ರೈತನಿಂದ ಕ್ಯಾರೆಟ್-ಎಲೆಕೋಸು ನಾಶ
Team Udayavani, May 17, 2020, 11:29 AM IST
ಜಗಳೂರು: ಬೈರನಾಯಕನಹಳ್ಳಿಯ ಚೌಡಪ್ಪ ಕ್ಯಾರೆಟ್ ಬೆಳೆ ಕಿತ್ತು ಹಾಕಿದರು
ಜಗಳೂರು: ಲಾಕ್ಡೌನ್ನಿಂದ ಸೂಕ್ತ ಬೆಲೆ ದೊರೆಯದೆ ಬೇಸತ್ತ ರೈತನೊಬ್ಬ ನಾಲ್ಕು ಎಕರೆಯಲ್ಲಿ ಬೆಳೆದಿದ್ದ ಕ್ಯಾರೆಟ್ ಹಾಗೂ ಎಲೆಕೋಸು ಬೆಳೆಗಳನ್ನು ನೆಲಸಮ ಮಾಡಿದ್ದಾನೆ.
ಬೈರನಾಯಕನಹಳ್ಳಿ ಗ್ರಾಮದ ಚೌಡಪ್ಪ ಎಂಬುವರು ನೀರಾವರಿ ಆಶ್ರಯದಲ್ಲಿ ನಾಲ್ಕು ಎಕರೆ ಜಮೀನಿನಲ್ಲಿ ಕ್ಯಾರೆಟ್-ಎಲೆಕೋಸು ಬೆಳೆದಿದ್ದರು. ಉತ್ತಮ ಇಳುವರಿಯೂ ಬಂದಿತ್ತು. ಹೊಸಪೇಟೆ, ಕೋಲಾರ ಸೇರಿದಂತೆ ವಿವಿಧ ಮಾರುಕಟ್ಟೆಗೆ ಕೊಂಡೊಯ್ದರೂ ಖರೀದಿಸುವವರು ಇಲ್ಲದ್ದರಿಂದ ನಷ್ಟ ಉಂಟಾಗಿತ್ತು. ಇದರಿಂದ ಬೇಸರಗೊಂಡ ಚೌಡಪ್ಪ ಕೊಯ್ಲು ಮಾಡದೆ ಉಳಿದ ಫಸಲನ್ನು ನೆಲದಲ್ಲೇ ಉಳಿಸಿ ಟ್ರ್ಯಾಕ್ಟರ್ ಮೂಲಕ ಕಿತ್ತು ಹಾಕಿಸುತ್ತಿದ್ದಾರೆ.
ಎಲೆಕೋಸು, ಕ್ಯಾರೆಟ್, ತರಕಾರಿ ಬೆಳೆಯಲು 70 ಸಾವಿರ ರೂ. ಖರ್ಚು ಮಾಡಿದ್ದು, ಮಾರಲು ಹೋದರೆ ಕೆಜಿಗೆ 4-5 ರೂ.ಗೆ ಕೇಳುತ್ತಿದ್ದಾರೆ. ಹಾಗಾಗಿ ಬೆಳೆಗಳನ್ನು ಕಿತ್ತು ಹಾಕುವ ನಿರ್ಧಾರಕ್ಕೆ ಬಂದಿದ್ದಾಗಿ ಚೌಡಪ್ಪ ಅಳಲು ವ್ಯಕ್ತಪಡಿಸಿದ್ದಾರೆ. ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಬೆಳೆ ನಷ್ಟಕ್ಕೆ ಪ್ರತಿ ಹೆಕ್ಟೇರ್ಗೆ 18,000 ಸಾವಿರ ರೂ. ಪರಿಹಾರ ದೊರೆಯಲಿದೆ ಎಂದು ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Campaign: ಕಾಂಗ್ರೆಸ್ನಲ್ಲಿಲ್ಲ ಮೋದಿಗೆ ಸಮಾನ ನಾಯಕತ್ವ: ಗಾಯಿತ್ರಿ ಸಿದ್ದೇಶ್ವರ
Gayathri Siddeshwar: ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಜನ್ಮದಿನ ಆಚರಣೆ
Eshwarappa ವಿರುದ್ಧ ಕ್ರಮದ ಬಗ್ಗೆ ಪಕ್ಷದಿಂದಲೇ ನಿರ್ಧಾರ: ಯಡಿಯೂರಪ್ಪ
Davanagare: ಚುನಾವಣಾ ತರಬೇತಿಗೆ ಚಕ್ಕರ್; ಅನುಚಿತ ವರ್ತನೆಗೆ ಶಿಕ್ಷಕ ಅಮಾನತು
ನಾಮಪತ್ರ ಸಲ್ಲಿಸಿದ ದಾವಣಗೆರೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ
MUST WATCH
ಹೊಸ ಸೇರ್ಪಡೆ
Congress;ಪ್ರತಾಪ್ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ
LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ
Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ
Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ
Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ