ಧಾರವಾಡ: ಬೈಕ್ ಕಳ್ಳರ ಬಂಧನ; 17 ಬೈಕ್ ಗಳ ವಶ
Team Udayavani, Oct 23, 2020, 9:17 PM IST
ಧಾರವಾಡ: ಅವಳಿ ನಗರದ ವಿವಿಧಡೆ ಬೈಕ್ಗಳನ್ನು ಕಳ್ಳತನ ಮಾಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ವಿದ್ಯಾಗಿರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಧಾರವಾಡ ರಾಜೀವಗಾಂಧಿನಗರದ ಅಭಿಷೇಕ ಸಂಗ್ಪಾಳೆ ಹಾಗೂ ಈರನಗೌಡ ಮರಿಗೌಡ ಎಂದು ಗುರುತಿಸಲಾಗಿದೆ ಎಂದು ಎಂದು ಎಸಿಪಿ ಅನುಷಾ ಜಿ. ಅವರು ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು, ಧಾರವಾಡ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕಮನಹಳ್ಳಿ, ಅರವಿಂದನಗರ, ವೈ.ಎಸ್. ಕಾಲನಿ, ಶಂಕರಮಠದ ಹತ್ತಿರ ಹಾಗೂ ಹುಬ್ಬಳ್ಳಿಯ ಕೇಶ್ವಾಪೂರ ಮತ್ತು ವಿವಿಧ ಬಡಾವಣೆಗಳಲ್ಲಿ ಬಂಧಿತ ಆರೋಪಿಗಳು 17 ಬೈಕ್ಗಳನ್ನು ಕಳ್ಳತನ ಮಾಡಿದ್ದಾರೆ. ಠಾಣೆಯ ವ್ಯಾಪ್ತಿಯಲ್ಲಿ ಬೈಕ್ ಕಳೆದುಕೊಂಡವರು ಹಲವು ಜನರು ದೂರು ನೀಡಿದ್ದರು. ಅವುಗಳ ತನಿಖೆ ಕೈಗೊಂಡಾಗ ಇಬ್ಬರು ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ. ಅವರಿಂದ 17 ಬೈಕ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಇನ್ಸಪೆಕ್ಟರ್ ಎಂ.ಕೆ. ಬಸಾಪೂರ, ಪಿಎಸ್ಐ ಸಚಿನಕುಮಾರ ದಾಸರೆಡ್ಡಿ, ಪಿಎಸ್ಐ ಎಸ್.ಐ. ತೇಗೂರ, ಪಿಎಸ್ಐ ಬಿ.ಎಂ. ಅಂಗಡಿ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದಿಂಗಾಲೇಶ್ವರ ಸ್ವಾಮೀಜಿಗೆ ತಪ್ಪು ತಿಳಿವಳಿಕೆಯಾಗಿದ್ದರೆ ಸರಿಪಡಿಸುವೆ: ಸಚಿವ ಪ್ರಹ್ಲಾದ ಜೋಶಿ
Loksabha; ಧಾರವಾಡ ಕ್ಷೇತ್ರದ ಅಭ್ಯರ್ಥಿ ಬದಲಾವಣೆಯಿಲ್ಲ: ಯಡಿಯೂರಪ್ಪ ಸ್ಪಷ್ಟನೆ
Pralhad Joshi; ಧಾರವಾಡದ ಬಿಜೆಪಿ ಅಭ್ಯರ್ಥಿ ಬದಲಿಸಬೇಕು: ದಿಂಗಾಲೇಶ್ವರ ಸ್ವಾಮೀಜಿ
Kannada; ಹಿರಿಯ ಸಾಹಿತಿ ಡಾ.ಗುರುಲಿಂಗ ಕಾಪಸೆ ಇನ್ನಿಲ್ಲ: ದೇಹ ದಾನ
Loksabha Election; 19 ಅಭ್ಯರ್ಥಿಗಳನ್ನು ಘೋಷಿಸಿದ ಎಸ್.ಯು.ಸಿ.ಐ