ನಗರದಲ್ಲಿ ಧಾರಾಕಾರ ಮಳೆ
Team Udayavani, Jun 7, 2020, 5:24 AM IST
ಬೆಂಗಳೂರು: ನಗರದಲ್ಲಿ ಶನಿವಾರ ಧಾರಾಕಾರ ಮಳೆಯಾಗಿದ್ದು, 16ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಶನಿವಾರ ಮಧ್ಯಾಹ್ನ ಪ್ರಾರಂಭವಾದ ಮಳೆ ಸಂಜೆ 6 ಗಂಟೆಯವರೆಗೆ ನಗರದ ಹಲವೆಡೆ ಸುರಿಯಿತು. ಕತ್ರಿಗುಪ್ಪೆ, ನ್ಯಾಷನಲ್ ಕಾಲೇಜು, ಜಯನಗರ 7ನೇ ಹಂತ, ಎಂಸಿ ಲೇಔಟ್, ಜೆ.ಪಿ.ನಗರ ಮೊದಲ ಹಂತ, ಮೂಡಲಪಾಳ್ಯದ ಪಂಚಶೀಲ ನಗರ ಹಾಗೂ ಹೊಸಕೆರೆಹಳ್ಳಿ ಸೇರಿದಂತೆ ವಿವಿಧೆಡೆ ಮರಗಳು ಧರೆಗುರುಳಿವೆ.
ರಾಜರಾಜೇಶ್ವರಿ ನಗರದ ಗ್ರೂಪ್ ಡಿ ಲೇಔಟ್ನಲ್ಲಿ ಚರಂಡಿಯಲ್ಲಿ ಹೂಳು ತುಂಬಿದ್ದ ಹಿನ್ನೆಲೆಯಲ್ಲಿ ಈ ಪ್ರದೇಶ ಜಲಾವೃತ್ತವಾಯಿತು. ಎನ್ಜಿಎಫ್ನ ಅಪಾರ್ಟ್ಮೆಂಟ್ ಗೂ ಮಳೆ ನೀರು ನುಗ್ಗಿದ ಹಿನ್ನೆಲೆ ಯಲ್ಲಿ ಸಾರ್ವಜನಿಕರು ಪರದಾಡುವಂತಾಯಿತು. ಅದೇ ರೀತಿ ಜ್ಞಾನ ಭಾರತಿ ವಾರ್ಡ್ನಲ್ಲಿ ರಸ್ತೆಯಲ್ಲಿ ನೀರು ನಿಂತು ಸಮಸ್ಯೆ ಸೃಷ್ಟಿಯಾಗಿದೆ. ಮಳೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ಬಿಬಿಎಂಪಿಯ ಸಹಾಯವಾಣಿಯ ಸಿಬ್ಬಂದಿ ತಿಳಿಸಿದ್ದಾರೆ.
ಎಲ್ಲೆಲ್ಲಿ ಎಷ್ಟು ಮಳೆ?: ಕೆಂಗೇರಿ 73 ಮಿ.ಮೀ, ಸಿಂಗಸಂದ್ರ 58 ಮಿ.ಮೀ, ಮಾರುತಿ ಮಂದಿರ 56 ಮಿ.ಮೀ, ಹಂಪಿನಗರ 53 ಮಿ.ಮೀ, ಬೇಗೂರು 50ಮಿ.ಮೀ, ನಾಗರಬಾವಿ 48.5 ಮಿ.ಮೀ, ಅಗ್ರಹಾರ ಮತ್ತು ದಾಸರಹಳ್ಳಿ 46.5 ಮಿ.ಮೀ, ಕೋರ ಮಂಗಲ 43 ಮಿ.ಮೀ, ಬಸವನನಗರ 43 ಮಿ.ಮೀ, ರಾಜರಾಜೇಶ್ವರಿ ನಗರ 41 ಮಿ.ಮೀ, ಗಾಯಿತ್ರಿ ನಗರ 38 ಮಿ.ಮೀ, ಕೊಟ್ಟಿಗೆಪಾಳ್ಯ 34 ಮಿ.ಮೀ, ಅರಕೆರೆ 32.5 ಮಿ.ಮೀ, ಬಿಳೆಕ್ಕಹಳ್ಳಿ 28.5 ಮಿ.ಮೀ, ಸಾರಕ್ಕಿ 29.5 ಮಿ.ಮೀ, ಬೊಮ್ಮನಹಳ್ಳಿ 27.5 ಮಿ.ಮೀ, ಕುಮಾರಸ್ವಾಮಿ ಲೇಔಟ್ 26 ಮಿ.ಮೀ, ಚಾಮರಾಜಪೇಟೆ 21.5 ಮಿ.ಮೀ, ನಾಗಾಪುರ 19 ಮಿ.ಮೀ, ಉತ್ತರಹಳ್ಳಿ 19 ಮಿ.ಮೀ, ಕೋಣನಕುಂಟೆ 18 ಮಿ.ಮೀ ಸೇರಿದಂತೆ ಇತರೆಡೆ ಮಳೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ