ಇಲಿ-ಹೆಗ್ಗಣಗಳ ಹೆಚ್ಚಾದ ದರ್ಬಾರ್!
ಬಹುತೇಕ ಮಾರುಕಟ್ಟೆಗಳಲ್ಲಿ ವಿಪರೀತವಾಗುತ್ತಿದೆ ಕಾಟ | ವ್ಯಾಪಾರಸ್ಥರ ಅಳಲು
Team Udayavani, Apr 13, 2020, 11:39 AM IST
ಹುಬ್ಬಳ್ಳಿ: ಇಲ್ಲಿನ ಹಳೇಹುಬ್ಬಳ್ಳಿ ಮಾರುಕಟ್ಟೆಯಲ್ಲಿರುವ ಮಳಿಗೆಯೊಂದರಲ್ಲಿ ಇಟ್ಟಿರುವ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಹಾಳು ಮಾಡಿರುವ ಇಲಿಗಳು
ಹುಬ್ಬಳ್ಳಿ: ಕೋವಿಡ್ ಲಾಕ್ಡೌನ್ನಿಂದ ಜನ ಸಂಚಾರ ವಿರಳವಾಗಿದೆ, ಅಂಗಡಿ- ವ್ಯಾಪಾರ ಮಳಿಗೆಗಳು ಬಹುತೇಕ ಮುಚ್ಚಿವೆ. ವಾಹನ ಸಂಚಾರದ ಸದ್ದಿಲ್ಲ, ಜನಸಂದಣಿಯ ಗದ್ದಲವಿಲ್ಲ. ಹೀಗಾಗಿ ಇಲಿ- ಹೆಗ್ಗಣ, ಹಾವುಗಳ ಓಡಾಟದ್ದೇ ಕಾರುಬಾರು ಎನ್ನುವಂತಾಗಿದೆ. ನಗರದಲ್ಲಿ ಬಹುತೇಕ ಮಾರುಕಟ್ಟೆಗಳಲ್ಲಿ ಇಲಿ-ಹೆಗ್ಗಣಗಳ ಕಾಟ ವಿಪರೀತವಾಗಿದ್ದು, ಒಳಗಿಟ್ಟ ದಾಸ್ತುನಗಳನ್ನು ಇಲಿ-ಹೆಗ್ಗಣಗಳು ಹಾಳು ಮಾಡುತ್ತಿವೆ ಎಂಬ ಆತಂಕ ವ್ಯಾಪಾರಸ್ಥರದ್ದಾಗಿದೆ.
ಕೆಲ ಕಡೆಗಳಲ್ಲಿ ಗೋದಾಮು ಹಾಗೂ ಅಂಗಡಿಗಳಲ್ಲಿರುವ ಅಕ್ಕಿ, ಬೆಳೆ, ಕಡಲೆ, ಶೇಂಗಾ, ಬೆಲ್ಲ, ಮೈದಾ, ಗೋಧಿಹಿಟ್ಟು, ಜೋಳ, ರವಾ, ಸಕ್ಕರೆ, ಎಣ್ಣೆ ಪಾಕೆಟ್ಗಳು, ಡಾಲ್ಡಾ ಪಾಕೆಟ್ಗಳು, ಸ್ವೀಟ್ಸ್ ಹಾಗೂ ಬೇಕರಿಗಳಲ್ಲಿರುವ ಬಿಸ್ಕಿಟ್, ಸಿಹಿ ಪದಾರ್ಥಗಳು ಇನ್ನಿತರ ತಿನಿಸುಗಳು ಇಲಿ-ಹೆಗ್ಗಣ ಪಾಲಾಗತೊಡಗಿವೆ ಎಂಬುದು ಹಲವು ವ್ಯಾಪಾರಸ್ಥರ ಅಳಲಾಗಿದೆ.
ನಗರದಲ್ಲಿರುವ ಮಹಾತ್ಮಾ ಗಾಂಧಿ ಮಾರುಕಟ್ಟೆ, ಜನತಾ ಬಜಾರ್, ಹಳೇ ಹುಬ್ಬಳ್ಳಿ ದುರ್ಗದ ಬಯಲು ಮಾರುಕಟ್ಟೆಗಳು ತುಂಬಾ ಹಳೆಯ ಮಾರುಕಟ್ಟೆಗಳಾಗಿದ್ದು, ಇಲ್ಲಿಯೂ ಇಲಿ-ಹೆಗ್ಗಣಗಳ ಕಾಟ ವಿಪರೀತವಾಗಿದೆ. ಅಂಗಡಿಗಳ ಹಾಗೂ ಜನಸಂಚಾರ ಇದ್ದಾಗಲೇ ಓಡಾಡುತ್ತಿದ್ದ ಇಲಿ-ಹೆಗ್ಗಣಗಳು ಹೇಳುವವರು, ಕೇಳುವವರು ಇಲ್ಲದೇ ರಾಜಾರೋಷವಾಗಿ ಓಡಾಡತೊಡಗಿವೆ.
ಉರಗದ ಉಪಟಳ: ಇಲಿ-ಹೆಗ್ಗಣ ಇರುವ ಕಡೆ ಉರಗಗಳ ಉಪಟಳವೂ ಹೆಚ್ಚಳವಾಗಿದೆ. ಕಳೆದ ಎರಡು ದಿನಗಳ ಹಿಂದೆ ಕಿತ್ತೂರ ಚನ್ನಮ್ಮ ವೃತ್ತದಲ್ಲಿ ಕಾಣಿಸಿಕೊಂಡ ಮಾರುದ್ದ ಉರಗ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಇದೇ ಹಾವು ವೃತ್ತದ ಸಮೀಪದಲ್ಲಿ ಶನಿವಾರ ಮತ್ತೆ ಕಂಡಿದ್ದು ಅದನ್ನು ಹಿಡಿಯಲಾಗಿದೆ.
ಅಂಗಡಿಯಲ್ಲಿನ ಪ್ಲಾಸ್ಟಿಕ್ ಸಾಮಗ್ರಿಗಳನ್ನು ಸಹ ಇಲಿಗಳು ಬಿಡುತ್ತಿಲ್ಲ. ಹಾಳು ಮಾಡುತ್ತಿವೆ. ಒಂದೆಡೆ ವ್ಯಾಪಾರ ಬಂದ್ ಆಗಿರುವ ನೋವು, ಇನ್ನೊಂದೆಡೆ ಇಲಿ-ಹೆಗ್ಗಣಗಳ ಕಾಟದಿಂದ ಹಾನಿಯಾಗುತ್ತಿದ್ದು, ಏನು ಮಾಡುವುದುತಿಳಿಯದಾಗಿದೆ.
ಅಲ್ಲಾಭಕ್ಷ ಚಿನ್ನೂರ,
ಹಳೇಹುಬ್ಬಳ್ಳಿ ಪ್ಲಾಸ್ಟಿಕ್ ಸಾಮಗ್ರಿಗಳ ವ್ಯಾಪಾರಿ
ಮಹಾತ್ಮಾ ಗಾಂಧಿ ಮಾರುಕಟ್ಟೆಯಲ್ಲಿ ನೂರಾರು ಮಳಿಗೆಗಳಿದ್ದು, ಇಲಿ ಕಾಟ ಹೆಚ್ಚಾಗಿದೆ. ಅಂಗಡಿ ಹಾಗೂ ಗೋದಾಮುಗಳಲ್ಲಿ ಇಟ್ಟಿರುವ ಸಾಮಗ್ರಿಗಳನ್ನು ಇಲಿ-ಹೆಗ್ಗಣಗಳಿಂದ ಉಳಿಸಿಕೊಳ್ಳುವುದು ದೊಡ್ಡ ಸವಾಲಿನ ಕೆಲಸವಾಗಿದೆ.
ಸತೀಶ ಧೋಂಗಡಿ,
ಎಂ.ಜಿ.ಮಾರುಕಟ್ಟೆ ವ್ಯಾಪಾರಿ
ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
Hubli; ನೇಹಾ ಪ್ರಕರಣದಲ್ಲಿ ಸರ್ಕಾರದ ನಡವಳಿಕೆ ಸರಿಯಾಗಿರಲಿಲ್ಲ: ಬಿ.ವೈ. ವಿಜಯೇಂದ್ರ
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ