ಮಳೆಗೆ ಮಾವು-ಟೊಮೆಟೋ ಬೆಳೆ ನಷ್ಟ
19 ಎಕರೆ ತೋಟಗಾರಿಕಾ ಬೆಳೆ ನಾಶ: ರೈತರಲ್ಲಿ ಹೆಚ್ಚಿದ ಆತಂಕ
Team Udayavani, Apr 9, 2020, 12:58 PM IST
ಹರಪನಹಳ್ಳಿ: ತಾಲೂಕಿನಾದ್ಯಂತ ಮಂಗಳವಾರ ರಾತ್ರಿ ಸುರಿದ ಮಳೆಗೆ ಮನೆಗಳು ಭಾಗಶಃ ಹಾನಿಗೊಳಗಾಗಿದ್ದು, ದಾಳಿಂಬೆ, ಬಾಳೆ, ಸಪೋಟ, ಪಪ್ಪಾಯಿ, ಅಡಕೆ, ಮಾವು, ಟೊಮೆಟೋ ಬೆಳೆ ನೆಲಕಚ್ಚಿದೆ. ಅಲ್ಲದೇ ಶೇಂಗಾ, ಕೊತ್ತಂಬರಿ, ಮೆಂತೆ ಸೊಪ್ಪು ಬೆಳೆಗಳು ಹಾಳಾಗಿವೆ. ಬಾಗಳಿ ಗ್ರಾಮದಲ್ಲಿ 3 ಮನೆ, ಅಡವಿಹಳ್ಳಿ-2, ತೋಗರಿಕಟ್ಟೆ-3, ನಂದಿಬೇವೂರು ಸೇರಿ ಒಟ್ಟು 9 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಬಾಗಳಿ ಗ್ರಾಮದಲ್ಲಿ 5 ಎಕರೆ ಪಪ್ಪಾಯಿ, 5 ಎಕರೆ ಬಾಳೆ, 2 ಎಕರೆ ಅಡಕೆ, ತೋಗರಿಕಟ್ಟೆ ಗ್ರಾಮದಲ್ಲಿ 5 ಎಕರೆ ದಾಳಿಂಬೆ, 2 ಎಕರೆ ಸಪೋಟ ಸೇರಿದಂತೆ ಒಟ್ಟು 19 ಎಕರೆ ತೋಟಗಾರಿಕೆ ಬೆಳೆ ಹಾಳಾಗಿದೆ.
ಕಸಾಬ ಹೋಬಳಿಗೆ ಸೇರಿದ ಪಟ್ಟಣದ ಹೊರವಲಯದ ಕಾಯಕದಹಳ್ಳಿ ರಸ್ತೆಯಲ್ಲಿರುವ ಕೆ.ಎಂ. ಬಸವರಾಜಯ್ಯ ಎಂಬುವವರ ತೋಟದಲ್ಲಿ ಸುಮಾರು ಎರಡು ಎಕರೆ ಪ್ರದೇಶದ ಮಾವು ಬೆಳೆ ಮಳೆ ಗಾಳಿಗೆ ನೆಲಕ್ಕುರುಳಿದೆ. ಇದರಿಂದ ಲಕ್ಷಾಂತರರೂ ಕಷ್ಟ ಸಂಭವಿಸಿದೆ. ತಾಲೂಕಿನ ಕೊಂಗನಹೊಸೂರು, ನಂದಿಬೇವೂರು, ಬಾವಿಹಳ್ಳಿ, ಕಣವಿಹಳ್ಳಿ, ಚಿಗಟೇರಿ ಸುತ್ತಮುತ್ತ ಆಲಿಕಲ್ಲು ಸಹಿತ ಎರಡು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಗೋಕಟ್ಟೆ, ಹಳ್ಳಗಳು ತುಂಬಿಕೊಂಡಿವೆ.
ಕೊಂಗನಹೊಸೂರು ಹಳ್ಳ ತುಂಬಿ ಹರಿದಿದ್ದು, ಈ ಭಾಗದ ರೈತರಿಗೆ ಸಂತಸ ತಂದಿದೆ. ನಂದಿಹಳ್ಳಿ ಈಶಪ್ಪ ಎಂಬುವವರ ಹೊಲದಲ್ಲಿ ಬೆಳೆಯಲಾದ ಮೆಂತೆ ಸೊಪ್ಪು ಆಲಿಕಲ್ಲು ಮಳೆಗೆ ಸಂಪೂರ್ಣ ಹಾಳಾಗಿದೆ. ಕೊಂಗನಹೊಸೂರು ಗ್ರಾಮದ ರೈತರ ಹೊಲದಲ್ಲಿ ಬೆಳೆಯಲಾದ ಶೇಂಗಾ, ಕೊತ್ತಂಬರಿ ಮೆಂತೆ ಸೊಪ್ಪು ಬೆಳೆಗಳು ಹಾಳಾಗಿವೆ. ಕಣಿವಿಹಳ್ಳಿ ಗ್ರಾಮದ ರೈತ ಹೊನ್ನಪ್ಪ ಎಂಬುವವರಿಗೆ ಸೇರಿದ 1 ಎಕರೆ ಟೊಮೆಟೋ ಮತ್ತು 1 ಎಕರೆ ಈರುಳ್ಳಿ ಬೆಳೆ ನೆಲಕಚ್ಚಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
ಹಗರಿಬೊಮ್ಮನಹಳ್ಳಿ: ಶುದ್ಧ ನೀರಿನ ಘಟಕಕ್ಕೆ ಉದ್ಘಾಟನೆ ಭಾಗ್ಯವೆಂದು?
Neha Hiremath Case; ಬಿಜೆಪಿ-ಜೆಡಿಎಸ್-ಎಬಿವಿಪಿಯಿಂದ ರಾಜ್ಯದೆಲ್ಲೆಡೆ ಪ್ರತಿಭಟನೆ
Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ