ಇಲಿ-ಹೆಗ್ಗಣಗಳ ಹೆಚ್ಚಾದ ದರ್ಬಾರ್‌!

ಬಹುತೇಕ ಮಾರುಕಟ್ಟೆಗಳಲ್ಲಿ ವಿಪರೀತವಾಗುತ್ತಿದೆ ಕಾಟ | ವ್ಯಾಪಾರಸ್ಥರ ಅಳಲು

Team Udayavani, Apr 13, 2020, 11:39 AM IST

13-April-06

ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಮಾರುಕಟ್ಟೆಯಲ್ಲಿರುವ ಮಳಿಗೆಯೊಂದರಲ್ಲಿ ಇಟ್ಟಿರುವ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಹಾಳು ಮಾಡಿರುವ ಇಲಿಗಳು

ಹುಬ್ಬಳ್ಳಿ: ಕೋವಿಡ್ ಲಾಕ್‌ಡೌನ್‌ನಿಂದ ಜನ ಸಂಚಾರ ವಿರಳವಾಗಿದೆ, ಅಂಗಡಿ- ವ್ಯಾಪಾರ ಮಳಿಗೆಗಳು ಬಹುತೇಕ ಮುಚ್ಚಿವೆ. ವಾಹನ ಸಂಚಾರದ ಸದ್ದಿಲ್ಲ, ಜನಸಂದಣಿಯ ಗದ್ದಲವಿಲ್ಲ. ಹೀಗಾಗಿ ಇಲಿ- ಹೆಗ್ಗಣ, ಹಾವುಗಳ ಓಡಾಟದ್ದೇ ಕಾರುಬಾರು ಎನ್ನುವಂತಾಗಿದೆ. ನಗರದಲ್ಲಿ ಬಹುತೇಕ ಮಾರುಕಟ್ಟೆಗಳಲ್ಲಿ ಇಲಿ-ಹೆಗ್ಗಣಗಳ ಕಾಟ ವಿಪರೀತವಾಗಿದ್ದು, ಒಳಗಿಟ್ಟ ದಾಸ್ತುನಗಳನ್ನು ಇಲಿ-ಹೆಗ್ಗಣಗಳು ಹಾಳು ಮಾಡುತ್ತಿವೆ ಎಂಬ ಆತಂಕ ವ್ಯಾಪಾರಸ್ಥರದ್ದಾಗಿದೆ.

ಕೆಲ ಕಡೆಗಳಲ್ಲಿ ಗೋದಾಮು ಹಾಗೂ ಅಂಗಡಿಗಳಲ್ಲಿರುವ ಅಕ್ಕಿ, ಬೆಳೆ, ಕಡಲೆ, ಶೇಂಗಾ, ಬೆಲ್ಲ, ಮೈದಾ, ಗೋಧಿಹಿಟ್ಟು, ಜೋಳ, ರವಾ, ಸಕ್ಕರೆ, ಎಣ್ಣೆ ಪಾಕೆಟ್‌ಗಳು, ಡಾಲ್ಡಾ ಪಾಕೆಟ್‌ಗಳು, ಸ್ವೀಟ್ಸ್‌ ಹಾಗೂ ಬೇಕರಿಗಳಲ್ಲಿರುವ ಬಿಸ್ಕಿಟ್‌, ಸಿಹಿ ಪದಾರ್ಥಗಳು ಇನ್ನಿತರ ತಿನಿಸುಗಳು ಇಲಿ-ಹೆಗ್ಗಣ ಪಾಲಾಗತೊಡಗಿವೆ ಎಂಬುದು ಹಲವು ವ್ಯಾಪಾರಸ್ಥರ ಅಳಲಾಗಿದೆ.

ನಗರದಲ್ಲಿರುವ ಮಹಾತ್ಮಾ ಗಾಂಧಿ ಮಾರುಕಟ್ಟೆ, ಜನತಾ ಬಜಾರ್‌, ಹಳೇ ಹುಬ್ಬಳ್ಳಿ ದುರ್ಗದ ಬಯಲು ಮಾರುಕಟ್ಟೆಗಳು ತುಂಬಾ ಹಳೆಯ ಮಾರುಕಟ್ಟೆಗಳಾಗಿದ್ದು, ಇಲ್ಲಿಯೂ ಇಲಿ-ಹೆಗ್ಗಣಗಳ ಕಾಟ ವಿಪರೀತವಾಗಿದೆ. ಅಂಗಡಿಗಳ ಹಾಗೂ ಜನಸಂಚಾರ ಇದ್ದಾಗಲೇ ಓಡಾಡುತ್ತಿದ್ದ ಇಲಿ-ಹೆಗ್ಗಣಗಳು ಹೇಳುವವರು, ಕೇಳುವವರು ಇಲ್ಲದೇ ರಾಜಾರೋಷವಾಗಿ ಓಡಾಡತೊಡಗಿವೆ.

ಉರಗದ ಉಪಟಳ: ಇಲಿ-ಹೆಗ್ಗಣ ಇರುವ ಕಡೆ ಉರಗಗಳ ಉಪಟಳವೂ ಹೆಚ್ಚಳವಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಕಾಣಿಸಿಕೊಂಡ ಮಾರುದ್ದ ಉರಗ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಇದೇ ಹಾವು ವೃತ್ತದ ಸಮೀಪದಲ್ಲಿ ಶನಿವಾರ ಮತ್ತೆ ಕಂಡಿದ್ದು ಅದನ್ನು ಹಿಡಿಯಲಾಗಿದೆ.

ಅಂಗಡಿಯಲ್ಲಿನ ಪ್ಲಾಸ್ಟಿಕ್‌ ಸಾಮಗ್ರಿಗಳನ್ನು ಸಹ ಇಲಿಗಳು ಬಿಡುತ್ತಿಲ್ಲ. ಹಾಳು ಮಾಡುತ್ತಿವೆ. ಒಂದೆಡೆ ವ್ಯಾಪಾರ ಬಂದ್‌ ಆಗಿರುವ ನೋವು, ಇನ್ನೊಂದೆಡೆ ಇಲಿ-ಹೆಗ್ಗಣಗಳ ಕಾಟದಿಂದ ಹಾನಿಯಾಗುತ್ತಿದ್ದು, ಏನು ಮಾಡುವುದುತಿಳಿಯದಾಗಿದೆ.
ಅಲ್ಲಾಭಕ್ಷ ಚಿನ್ನೂರ,
ಹಳೇಹುಬ್ಬಳ್ಳಿ ಪ್ಲಾಸ್ಟಿಕ್‌ ಸಾಮಗ್ರಿಗಳ ವ್ಯಾಪಾರಿ

ಮಹಾತ್ಮಾ ಗಾಂಧಿ ಮಾರುಕಟ್ಟೆಯಲ್ಲಿ ನೂರಾರು ಮಳಿಗೆಗಳಿದ್ದು, ಇಲಿ ಕಾಟ ಹೆಚ್ಚಾಗಿದೆ. ಅಂಗಡಿ ಹಾಗೂ ಗೋದಾಮುಗಳಲ್ಲಿ ಇಟ್ಟಿರುವ ಸಾಮಗ್ರಿಗಳನ್ನು ಇಲಿ-ಹೆಗ್ಗಣಗಳಿಂದ ಉಳಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ.
 ಸತೀಶ ಧೋಂಗಡಿ,
ಎಂ.ಜಿ.ಮಾರುಕಟ್ಟೆ ವ್ಯಾಪಾರಿ

ಬಸವರಾಜ ಹೂಗಾರ

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.