ಕೊರೊನಾ ಹೊಡೆತಕ್ಕೆ ರೈತ ಕಂಗಾಲು
ತಿಂಗಳಾದರೂ ತೊಗರಿ ಖರೀದಿ ಹಣ ಜಮೆಯಿಲ್ಲನೋಂದಣಿ ಮಾಡಿದ್ದರೂ ಕಡಲೆ ಖರೀದಿಸದ ಸರ್ಕಾರ
Team Udayavani, Apr 8, 2020, 7:12 PM IST
ಹುನಗುಂದ: ಕಡಲೆ ಬೆಂಬಲ ಬೆಲೆಯ ಖರೀದಿ ಕೇಂದ್ರ ಬಂದ್ ಮಾಡಲಾಗಿದೆ
ಹುನಗುಂದ: ಕೊರೊನಾ ವೈರಸ್ ತಡೆಗೆ ಲಾಕ್ ಡೌನ್ ಆದೇಶದಿಂದ ತೊಗರಿ ಹಾಗೂ ಕಡಲೆ ಬೆಳೆಗಾರರು ಕಂಗಾಲಾಗಿದ್ದಾರೆ. ತೊಗರಿಯನ್ನು ಬೆಂಬಲ ಬೆಲೆಯಲ್ಲಿ ಸರ್ಕಾರ ಖರೀದಿಸಿದ್ದು, ಲಾಕ್ಡೌನ್ ಆದೇಶದಿಂದಾಗಿ ರೈತರ ಖಾತೆಗೆ ಹಣ ಜಮೆಯಾಗಿಲ್ಲ. ಅಲ್ಲದೇ ಹಿಂಗಾರು ಹಂಗಾಮಿನ ಕಡಲೆ ಬೆಳೆ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ರೈತರು ಹೆಸರು ನೋಂದಣಿ ಮಾಡಿದ್ದರೂ ಖರೀದಿ ಕೇಂದ್ರಗಳು ಮುಚ್ಚಿವೆ. ಮಾರಾಟ ಮಾಡಿದ ಬೆಳೆಗೆ ಹಣವೂ ಇಲ್ಲದೇ, ಕಡಲೆ ಬೆಳೆ ಮಾರಾಟವಾಗದೇ ಹುಳು (ನುಶಿ) ಹತ್ತುವ ಆತಂಕವನ್ನು ರೈತರು ಎದುರಿಸುತ್ತಿದ್ದಾರೆ.
ಮಾರ್ಚ್ನಲ್ಲಿ ಸರ್ಕಾರ ಸಹಕಾರ ಮಹಾ ಮಂಡಳಿಯ ನೇತೃತ್ವದಲ್ಲಿ ಹುನಗುಂದ ಟಿಎಪಿಸಿಎಂಎಸ್, ಸೂಳೇಬಾವಿ ಎಸ್ಸಿಒ, ಕೂಡಲಸಂಗಮ ಸಿಂಗನಗುತ್ತಿ, ಕಂದಗಲ್ಲ, ಚಿಕ್ಕಾದಾಪುರದ ನಾಲ್ಕು ಪಿಕೆಪಿಎಸ್ ಕೇಂದ್ರ ಸೇರಿದಂತೆ 6 ಕೇಂದ್ರಗಳಲ್ಲಿ ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಸಲಾಗಿದೆ. ಹುನಗುಂದದ ಒಂದು ಕೇಂದ್ರದಲ್ಲಿ 1335 ಜನ ರೈತರು ತೊಗರಿ ಮಾರಾಟಕ್ಕಾಗಿ ನೋಂದಣಿ ಮಾಡಿಸಿದ್ದರೂ ಅದರಲ್ಲಿ 1295 ಜನ ರೈತರ 11975 ಕ್ವಿಂಟಲ್ ತೊಗರಿ ಖರೀದಿಸಲಾಗಿದೆ.
ಖರೀದಿಯಾಗಿ ತಿಂಗಳು ಕಳೆದಿದ್ದು, ಒಂದಿಬ್ಬರೂ ರೈತರ ಖಾತೆಗಳಿಗೆ ಹಣ ಜಮೆ ಆಗಿದ್ದು ಬಿಟ್ಟರೇ ಉಳಿದ ಸಾವಿರಾರು ಜನ ತಾಲೂಕಿನ ರೈತರು ತೊಗರಿ ಬೆಂಬಲ ಬೆಲೆಯ ಹಣಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಕೊರೊನಾ ಭೀತಿಯಿಂದ ತಾಲೂಕಿನ ಎಲ್ಲ ಕಡಲೆ ಖರೀದಿ ಕೇಂದ್ರ ಬಂದ್ ಮಾಡಲಾಗಿದೆ. ಹೀಗಾಗಿ ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಬೇಕು ಎಂದು ನಿರ್ಧರಿಸಿ ನೋಂದಣಿ ಮಾಡಿಸಿರುವ ರೈತರು ಸಂಕಷ್ಟ ಎದುರಿಸುವಂತಾಗಿದೆ.
ಮಾರ್ಚ್17 ರವರೆಗೆ ತೊಗರಿಯನ್ನು ತಾಲೂಕಿನ ಆರು ಕೇಂದ್ರಗಳಲ್ಲಿ ಖರೀದಿಸಲಾಗಿದೆ. ಬೆಂಬಲ ಬೆಲೆ ಹಣವನ್ನು ರೈತರ ಖಾತೆಗೆ ಜಮಾ ಆಗುತ್ತಿದ್ದು ಮಾಸಾಮತ್ಯದವರೆಗೆ ಎಲ್ಲ ರೈತರ ಖಾತೆಗೆ ಹಣ ಜಮೆಯಾಗಲಿದೆ.
ಮುತ್ತು ಕುದರಿಮನಿ,
ಖರೀದಿದಾರರು ಟಿಎಪಿಸಿಎಂಎಸ್
ಹುನಗುಂದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ
Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್ ಈಗ “ಸಂಯುಕ್ತ’
Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್
Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ
Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು
MUST WATCH
ಹೊಸ ಸೇರ್ಪಡೆ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!