ಕಾರಂತರು ಜನಪದರ ಪ್ರಜ್ಞೆಯ ವಕ್ತಾರ: ಡಾ| ಎಂ.ಎಸ್‌. ಮೂರ್ತಿ

ಒಂದು ಕ್ಷೇತ್ರ, ಹೇಳಿಕೆಗೆ ಸೀಮಿತಗೊಳಿಸಿ ಅರ್ಥೈಸುವಿಕೆ ಬೇಡ ; ಉತ್ತಮ ಬದುಕಿನ ಮಾರ್ಗದರ್ಶಕರಾಗಿ ಕಾರಂತರು ಗೋಚರ

Team Udayavani, Jun 24, 2022, 10:11 AM IST

4

ಹುಬ್ಬಳ್ಳಿ: ಡಾ| ಶಿವರಾಮ ಕಾರಂತರು ತಮ್ಮ ಬದುಕನ್ನೇ ಪ್ರಯೋಗಶಾಲೆಯನ್ನಾಗಿ ಮಾಡಿಕೊಂಡು, ಯಾರ-ಯಾವ ಮುಲಾಜಿಗೂ ಒಳಗಾಗದೆ ಉತ್ತಮ ಬದುಕಿನ ವಿಚಾರಗಳನ್ನು ಬಿತ್ತಿದವರು. ಅವರು ಜನಪದರ ಪ್ರಜ್ಞೆಯ ವಕ್ತಾರರಾಗಿದ್ದಾರೆ ಎಂದು ಚಿತ್ರಕಲಾವಿದ ಹಾಗೂ ಅಂಕಣಕಾರ ಡಾ| ಎಂ.ಎಸ್‌. ಮೂರ್ತಿ ಹೇಳಿದರು.

ಜಗದ್ಗುರು ಮೂರು ಸಾವಿರ ಮಠ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಮಹಿಳಾ ಕಾಲೇಜಿನ ಕನ್ನಡ ವಿಭಾಗ ಗುರುವಾರ ಆಯೋಜಿಸಿದ್ದ ಡಾ| ಶಿವರಾಮ ಕಾರಂತರ ಜೀವನ ಮೌಲ್ಯಗಳು ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಅವರು ಮಾತನಾಡಿದರು.

ಏಳು ವರ್ಷದವರೆಗೆ ಮಕ್ಕಳನ್ನು ಶಾಲೆಗೆ ಕಳುಹಿಸಬಾರದು ಎಂಬ ಚಿಂತನೆಯಂತೆ, ತಮ್ಮ ಮಕ್ಕಳನ್ನು ಏಳು ವರ್ಷಗಳವರೆಗೆ ಶಾಲೆಗೆ ಕಳುಹಿಸದೆ ಮನೆಯಲ್ಲಿಯೇ ಅವರಿಗೆ ನಿಸರ್ಗ, ಪ್ರಾಣಿ-ಪಕ್ಷಿಗಳು, ಆಟಗಳ ಕುರಿತಾಗಿ ಹೇಳಿಕೊಟ್ಟಿದ್ದರು. ಗಾಂಧೀಜಿಯವರ ಆತ್ಮ ಕಥನಕ್ಕೂ, ಕಾರಂತರ ಆತ್ಮಕಥನಕ್ಕೂ ಹತ್ತಿರವಿದ್ದಂತೆ ಭಾಸವಾಗುತ್ತದೆ. ಕಲಿಕೆಯ ಕುತೂಹಲವನ್ನು ಕಾರಂತರು ಕೊನೆವರೆಗೂ ಕಳೆದುಕೊಳ್ಳಲಿಲ್ಲ. ಮಗುವಿನ ಮನಸ್ಸು ಅವರದ್ದಾಗಿತ್ತು. ಪ್ರಯೋಗಕ್ಕಾಗಿ ಚುನಾವಣೆಗೆ ಸ್ಪರ್ಧಿಸಿದ್ದರು ಎಂದರು.

ನಮ್ಮ ನೆಲದ ಸ್ವಾದ ಮನಗಳಲ್ಲಿ ದಾಖಲಾಗಬೇಕು, ನೆಲದ ಸೊಗಡು, ನಿಸರ್ಗವನ್ನು ಪ್ರೀತಿಸಬೇಕು ಎಂಬುದನ್ನು ತೋರಿಕೊಟ್ಟರು. ನನ್ನದು ಶ್ರೇಷ್ಠ ಎಂಬ ಅನಿಸಿಕೆ ಅವರದ್ದಾಗಿರಲೇ ಇಲ್ಲ. ಡಾ| ಕಾರಂತರನ್ನು ಕೇವಲ ಒಂದು ಮುಖ, ಒಂದು ಕ್ಷೇತ್ರ, ಒಂದು ಹೇಳಿಕೆ ಆಧಾರದಲ್ಲಿ ಅರ್ಥೈಯಿಸುವ, ವ್ಯಾಖ್ಯಾನಿಸುವ ಬದಲು ಅವರ ಬದುಕು-ಚಿಂತನೆ, ಬರವಣಿಗೆಯನ್ನು ಸಮಗ್ರವಾಗಿ ನೋಡಿದಾಗ ಮಾತ್ರ ನೆಲಸಂಸ್ಕೃತಿ, ನಿಸರ್ಗ ಪ್ರೇಮಿ, ಉತ್ತಮ ಬದುಕಿನ ಮಾರ್ಗದರ್ಶಕರಾಗಿ ಕಾರಂತರು ಗೋಚರಿಸುತ್ತಾರೆ. ವಿವಾದಾತ್ಮಕ, ಚರ್ಚಾತ್ಮಕ ವಿಷಯಗಳಿಗೆ ಅವರನ್ನು ಎಳೆತಂದು, ಯಾವುದೋ ಸಂದರ್ಭದ ಒಂದು ಹೇಳಿಕೆಯನ್ನೇ ಕೇಂದ್ರವಾಗಿಟ್ಟುಕೊಂಡು ಅವರನ್ನು ನೋಡುವುದು ಬೇಡ ಎಂದು ಹೇಳಿದರು.

ಪ್ರಜಾಪ್ರಭುತ್ವ ಗಟ್ಟಿಗೊಳಿಸುವ ಯತ್ನ ಅಗತ್ಯ: ಕಾಲೇಜು ಶಿಕ್ಷಣ ಇಲಾಖೆ ಪ್ರಾದೇಶಿಕ ಜಂಟಿನಿರ್ದೇಶಕ ಪ್ರೊ| ಕೃಷ್ಣಮೂರ್ತಿ ಬಿಳಿಗೆರೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ| ಶಿವರಾಮ ಕಾರಂತರು ಬ್ರಿಟಿಷರ ಆಳ್ವಿಕೆ ಹಾಗೂ ಸ್ವಾತಂತ್ರ್ಯ ಭಾರತದ ಆಳ್ವಿಕೆಯನ್ನು ಕಂಡವರು. ಕಾರಂತರ ಬದುಕು ಮೌಲ್ಯಯುತ ಹಾಗೂ ಪ್ರಾಮಾಣಿಕತೆಗೆ ಪ್ರೇರಣೆ ನೀಡುತ್ತದೆ. ಜೀವಕೇಂದ್ರಿತ ಬದುಕು-ಬರಹ ಅವರದ್ದಾಗಿತ್ತು. ಜಾಗತೀಕರಣದಿಂದ ಶಿಕ್ಷಣ ಬದಲಾಗಿದೆ. ಪ್ರಜಾಪ್ರಭುತ್ವ ಗಟ್ಟಿಗೊಳ್ಳಿಸುವುದು ಇಂದಿನ ಅವಶ್ಯವಾಗಿದೆ. ದುಡಿದು ತಿನ್ನುವವರಿಗೆ ಕೊನೆ ಸ್ಥಾನ ಎನ್ನುವಂತಾಗಿದೆ. ಪ್ರತಿಯೊಬ್ಬರಲ್ಲೂ ನಿಷ್ಠುರತೆ ಇರಬೇಕು, ಪ್ರೀತಿ ಕಳೆದುಕೊಳ್ಳಬಾರದು, ಟೀಕೆಗಳು ಇರಲಿ, ದ್ವೇಷ ಬೇಡ ಎಂದರು.

ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಆದ್ಯತೆಯ ಚಟುವಟಿಕೆಗಳು ನಡೆಯುವಂತಾಗುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಸ್ವಂತಿಕೆಯೊಂದಿಗೆ ಬೆಳೆಯಬೇಕು. ಪ್ರತಿ ತರಗತಿಯ ಪ್ರತಿ ಬೋಧನೆಯೂ ಸೆಮಿನಾರ್‌ ರೂಪ ಪಡೆಯಬೇಕಾಗಿದೆ. ಒಂದು ತರಗತಿ ನಡೆಯಬೇಕೆಂದರೆ ಎಲ್ಲ ವೆಚ್ಚ ಸೇರಿ ಅಂದಾಜು 30-40 ಸಾವಿರ ರೂ. ದಿನಕ್ಕೆ ವೆಚ್ಚ ಆಗುತ್ತದೆ. ಇದು ಸಾರ್ಥಕತೆ ಪಡೆಯದಿದ್ದರೆ ಏನು ಪ್ರಯೋಜನ ಎಂದು ಹೇಳಿದರು.

ಕಾಲೇಜು ಪ್ರಾಂಶುಪಾಲ ಡಾ| ಲಿಂಗರಾಜ ಅಂಗಡಿ, ಉಪನ್ಯಾಸಕಿ ಶಶಿಲಿಯಾ ಡಿಕ್ರೂಜ್‌ ಇದ್ದರು. ಡಾ| ಜಿ.ಎಸ್‌. ನವಲಗುಂದ ಸ್ವಾಗತಿಸಿದರು. ಡಾ| ಸುಪ್ರಿಯಾ ಮಲಶೆಟ್ಟಿ ನಿರೂಪಿಸಿದರು. ಡಾ| ಮಮತಾಜಬೇಗಂ ತಹಶೀಲ್ದಾರ ವಂದಿಸಿದರು.

ಟಾಪ್ ನ್ಯೂಸ್

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!

Delhi Police: ಮಾರುತಿ ಸ್ವಿಫ್ಟ್‌ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

pralhad joshi

Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

2-hubli

Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು

increase-in-number-of-crime-cases-after-congress-came-minister-joshi

Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.