ತಾಂತ್ರಿಕ ಪದವೀಧರೆ ಮೆಚ್ಚಿದ ಕೃಷಿ ಕಾಯಕ

40 ಸಾವಿರ ಸಸಿ ಸದ್ಯ ಮಾರಾಟಕ್ಕೆ ಸಿದ್ಧವಾಗಿದ್ದರೆ, ಜುಲೈನಲ್ಲಿ ಮತ್ತೆ ಒಂದು ಲಕ್ಷ ಸಸಿಗಳು ಮಾರಾಟಕ್ಕೆ ಸಿದ್ಧವಾಗಲಿವೆ.

Team Udayavani, May 18, 2022, 4:59 PM IST

ತಾಂತ್ರಿಕ ಪದವೀಧರೆ ಮೆಚ್ಚಿದ ಕೃಷಿ ಕಾಯಕ

ಮುಧೋಳ: ಆಧುನಿಕ ಯುಗದಲ್ಲಿ ಅದರಲ್ಲೂ ಯುವ ಜನಾಂಗದಲ್ಲಿ ಕೃಷಿ ಕಾರ್ಯದಲ್ಲಿ ತೊಡಗಬೇಕೆಂಬ ಹಂಬಲ ಹೆಚ್ಚುತ್ತಿದೆ. ತಾಂತ್ರಿಕ ಪದವಿ ಪಡೆದ ಸಾಕಷ್ಟು ಜನ ಹೆಚ್ಚಾಗಿ ಕೃಷಿ ಕ್ಷೇತ್ರದತ್ತ ವಾಲುತ್ತಿದ್ದಾರೆ.

ತಾಲೂಕಿನ ಮೆಳ್ಳಿಗೇರಿ ಗ್ರಾಮದ ಎಂಜಿನಿಯರಿಂಗ್‌ ಪದವೀಧರೆ ಸುನೀತಾ ಜೈನಾಪುರ ಈಗ ಕೃಷಿ ಕಾಯಕದಲ್ಲಿ ನಿರತರಾಗಿ ಯಶಸ್ಸಿನ ಮೆಟ್ಟಿಲು ಹತ್ತುತ್ತಿದ್ದು, ಸದ್ಯ ಕೃಷಿ ಕ್ಷೇತ್ರದಲ್ಲಿ ಕೇಶರ ಮಾವಿನ ಸಸಿ ತಯಾರಿಸುವುದರ ಮೂಲಕ ಎಲ್ಲರೂ ತನ್ನತ್ತ ನೋಡುವಂತೆ ಮಾಡಿದ್ದಾರೆ. ಬಿಇ ಪೂರ್ಣಗೊಳಿಸಿರುವ ಸುನೀತಾ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರು.

ಕೊರೊನಾದ ಲಾಕ್‌ಡೌನ್‌ ವೇಳೆ ಗ್ರಾಮಕ್ಕೆ ಆಗಮಿಸಿದ್ದರು. ಸಹೋದರಿ ಸುಜಾತಾ ಜೀರಗಾಳ ಹಾಗೂ ಅವರ ಪತಿ ರಮೇಶ ಜೀರಗಾಳ ಅವರು ತೋಟದಲ್ಲಿ ಹೊಸ ಪ್ರಯೋಗಗಳನ್ನು ಮಾಡಿದ್ದರು. ತಮ್ಮ 5 ಎಕರೆ ಜಮೀನಿನಲ್ಲಿ ಕೇಶರ ಮಾವು ಬೆಳೆದು ಯಶಸ್ವಿಯಾಗಿದ್ದರು. ಎಕರೆಗೆ ಕನಿಷ್ಟ 5ರಿಂದ 6 ಲಕ್ಷ ಆದಾಯ ಪಡೆಯುತ್ತಿರುವುದನ್ನು ಗಮನಿಸಿದ ಸುನೀತಾ ಗುಜರಾತದಿಂದ ಮಾವಿನ ಸಸಿ ತರುವುದು ಸಾಮಾನ್ಯ ರೈತರಿಗೆ ಸಾಧ್ಯವಾಗಲ್ಲ.

ಗುಣಮಟ್ಟದ ಖಾತ್ರಿ ಸಸಿ ಸಿಗದೇ ರೈತರು ಮೋಸ ಹೋಗಬಾರದು. ಅದಲ್ಲದೇ ಕಡಿಮೆ ಶ್ರಮ ಅಧಿಕ ಲಾಭ ನೀಡುವ ಮಾವು ಇದೆಂದು ಮನಗಂಡು ಕೇಶರ ಮಾವು ಸಸಿ ಮಾಡಲು ಸಿದ್ಧರಾದರು. ಇವರ ಯೋಜನೆ ಕಾರ್ಯರೂಪಕ್ಕೆ ತರಲು ಸಹೋದರಿಯ ಪತಿ ರಮೇಶ ಜೀರಗಾಳ ಎಲ್ಲ ನೆರವು ನೀಡಲು ಸಿದ್ಧರಾದರು.

ಕೊಲ್ಹಾಪುರದ ಮಾವಿನ ಪಲ್ಪ ತಯಾರಿಕಾ ಘಟಕದಿಂದ 20 ಟನ್‌ ಮಾವಿನ ಬೀಜ (ಗೊಪ್ಪ) ತರಿಸಲಾಯಿತು. ಗ್ರೀನ್‌ ಹೌಸ್‌ನಲ್ಲಿ ಅವುಗಳಿಗೆ ಬೆಡ್‌ ನಿರ್ಮಿಸಿ ನಿಗದಿತ ತೇವಾಂಶ ಕಾಪಾಡಲು ರವದಿ ಹಾಕಲಾಯಿತು. ತಂದ ಮಾವಿನಗೊಪ್ಪದಲ್ಲಿ ಶೇ.30 ಮಾತ್ರ ಸಸಿ ಬಂದವು. ನಮ್ಮದೇ ಕೇಶರ ಮಾವಿನ ಮದರ್‌ ಪ್ಲ್ಯಾಂಟ್‌ನಿಂದ ನುರಿತ ಕೆಲಸಗಾರರ ಸಹಕಾರದಿಂದ ಕಸಿ ಮಾಡಲಾಯಿತು. ಸತತ ಪರಿಶ್ರಮದ ಫಲವಾಗಿ ಒಂದು ವರ್ಷದಲ್ಲಿ ಈಗ 1.40 ಕೇಶರ ಮಾವಿನ
ಸಸಿಗಳು ತಯಾರಾಗಿ ನಿಂತಿವೆ. ಇದರಲ್ಲಿ 40 ಸಾವಿರ ಸಸಿ ಸದ್ಯ ಮಾರಾಟಕ್ಕೆ ಸಿದ್ಧವಾಗಿದ್ದರೆ, ಜುಲೈನಲ್ಲಿ ಮತ್ತೆ ಒಂದು ಲಕ್ಷ ಸಸಿಗಳು ಮಾರಾಟಕ್ಕೆ ಸಿದ್ಧವಾಗಲಿವೆ.

ಸದ್ಯ 3.5 ಅಡಿಯಿಂದ 4 ಅಡಿ ಎತ್ತರವಾಗಿ ಬೆಳೆದಿವೆ. ಒಂದು ಸಸಿ ಸಿದ್ಧವಾಗಲು 30 ರೂ.ತಗುಲಿದೆ. ಒಂದು ಮಾವಿನ ಸಸಿಗೆ ನೂರಾರು ರೂಪಾಯಿ ನಿಗದಿ ಮಾಡಿದ್ದೇವೆ. ಕಡಿಮೆ ವೆಚ್ಚ ಅಧಿ ಕ ಲಾಭ ನೀಡುವ ಮಾವು ಬೆಳೆಯನ್ನು ಕಡಿಮೆ ನೀರಿನಲ್ಲೂ ಬೆಳೆಯಬಹುದು. 24 ತಿಂಗಳಲ್ಲಿ ಆದಾಯ ನಿರೀಕ್ಷಿಸಬಹುದಾಗಿದೆ. ಮಾವಿನಲ್ಲಿ ಸಹ ಬೆಳೆಯಾಗಿ ಶೇಂಗಾ, ಹೆಸರು, ಕಡ್ಲಿ, ಈರುಳ್ಳಿ ಹಾಗೂ ಇತರೆ ತರಕಾರಿ ಬೆಳೆಯಬಹುದು.

ಕೇಶರ ಮಾವು ಅತ್ಯುತ್ತಮ ತಳಿಯಾಗಿದೆ. ಹೆಚ್ಚು ದಿನ ಬಾಳಿಕೆ ಬರುತ್ತದೆ. ಇದರ ರುಚಿ, ಸ್ವಾದ ಚೆನ್ನಾಗಿದೆ. ದೇಶದ ಗುಜರಾತ, ದೆಹಲಿ ಹಾಗೂ ಬ್ರಿಟನ್‌ ದೇಶಕ್ಕೂ ರಫ್ತಾಗುತ್ತದೆ. ಒಂದು ಎಕರೆ ಪ್ರದೇಶದಲ್ಲಿ 900 ಸಸಿ ನಾಟಿ ಮಾಡಬಹುದು. ಒಂದು ಹಣ್ಣು 200 ಗ್ರಾಂದಿಂದ 700 ಗ್ರಾಂವರೆಗೆ ತೂಗುತ್ತದೆ. ವಾರ್ಷಿಕ ಎಕರೆಗೆ 5ರಿಂದ 6 ಲಕ್ಷ ಆದಾಯ ಗಳಿಸುತ್ತಿರುವುದಾಗಿ ರಮೇಶ ಜೀರಗಾಳ ಹೇಳುತ್ತಾರೆ. ಹೆಚ್ಚಿನ ಮಾಹಿತಿಗೆ ರಮೇಶ ಜೀರಗಾಳ ನಂ-9611370639 ಇಲ್ಲಿಗೆ ಸಂಪರ್ಕಿಸಬಹುದು.

ಕೃಷಿಯಲ್ಲಿ ಮಾಡಿದ ಕೆಲಸದ ತೃಪ್ತಿ ನೌಕರಿ ಮಾಡುವುದರಲ್ಲಿಲ್ಲ. ಶುದ್ಧವಾದ ಪರಿಸರದಲ್ಲಿ ನಮ್ಮ ಆಲೋಚನೆಗಳನ್ನು ಅನುಷ್ಠಾನಗೊಳಿಸಬಹುದು. ಮಾವ ಮತ್ತು
ನನ್ನ ಸಹೋದರಿ ನನ್ನ ವೈಜ್ಞಾನಿಕ ಯೋಜನೆಗೆ ಬೆಂಬಲ ನೀಡಿ ಪ್ರೋತ್ಸಾಹಿಸಿ ಎಲ್ಲ ವಿಧದ ನೆರವು ನೀಡುತ್ತಿದ್ದಾರೆ.
ಸುನೀತಾ ಜೈನಾಪುರ,
ತಾಂತ್ರಿಕ ಪದವೀಧರೆ.

ಟಾಪ್ ನ್ಯೂಸ್

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

ಮಹಾಲಿಂಗಪುರ: ದೇಶ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಲಿ- ಸೂಲಿಬೆಲೆ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Lok Sabha Polls; ಕಂಬಳಿ ಹೊತ್ತು ನಾಮಪತ್ರ ಸಲ್ಲಿಸಿದ ಸಂಯುಕ್ತಾ ಪಾಟೀಲ್

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bagalkote Lok Sabha Election: ಈ ಬಾರಿ ಯಾರೇ ಗೆದ್ರೂ ಹೊಸ ಇತಿಹಾಸ

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

Bilagi ಭೀಕರ ಅಪಘಾತ; ಯಮನಂತೆ ಬಂದ ಟಿಪ್ಪರ್ ; ಒಂದೇ ಕುಟುಂಬದ ಐವರು ಸಾವು

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.