ಪೈಪಲೈನ್ ಒಡೆದು ಚಿಮ್ಮಿದ ನೀರು
Team Udayavani, Jun 27, 2020, 11:27 AM IST
ದಾವಣಗೆರೆ: ಪೈಪ್ಲೈನ್ ಒಡೆದು ನೀರು ಚಿಮ್ಮುತ್ತಿರುವುದು.
ದಾವಣಗೆರೆ: ಜಿಲ್ಲೆಯ ಪೂರ್ವ ಭಾಗದ ಕೆರೆಗಳಿಗೆ ನೀರು ತುಂಬಿಸುವ ಮುಖೇನ ಕುಡಿಯುವ ನೀರು ಒದಗಿಸುವ ಮಹತ್ವಾಕಾಂಕ್ಷಿತ 22 ಕೆರೆಗಳ ಏತ ನೀರಾವರಿ ಯೋಜನೆಗೆ ದಶಕವೇ ಕಳೆದರೂ ವಿಘ್ನಗಳು ಮಾತ್ರ ತಪ್ಪುತ್ತಿಲ್ಲ.
ಹತ್ತು ವರ್ಷಗಳ ಹಿಂದೆ ಸ್ವತಃ ಮಠಾಧೀಶರರು 22 ಕೆರೆಗಳ ಏತ ನೀರಾವರಿ ಜಾರಿಗೆ ಒತ್ತಾಯಿಸಿ ರೈತರು, ಜನಸಾಮಾನ್ಯರು ನಡೆಸಿದ ಹೋರಾಟದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಧಿಕಾರವಧಿಯಲ್ಲಿ ಯೋಜನೆಗೆ ಹಸಿರು ನಿಶಾನೆ ದೊರೆತು ಕಾಮಗಾರಿಯು ಪ್ರಾರಂಭವಾಗಿತ್ತು. ಆದರೆ, ಈವರೆಗೆ ಯೋಜನೆಯ ಮೂಲ ಉದ್ದೇಶ ಮಾತ್ರ ಈಡೇರಿಲ್ಲ. ಈಗ ಈಡೇರುವ ಲಕ್ಷಣಗಳು ಕಾಣುತ್ತಲೂ ಇಲ್ಲ. ಪೈಪ್ ಲೈನ್ ಒಡೆದು ಲಕ್ಷಾಂತರ ಲೀಟರ್ ನೀರು ಪೋಲಾಗುವುದು ಸಾಮಾನ್ಯ ಎನ್ನುವಂತಾಗಿದೆ.
ಕಳೆದ ಸೋಮವಾರ(ಜೂ.22) ರಂದು ಸಂಸದ ಜಿ.ಎಂ. ಸಿದ್ದೇಶ್ವರ್ ಇತರೆ ಜನಪ್ರತಿನಿಧಿಗಳು ನೀರು ಹರಿಸುವ ಕಾರ್ಯಕ್ಕೆ ಚಾಲನೆ ನೀಡಿದ ದಿನವೇ ಕೆಲವು ಕಡೆ ಪೈಪ್ ಒಡೆದು ನೀರು ಪೋಲಾಗಿತ್ತು. ಕೆಲವೇ ದಿನಗಳ ಅಂತರದಲ್ಲಿ ಶುಕ್ರವಾರ ಹರಿಹರ-ದಾವಣಗೆರೆ ಮಧ್ಯೆ ಮತ್ತೆ ಪೈಪ್ ಒಡೆದು ನೀರು ಪೋಲಾಯಿತು. ಕಾರಂಜಿಯಂತೆ ನೀರು ಚಿಮ್ಮುವುದನ್ನ ಜನರು ಬೆಕ್ಕಸ ಬೆರಗಾಗುವಂತೆ ನೋಡಿದರು. ಪೈಪ್ ಲೈನ್ ಒಡೆಯುವುದು, ನೀರು ಪೋಲಾಗುವುದು ತಪ್ಪುವುದು ಯಾವಾಗ ಎನ್ನುವುದೇ ಜನ ಸಾಮಾನ್ಯರ ಪ್ರಶ್ನೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮೋದಿ 3ನೇ ಬಾರಿ ಪ್ರಧಾನಿಯಾಗಲು ಸಹಕರಿಸಿ: ಗಾಯತ್ರಿ ಸಿದ್ದೇಶ್ವರ
ಕರ್ತವ್ಯ ಲೋಪ: ಪರೀಕ್ಷಾ ಕೇಂದ್ರದ ಕೊಠಡಿ ಮೇಲ್ವಿಚಾರಕ ರಿಯಾಜ್ ಅಹಮ್ಮದ್ ಅಮಾನತು
Election Campaign: ಮೋದಿಯವರಿಂದ ಮಹಿಳಾ ಶಕ್ತಿಗೆ ಮುನ್ನುಡಿ
Davanagere: ಬಿಜೆಪಿ ಅಸಮಾಧಾನ ತಣಿಸಿದ ಬಿಎಸ್ ವೈ; ರವೀಂದ್ರನಾಥ್ ಗೆ ಚುನಾವಣೆ ಹೊಣೆ
Gayatri Siddeshwar: ಮೋದಿ ಕೈ ಬಲಪಡಿಸಲು ಬಿಜೆಪಿ ಗೆಲ್ಲಿಸಿ; ಗಾಯತ್ರಿ
MUST WATCH
ಹೊಸ ಸೇರ್ಪಡೆ
Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ
Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ
Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ
ʼAadujeevithamʼ Twitter review: ಪೃಥ್ವಿರಾಜ್ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?
Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ