ಬೀರಲಿಂಗೇಶರ ದೇವರ ಬನ್ನಿ ಉತ್ಸವ
Team Udayavani, Oct 23, 2021, 7:37 PM IST
ಹೊನ್ನಾಳಿ: ತಾಲೂಕಿನ ದಿಡಗೂರುಹರಳಹಳ್ಳಿ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವರ ಬನ್ನಿ ಉತ್ಸವ ಹಾಗೂ ಉಯ್ನಾಲೆ ಕಾರ್ಯಕ್ರಮಗಳು ಶುಕ್ರವಾರ ಶ್ರದ್ಧಾ ಭಕ್ತಿಯಿಂದ ನೆರವೇರಿದವು. ಗ್ರಾಮದ ಬೀರಲಿಗೇಶ್ವರ ದೇವಾಲಯದ ಅವರಣದಿಂದ ಪುಷ್ಪಾಲಂಕೃತ ಪಲ್ಲಕ್ಕಿಯಲ್ಲಿ ಬೀರದೇವರನ್ನು ಪ್ರತಿಷ್ಠಾಪಿಸಿ ಗ್ರಾಮದ ವಿವಿಧ ದೇವಾಲಯಗಳಿಗೆ ಕೊಂಡೊಯ್ಯಲಾಯಿತು. ನಂತರ ದಿಡಗೂರು ಗ್ರಾಮದ ಶ್ರೀ ಆಂಜನೇಯ ದೇವರ ದರ್ಶನ ಪಡೆದು ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಗ್ರಾಮದ ಹೊರ ವಲಯದಲ್ಲಿರುವ ಕಲ್ಲುಗುಡಿಗೆ ಬೀರದೇವರ ಉತ್ಸವ ಮೂರ್ತಿಯನ್ನು ತಂದು ಪೂಜಾ ಕೈಂಕರ್ಯ ನಡೆಸಲಾಯಿತು. ಇದಾದ ಬಳಿಕ ಕಲ್ಲುಗುಡಿ ಅವರಣದಲ್ಲಿ ಗ್ರಾಮದ ಸ್ವಾಮೀಜಿಗಳಿಂದ ಶಮಿವೃಕ್ಷಕ್ಕೆ ಪೂಜೆ ಮಾಡಿಸಲಾಯಿತು. ಬೀರದೇವರ ಪೂಜಾರಿಯಿಂದ ಅಂಬು ಬಿಡುವ ಕಾರ್ಯ ನೆರವೇರಿತು. ನಂತರ ಶ್ರೀಗಳ ನೇತೃತ್ವದಲ್ಲಿ ಭಕ್ತರಿಗೆ ಬನ್ನಿ ವಿತರಿಸಲಾಯಿತು. ಬೀರಪ್ಪ ಹಾಗೂ ದುರ್ಗಮ್ಮ ದೇವರ ಮೂರ್ತಿಗಳನ್ನು ಉಯ್ನಾಲೆಗಳಲ್ಲಿ ಕೂರಿಸಿ ಉಯ್ನಾಲೆ ತೂಗಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ
PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Gayatri Siddeshwar: ಸಮಗ್ರ ನೀರಾವರಿ ಸೌಲಭ್ಯಕ್ಕೆ ಆದ್ಯತೆ; ಗಾಯಿತ್ರಿ
Harihara ಬಿಜೆಪಿ ಶಾಸಕ ಬಿ.ಪಿ.ಹರೀಶ್ಗೆ ಜೀವ ಬೆದರಿಕೆ