32 ತಾಸಲ್ಲಿ ಸಾವಿರ ಕೆಜಿ ಮಂಡಿಗೆ ತಯಾರಿ!

ಒಮ್ಮೆಲೆ ಹದಿನೈದು ಸಾವಿರಕ್ಕೂ ಅಧಿಕ ಜನರಿಗೆ ಮಂಡಿಗೆ ಬಡಿಸಿದ ಕೀರ್ತಿ

Team Udayavani, Mar 21, 2022, 11:35 AM IST

7

ಹುಬ್ಬಳ್ಳಿ: ವಿದ್ಯಾನಗರ ಕುಮಾರವ್ಯಾಸ ನಗರದ “ಸೀತಾರಾಮ ಕ್ಯಾಟರಿಂಗ್‌’ನ ಕೇಶವಾಚಾರ್ಯ ಭಾವಿಕಟ್ಟಿ ನೇತೃತ್ವದ ತಂಡ ಮಂಡಿಗೆ ತಯಾರಿಕೆಯಲ್ಲಿ ಭೇಷ್‌ ಎನಿಸಿಕೊಂಡಿದೆ. ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡದ ಉತ್ತರಾದಿ ಮಠದಲ್ಲಿ ಈಚೆಗೆ ನಡೆದ “ಶ್ರೀಮನ್ಯಾಯಸುಧಾಮಂಗಲ’ ಕಾರ್ಯಕ್ರಮದಲ್ಲಿ 32 ತಾಸುಗಳಲ್ಲಿ ಸುಮಾರು ಒಂದು ಸಾವಿರ ಕೆಜಿ ಮಂಡಿಗೆ ತಯಾರಿಸಿ ಮೆಚ್ಚುಗೆಗೆ ಪಾತ್ರವಾಗಿದೆ.

ಸುಮಾರು ಹದಿನೈದು ಜನರ ತಂಡ ಹನ್ನೆರಡು ಒಲೆಗಳಲ್ಲಿ ಒಂದು ಸಾವಿರ ಕೆಜಿ ಮಂಡಿಗೆ ತಯಾರಿಸಿದೆ. ಇದಕ್ಕೆ 400 ಕೆಜಿ ಸಕ್ಕರೆ, 700 ಕೆಜಿ ಮಂಡಿಗೆ ಹಿಟ್ಟು, 150 ಕೆಜಿ ತುಪ್ಪ, 70 ಕೆಜಿ ಅಕ್ಕಿ ಹಿಟ್ಟು ಇನ್ನಿತರೆ ಪದಾರ್ಥ ಬಳಸಿದ್ದು, ಸುಮಾರು 15 ಸಾವಿರಕ್ಕೂ ಅಧಿಕ ಜನರು ಮಂಡಿಗೆ ಸವಿದಿದ್ದಾರಂತೆ.

ಕಳೆದ 18-20 ವರ್ಷಗಳಿಂದ ಮಂಡಿಗೆ ತಯಾರಿಸುವ ಕಾಯಕದಲ್ಲಿ ತೊಡಗಿರುವ ಭಾವಿಕಟ್ಟಿ ಅವರು ತಯಾರಿಸಿದ ಮಂಡಿಗೆ ನಾಡಿನ ವಿವಿಧೆಡೆ ತನ್ನದೇ ಖ್ಯಾತಿ ಪಡೆದಿದೆ. ಉಡುಪಿಯ ಅಷ್ಟಮಠಗಳ ಶ್ರೀಗಳು ಸಹ ಇವರ ಮಂಡಿಗೆಗೆ ಮಾರುಹೋಗಿದ್ದಾರೆ. ಪೇಜಾವರ ಶ್ರೀಗಳ ಶಿಷ್ಯರಾದ ಕೇಶವಾಚಾರ್ಯರು ಅವರಿಗೂ ಸಹ ಮಂಡಿಗೆ ಉಣಬಡಿಸಿದ್ದಾರೆ.

ಶ್ರೀವಿಶ್ವೇಶತೀರ್ಥ ಸ್ವಾಮೀಜಿ ಅವರು ದೈವಾಧೀನ ನಂತರದಲ್ಲಿ ನಡೆದ ಸ್ಮರಣೆ ಕಾರ್ಯಕ್ರಮದಲ್ಲಿ ಸುಮಾರು 500 ಕೆಜಿ ಮಂಡಿಗೆ, ಮಳಖೇಡದ ಶ್ರೀಜಯತೀರ್ಥರ ಸನ್ನಿಧಾನದಲ್ಲಿ ಒಂದು ಸಾವಿರ ಕೆಜಿ, ಮಂತ್ರಾಲಯ ಶ್ರೀರಾಘವೇಂದ್ರ ಸ್ವಾಮಿ ಸನ್ನಿಧಾನದಲ್ಲಿ 500 ಕೆಜಿ ಹಾಗೂ ಮಾದನೂರ ವಿಷ್ಣುತೀಥ ಮಠದಲ್ಲಿ 300 ಕೆಜಿ ಸಿದ್ಧಪಡಿಸಿದ್ದಾರೆ.

ಪ್ರಮೋದ ಕುಲಕರ್ಣಿ, ಮಯೂರ ಸಿದ್ದಾಪುರ ಹಾಗೂ ಅವರ ಕೈಯಡಿಯಲ್ಲಿ ಅನಿರುದ್ಧ, ಬದರಿ, ರಾಘವೇಂದ್ರ, ಕೃಷ್ಣಾ ಜೋಶಿ ಸೇರಿದಂತೆ ಸುಮಾರು 15 ಜನರ ತಂಡ ಹೊಂದಿದ್ದಾರೆ. ಕೇಶವಾಚಾರ್ಯ ಭಾವಿಕಟ್ಟಿ ಅವರ ಸಹೋದರ ಮಾವನವರಾದ ರಾಘವೇಂದ್ರ ಆಚಾರ್ಯ, ಗೋಪಾಲಾಚಾರ್ಯ ಅವರಲ್ಲಿ ಮಂಡಿಗೆ ಮಾಡುವ ವಿಧಾನ ಕಲಿತಿರುವ ವೆಂಕಟೇಶಾಚಾರ್ಯ ಅವರು ಸಹ ಮಂಡಿಗೆ ತಯಾರಿಸುವಲ್ಲಿ ತಮ್ಮದೇ ಖ್ಯಾತಿ ಪಡೆದಿದ್ದಾರೆ.

 

ಚಿಕ್ಕವನಿದ್ದಾಗಲೇ ಮಾವನವರಿಂದ ಮಂಡಿಗೆ ಮಾಡುವುದನ್ನು ಕಲಿತು ಉಡುಪಿಯ ಅಷ್ಟ ಮಠಗಳು ಸೇರಿದಂತೆ ನಾಡಿನ ವಿವಿಧೆಡೆ ನಡೆದ ಸಮಾರಂಭಗಳಲ್ಲಿ ಮಂಡಿಗೆ ಸಿದ್ಧಪಡಿಸಿದ್ದೇನೆ. ನಾವು ನೀಡುವ ಸೇವೆ, ಕಾರ್ಯಕ್ಕೆ ಎಲ್ಲರಿಂದ ಮೆಚ್ಚುಗೆ ಇದೆ. ಅದು ನಮಗೆ ಶ್ರೀ ರಕ್ಷೆಯಾಗಿದೆ.

ಕೇಶವಾಚಾರ್ಯ ಭಾವಿಕಟ್ಟಿ, ಮಂಡಿಗೆ ತಯಾರಕರು

– ಬಸವರಾಜ ಹೂಗಾರ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.