ದಾರಿ ತಪ್ಪಿ ಬಂದ ಬಾಲಕ ಪಾಲಕರ ಮಡಿಲಿಗೆ
Team Udayavani, Mar 7, 2021, 6:38 PM IST
ಅಣ್ಣಿಗೇರಿ: ದಾರಿ ತಪ್ಪಿ ಬಂದಿದ್ದ ಬಾಲಕನೊಬ್ಬ ಮರಳಿ ಪಾಲಕರ ಮಡಿಲು ಸೇರಿದ ಘಟನೆ ಪಟ್ಟಣದಲ್ಲಿ ನಡೆದಿದೆ. ನವಲಗುಂದದ ನಾಲ್ಕು ವರ್ಷದ ಬಾಲಕನೊಬ್ಬ ಗುರುವಾರ ದಾರಿತಪ್ಪಿ ನವಲಗುಂದದಿಂದ ಬಸ್ ಹತ್ತಿ ಅಣ್ಣಿಗೇರಿಗೆ ಬಂದಿದ್ದ. ನಂತರ ಲಕ್ಷ್ಮೇಶ್ವರ ಬಸ್ ಹತ್ತಿ ಹೊರಟಿದ್ದ. ಬಾಲಕನನ್ನು ಗಮನಿಸಿದ ಕಂಡಕ್ಟರ್ ಸಂಶಯ ಬಂದು ಬಸ್ ಡಿಪೋ ವ್ಯವಸ್ಥಾಪಕರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಬಾಲಕನನ್ನು ಅಣ್ಣಿಗೇರಿಗೆ ಕರೆದುಕೊಂಡು ಬಂದಿದ್ದಾರೆ. ನಂತರ ರಿûಾ ಚಾಲಕರು ಬಾಲಕನನ್ನು ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆ ಸಿಬ್ಬಂದಿ ಶಂಕರಗೌಡ ರಾಮನಗೌಡ ಶಾಸಕರ ಆಪ್ತ ಸಿಬ್ಬಂದಿ ಮಂಜುನಾಥ ದಿಡ್ಡಿ ಬಾಲಕನ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದಾರೆ. ಆಗ ನವಲಗುಂದ ಮಗು ಎಂದು ತಿಳಿದು ಮಗುವಿನ ತಾಯಿಗೆ ಕರೆ ಮಾಡಿದಾಗ ತಾಯಿ ಬಂದು ಮಗುವನ್ನು ಗುರುತಿಸಿದ್ದಾರೆ. ನಂತರ ಪೋಷಕರು ಪೊಲೀಸ್ ಠಾಣೆಗೆ ಬಾಲಕನನ್ನು ಕರೆದುಕೊಂಡು ಹೋಗಿದ್ದಾರೆ.