ರೌಡಿಗಳಿಗೆ ಗಡಿಪಾರು ಎಚ್ಚರಿಕೆ
Team Udayavani, Jun 18, 2022, 2:30 PM IST
ಆಳಂದ: ರೌಡಿಗಳು ಸಮಾಜದಲ್ಲಿ ಮತ್ತೆ ಅಟಹಾಸ ಮೆರೆದರೆ ಗಡಿಪಾರು ಮಾಡಲಾಗುವುದು ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ ಎಚ್ಚರಿಸಿದರು.
ಪಟ್ಟಣದ ಸಿಪಿಐ ಕಚೇರಿ ಎದುರು ಶುಕ್ರವಾರ ರೌಡಿಗಳ ಪರೇಡ್ ಕೈಗೊಂಡು ಮಾತನಾಡಿದ ಅವರು, ಸಮಾಜದಲ್ಲಿ ಅಶಾಂತಿ ಉಂಟು ಮಾಡುವುದು, ಮಟ್ಕಾ ದಂಧೆ ನಡೆಸುವುದು, ಸುಲಿಗೆ, ಕೊಲೆ ಸೇರಿದಂತೆ ಇನ್ನಿತರ ಸಮಾಜಘಾತಕ ಕೃತ್ಯಗಳಲ್ಲಿ ಭಾಗಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಒಟ್ಟು 379 ರೌಡಿಗಳ ಪೈಕಿ ಪರೇಡ್ನಲ್ಲಿ ಎಲ್ಲ ಠಾಣೆಯ 193 ರೌಡಿಗಳು ಹಾಜರಾಗಿದ್ದರು. ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಭಾರದಂತೆ ಅಧಿಕಾರಿಗಳು ನಿಗಾವಹಿಸಿ ಪ್ರಮುಖ ರಸ್ತೆಗಳಲ್ಲಿ ಗಸ್ತು ತಿರುಗುವ ಪರಿಸ್ಥಿತಿ ನಿಯಂತ್ರಿಸಬೇಕು ಎಂದು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು.
ಡಿವೈಎಸ್ಪಿ ರವಿಂದ್ರ ಶಿರೂರ, ನೂತನ ಪಿಎಸ್ಐ ಭಾಸು ಚವ್ಹಾಣ, ಪಿಎಸ್ಐ ತಿರುಮಲ್ಲೇಶ ಕುಂಬಾರ, ಮಾದನಹಿಪ್ಪರಗಾದ ದೀನೇಶ ಎಂ.ಟಿ. ನರೋಣಾ ಪಿಎಸ್ಐ ವಾತ್ಸಲ್ಯ, ನಿಂಬರಗಾ ಪಿಎಸ್ಐ ಭೀಮರಾಯ ಬಂಕ್ಲಿ ಹಾಗೂ ಸಿಬ್ಬಂದಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು