರಿ ತಿಂಗಳ ವಿದ್ಯುತ್‌ ಬಳಕೆ ಹಾಗೂ ಮೇ ತಿಂಗಳ ಬಳಕೆ  ಪ್ರಮಾಣವನ್ನು ತಾಳೆ ಹಾಕಿ ದರೆ ಮಾರ್ಚ್‌, ಏಪ್ರಿಲ್‌ ತಿಂಗಳ ಒಟ್ಟು ಬಳಕೆ ಪ್ರಮಾಣ ತಿಳಿಯಬಹುದು. ನಂತರ ಅದಕ್ಕೆ ನಿಗದಿತ ಶುಲ್ಕ ಅನ್ವ ಯಿಸಿದರೆ ಸ್ಪಷ್ಟ ಲೆಕ್ಕ ಸಿಗಲಿದೆ ಎಂದು ಇಲಾಖೆ ತಿಳಿಸಿದೆ. ಲೋಪವಾಗಿದ್ದರೆ ಎಸ್ಕಾಂ ಸಂಪರ್ಕಿಸಬಹುದು. ಗೊಂದಲಗಳಿ ದ್ದಲ್ಲಿ ಬಿಲ್‌ ಪಾವತಿಗೆ ಜೂ. 30ರವರೆಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದೆ. ಬೆಸ್ಕಾಂ ಕಾರ್ಪೊರೇಟ್‌ ಕಚೇರಿಯಲ್ಲಿ ಬುಧ ವಾರ ಪತ್ರಿಕಾಗೋಷ್ಠಿ ನಡೆಸಿದ  ಇಂಧನ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌, ಲಾಕ್‌ಡೌನ್‌ ನಿಂದಾಗಿ ಮಾರ್ಚ್‌ ತಿಂಗಳ ವಿದ್ಯುತ್‌ ಬಳಕೆಗೆ ಸಂಬಂಧಪಟ್ಟಂತೆ ಮೀಟರ್‌ ಮಾಪ ಕರು ಮನೆ ಮನೆಗೆ ತೆರಳಿ ಬಿಲ್‌ ಸಿದಟಛಿಪಡಿ ಸಲು  ಸಾಧ್ಯವಾಗಿರಲಿಲ್ಲ.

ಆ ಹಿನ್ನೆಲೆ ಯಲ್ಲಿ ಡಿಸೆಂಬರ್‌, ಜನವರಿ ಹಾಗೂ ಫೆಬ್ರವರಿ ತಿಂಗಳ ವಿದ್ಯುತ್‌ ಬಳಕೆ ಸರಾಸರಿ ಬಿಲ್‌ ವಿಧಸಲಾಗಿತ್ತು. ಮೇ ಮೊದಲ ವಾರದಲ್ಲಿ ಮೀಟರ್‌ ಮಾಪನ ನಡೆಸಿ ಎರಡು ತಿಂಗಳ ವಾಸ್ತವ ಬಳಕೆಗೆ ನಿಖರ ಬಿಲ್‌  ನೀಡಲಾಗಿದೆ ಎಂದು ತಿಳಿಸಿದರು. ಮೀಟರ್‌ ದೋಷದಿಂದ ಬಿಲ್‌ ಮೊತ್ತ ವ್ಯತ್ಯಾಸ, ಸ್ಯಾಬ್‌ಗ ಅನುಗುಣವಾಗಿ ಶುಲ್ಕ ನಿಗದಿಯಲ್ಲಿ ವ್ಯತ್ಯಯ ವಾಗಿದ್ದರೆ, ಲೆಕ್ಕಾಚಾರ ಏರುಪೇರಾಗಿದ್ದರೆ ಹೊಸ ಬಿಲ್‌ ನೀಡಲಾಗುವುದು. ಎಂಎಸ್‌ಎಂಇ  ಕೈಗಾರಿಕಾ ಬಳಕೆದಾರರಿಗೆ ಏಪ್ರಿಲ್‌, ಮೇ ತಿಂಗಳ ಬಿಲ್‌ಗ‌ಳಿಗೆ ನಿಗದಿತ ಶುಲ್ಕವನ್ನು ಸರ್ಕಾರ ಮನ್ನಾ ಮಾಡಿದೆ. ಹಾಗಾಗಿ ಮಾರ್ಚ್‌ ತಿಂಗಳ ಶುಲ್ಕ ನಿಗದಿತ ಶುಲ್ಕದ ಜತೆಗೆ ಉಳಿದ ಬಿಲ್‌  ಮೊತ್ತವನ್ನಷ್ಟೇ ಪಾವತಿಸಬೇಕು ಎಂದರು.

ಮಾಸಿಕ 4,235 ಕೋಟಿ ರೂ. ವೆಚ್ಚ: ವಿದ್ಯುತ್‌ ಪೂರೈಕೆ ಸೇರಿದಂತೆ ಇತರೆ ವೆಚ್ಚಕ್ಕಾಗಿ ಎಲ್ಲ ಎಸ್ಕಾಂಗಳಿಗೂ ಮಾಸಿಕ 4,235 ಕೋಟಿ ರೂ. ವಿನಿಯೋಗವಾಗುತ್ತದೆ. ಎಸ್ಕಾಂಗಳು ವಿದ್ಯುತ್‌ ಖರೀದಿಗೆ 2,956 ಕೋಟಿ ರೂ. ವೆಚ್ಚ ಮಾಡಬೇಕಾಗುತ್ತದೆ. ನೌಕರರ ವೇತನ ಪಾವತಿಗೆ 650 ಕೊಟಿ ರೂ., ಸಾಲದ ಮೇಲಿನ ಬಡ್ಡಿ ಪಾವತಿಗೆ 727 ಕೋಟಿ ರೂ. ಭರಿಸಬೇಕಾಗುತ್ತದೆ. ಸರ್ಕಾರದಿಂದ ಸಬ್ಸಿಡಿ ರೂಪದಲ್ಲಿ 700 ಕೋಟಿ ರೂ. ಮಾತ್ರ ಸಿಗಲಿದೆ. ಹಣ ಪಾವತಿಸದೆ  ವಿದ್ಯುತ್‌ ಖರೀದಿಗೆ ಅವಕಾಶ ವಿರುವುದಿಲ್ಲ. ಆ ಹಿನ್ನೆಲೆಯಲ್ಲಿ ಸರಾಸರಿ ಬಿಲ್‌ ನೀಡುವುದು  ಅನಿವಾರ್ಯ ಎಂದು ಮಹೇಂದ್ರ ಜೈನ್‌ ತಿಳಿಸಿದರು.

ಕರೆಂಟ್‌ ಬಳಕೆ ಹೆಚ್ಚಾಗಿದೆ: ಒಂದೆಡೆ ಬೇಸಿಗೆ, ಮತ್ತೂಂದೆಡೆ ಲಾಕ್‌ಡೌನ್‌ ಜಾರಿಯಿಂದಾಗಿ ಎಲ್ಲ ಜನ ಮನೆಯಲ್ಲಿದ್ದುದರಿಂದ ವಿದ್ಯುತ್‌ ಬಳಕೆ ಹೆಚ್ಚಾಗಿರುವ ಸಾಧ್ಯತೆ ಇದೆ. ಐಟಿ-ಬಿಟಿ ಸೇರಿದಂತೆ ಇತರ ವಲಯದ ಉದ್ಯೋಗಿಗಳು  ಮನೆಯಿಂದಲೇ ಕಾರ್ಯ ನಿರ್ವಹಿಸಿರುವುದ ರಿಂದ ವಿದ್ಯುತ್‌ ಬಳಕೆ ಹೆಚ್ಚಾಗಿರಬಹುದು. ಹಾಗಾಗಿ ಬೆಸ್ಕಾಂನಿಂದ ಯಾವುದೇ ಲೋಪವಾಗಿಲ್ಲ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಶ್‌ಗೌಡ ಎಂದರು.

1.8 ಲಕ್ಷ ಮನೆಗೆ ಬೀಗ- ಸರಾಸರಿ ಬಿಲ್‌: ಬೆಸ್ಕಾಂ ವ್ಯಾಪ್ತಿಯಲ್ಲಿ ಒಟ್ಟು 79.80 ಲಕ್ಷ ಗ್ರಾಹಕರಿಗೆ ಬಿಲ್‌ ನೀಡಲಾಗಿದೆ. ಮನೆಗಳಿಗೆ ಬೀಗ ಹಾಕಿದ್ದರೂ ಹೊರಭಾಗದಲ್ಲಿ ಮೀಟರ್‌ ಇರುವ ಕಡೆ ಬಿಲ್‌ ಇಡಲಾಗಿದೆ. ಆದರೆ ಮೀಟರ್‌  ಒಳಭಾಗದಲ್ಲಿರುವುದು ಸೇರಿದಂತೆ ಮೀಟರ್‌ ಮಾಪನಕ್ಕೆ ಅವಕಾಶ ಸಿಗದ ಕಡೆ “ಮನೆ ಬೀಗ’ ಎಂದು ನಮೂದಿಸಿ ಸರಾಸರಿ ಬಿಲ್‌ ವಿಧಿಸಲು ಅವಕಾಶವಿದೆ ಎಂದರು. ಕಂಟೈನ್ಮೆಂಟ್‌ ಪ್ರದೇಶ, ಸೀಲ್‌ಡೌನ್‌ ಪ್ರದೇಶದವರಿಗೂ ಸರಾಸರಿ ಬಿಲ್‌  ನೀಡಿರುವ ಸಾಧ್ಯತೆ ಇದೆ. ಊರಿಗೆ ತೆರೆಳಿದ್ದವರು ಮರಳಿದ ಬಳಿಕ ಸಮೀಪದ ಕಚೇರಿಗೆ ಮಾಹಿತಿ ನೀಡಬಹುದು. ಇಲ್ಲವೇ ಮೀಟರ್‌ನ ಪ್ರಸ್ತುತ ರೀಡಿಂಗ್‌ನ ಫೋಟೋ ತೆಗೆದು ಬೆಸ್ಕಾಂ ವಾಟ್ಸ್‌ ಆ್ಯಪ್‌ ಸಂಖ್ಯೆ 94498 44640ಗೆ  ಕಳುಹಿಸಿದರೆ ನಿಖರ ಬಿಲ್‌ ವಿವರ ನೀಡಲಾಗುತ್ತದೆ ಎಂದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.