ಪ್ರಯೋಗ ವಸಂತ-22; ಮಾದರಿಗಳ ಪ್ರದರ್ಶನ
ಇಂಜಿನಿಯರಿಂಗ್ ಮೊದಲ ವರ್ಷದ ವಿದ್ಯಾರ್ಥಿಗಳಿಂದ 130 ಮಾದರಿ ಪ್ರದರ್ಶನ
Team Udayavani, Apr 7, 2022, 10:25 AM IST
ಹುಬ್ಬಳ್ಳಿ: ಇಲ್ಲಿನ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಸಿ-ಲೈಟ್ ಗ್ರಂಥಾಲಯ ಕಟ್ಟಡದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಯಾರಿಸಿದ ವಿವಿಧ ಮಾದರಿಗಳ ಪ್ರದರ್ಶನ ಪ್ರಯೋಗ ವಸಂತ-22 ಬುಧವಾರ ನಡೆಯಿತು.
ಇಂಜಿನಿಯರಿಂಗ್ ಮೊದಲ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ಸುಮಾರು 130 ಮಾದರಿಗಳು ಪ್ರದರ್ಶನಕ್ಕಿದ್ದವು. ಪ್ರದರ್ಶನಕ್ಕೆ ಕುಲಪತಿ ಡಾ|ಅಶೋಕ ಶೆಟ್ಟರ ಚಾಲನೆ ನೀಡಿದರು.
ಕ್ರಿಮಿನಾಶಕ ಸಿಂಪರಣೆ ಯಂತ್ರ: ಕೃಷಿ ಕಾರ್ಯಕ್ಕೆ ಪೂರಕವಾಗುವ ನಿಟ್ಟಿನಲ್ಲಿ ಕ್ರಿಮಿನಾಶಕ ಸಿಂಪರಣೆ ಬೋಟ್ನ್ನು ವಿದ್ಯಾರ್ಥಿಗಳಾದ ಆದೇಶ ಕೆಣಿ, ಮೊಹಮ್ಮದ್ ರೋಶನ್, ವರುಣ ನವಲಿ, ಎಂ.ಜಿ. ವೀರೇಶ ಅವರು ಅಭಿವೃದ್ಧಿಪಡಿಸಿದ್ದು, ಕ್ರಿಮಿನಾಶ ಸಿಂಪರಣೆ ನಾಜಲ್ ಸುಮಾರು 180 ಡಿಗ್ರಿ ತಿರುಗಲಿದ್ದು, ಮೊಬೈಲ್ ಆ್ಯಪ್ ಆಧಾರಿತವಾಗಿ ಇದನ್ನು ಸುಲಭವಾಗಿ ನಿರ್ವಹಿಸಬಹುದಾಗಿದೆ. ಸುಮಾರು 1,500 ರೂ.ವೆಚ್ಚದಲ್ಲಿ ತಯಾರಿಸಲಾಗಿದ್ದು, ವಾಣಿಜ್ಯ ಬಳಕೆಗೆ ಇದನ್ನು ತಯಾರಿಸುವ ಉದ್ದೇಶ ಹೊಂದಿದ್ದಾಗಿ ವಿದ್ಯಾರ್ಥಿಗಳು ತಿಳಿಸಿದರು.
ಕಳೆ ಕೀಳುವ ಯಂತ್ರವನ್ನು ವಿದ್ಯಾರ್ಥಿಗಳಾದ ಕಿಶೋರ ಕುಲಕರ್ಣಿ, ಸುದೀಪ ಹೇಮಾದ್ರಿ, ಪುಟ್ಟರಾಜ ಚಕ್ರಸಾಲಿ, ಪ್ರಸನ್ನ ಮಹಾಲಿಂಗಪುರ ಅಭಿವೃದ್ಧಿ ಪಡಿಸಿದ್ದು, ಹೊಲದಲ್ಲಿ ಕಳೆ ತೆಗೆಯಲು ಸುಲಭವಾಗುವ ರೀತಿಯಲ್ಲಿ ಇದನ್ನು ಅಭಿವೃದ್ಧಿ ಪಡಿಸಲಾಗಿದೆ. ಇದೊಂದು ಪ್ರಾಯೋಗಿಕ ಯತ್ನವಾಗಿದ್ದು, ವಾಣಿಜ್ಯ ರೂಪದಲ್ಲಿ ನೀಡಬೇಕಾದರೆ ತಕ್ಕದಾದ ಬ್ಲೇಡ್ ಇನ್ನಿತರೆ ಸಾಮಗ್ರಿ ಬಳಕೆ ಮಾಡಬೇಕಾಗುತ್ತದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಸ್ವಯಂ ಚಾಲಿತ ಮಿಕ್ಸಿಂಗ್ ಯಂತ್ರವನ್ನು ವಿದ್ಯಾರ್ಥಿಗಳಾದ ಕಿರಣ ಕುಮಾರ, ದರ್ಶನ್, ಆಸೀಫ್ ಅಭಿವೃದ್ಧಿಪಡಿಸಿದ್ದು, ವಿವಿಧ ಮಸಾಲೆ ಪದಾರ್ಥಗಳನ್ನು ಸುಲಭವಾಗಿ ಕಲಿಸಲು ಇದು ಸಹಕಾರಿ ಆಗಲಿದೆ. ರಕ್ಷತ್, ನೇಹಾ, ಪ್ರಜ್ವಲ್, ವಿಜೇತಾ, ಶಶಾಂಕ ಅವರು ಗೃಹ ಉಪಯೋಗಿ ಹಾಸ್ಪಿಟಾಲಿಟಿ ಬೋಟ್ ತಯಾರಿಸಿದ್ದು, ಇದರಲ್ಲಿ ನಿತ್ಯ ಬಳಕೆ ಔಷಧ, ಮಾತ್ರೆಗಳನ್ನು ಸುಲಭವಾಗಿ ಸಂಗ್ರಹಿಡುವ ಹಾಗೂ ಸೆನ್ಸರ್ ಆಧಾರಿತವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಸಂಚರಿಸಲಿದ್ದು, ವೃದ್ಧರಿಗೆ ಪ್ರಯೋಜನಕಾರಿ ಆಗಲಿದೆ. ಮಾತ್ರೆ, ಟಾನಿಕ್, ವೈದ್ಯಕೀಯ ತಪಾಸಣೆ ಕೆಲ ಸಾಮಗ್ರಿ, ನೀರಿನ ಬಾಟಲ್ನ್ನು ಇದರಲ್ಲಿ ಇರಿಸಬಹುದಾಗಿದೆ. ಪ್ರಸ್ತುತ 500 ಗ್ರಾಮ ತೂಕದಷ್ಟು ಇದರಲ್ಲಿ ಇರಿಸಬಹುದಾಗಿದ್ದು, ಬರುವ ದಿನಗಳಲ್ಲಿ 2-3 ಕೆ.ಜಿ.ಯಷ್ಟು ತೂಕ ಸಾಮರ್ಥ್ಯದ ಯಂತ್ರ ಸಿದ್ಧತೆ ಯೋಜನೆ ಇದೆ ಎಂಬುದು ವಿದ್ಯಾರ್ಥಿಗಳ ಅನಿಸಿಕೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubli; ದ್ವಂದ್ವತೆ, ತುಷ್ಟೀಕರಣ ಕಾಂಗ್ರೆಸ್ ರಕ್ತದ ಕಣಕಣದಲ್ಲಿದೆ: ಪ್ರಹ್ಲಾದ ಜೋಶಿ
BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
Neha Hiremath ತಂದೆ ಜತೆ ಮಾತನಾಡಿ ಸಾಂತ್ವನ ಹೇಳಿದ ಸಿಎಂ ಸಿದ್ದು
Dharwad; ಕಾಂಗ್ರೆಸ್ ಬಂದ ಮೇಲೆ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಳ: ಸಚಿವ ಜೋಶಿ ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ