ನಿಂಬೆ ಬೆಳೆಗಾರನಿಗೆ ಕೋವಿಡ್-19 ಕಂಟಕ
Team Udayavani, Apr 9, 2020, 7:15 PM IST
ಚಡಚಣ: ಪಟ್ಟಣದ ಗೋಡಿಹಾಳ ರಸ್ತೆಯ ತೋಟದಲ್ಲಿ ಬೆಳೆದಿರುವ ನಿಂಬೆ ಹಣ್ಣು ತೋರಿಸುತ್ತಿರುವ ರೈತ ಚನ್ನಪ್ಪ ಕರಜಗಿ.
ಚಡಚಣ: ಈ ಸಲ ಮುಂಗಾರು ಹಿಂಗಾರು ಬೆಳೆಗಳು ಸಂಪೂರ್ಣವಿದ್ದು, ಖುಷಿಯಲ್ಲಿ ರೈತ ಕಾಲ ಕಳೆಯಲು ಕನಸು ಕಂಡಿದ್ದ. ಆದರೆ, ಕೊರೊನಾದಿಂದ ದೇಶವೇ ಲಾಕ್ ಡೌನ್ ಮಾಡಿದ್ದರಿಂದ ಎಲ್ಲ ವ್ಯಾಪಾರ ವಹಿವಾಟುಗಳು ಬಂದ್ ಆಗಿರುವ ಪರಿಣಾಮ ರೈತ ಕಂಗಾಲಾಗಿ ಸಾಲದಲ್ಲಿಯೇ ಜೀವನ ಸಾಗಿಸುವಂತಾಗಿದೆ. ಗೋಡಿಹಾಳ ರಸ್ತೆಯಲ್ಲಿರುವ ತೋಟದಲ್ಲಿ ರೈತ ಚನ್ನಪ್ಪ ಕರಜಗಿ 10 ವರ್ಷಗಳ ಹಿಂದೆ 100 ನಿಂಬೆ ಸಸಿಗಳನ್ನು ನೆಟ್ಟು ಪೋಷಿಸಿದ್ದು, 4 ವರ್ಷಗಳಿಂದ ಅವನಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಕ್ಕು ಸಾಲದಿಂದ ಮುಕ್ತನಾಗಿ ಬದುಕು ನಡೆಸುತ್ತಿದ್ದನು. ಆದರೆ, ಈ ಸಲ ಕೊರೊನಾ ಹೊಡೆತಕ್ಕೆ ಸಿಕ್ಕು ವ್ಯಾಪಾರ ಸ್ಥಗಿತಗೊಂಡು ನಿಂಬೆ ಹಣ್ಣುಗಳು ಮಾರಾಟವಾಗದೇ ಮಾರುಕಟ್ಟೆಗೆ ನಿಂಬೆ ಸಾಗಿಸಲಾಗದೇ ಸಂಕಟದಲ್ಲಿ ಸಿಲುಕೊದ್ದಾನೆ.
ಗಿಡಗಳಲ್ಲಿ ಸಾಕಷ್ಟು ಹಣ್ಣುಗಳು ಫಲ ಕೊಡುತ್ತಿದ್ದು, ಅವು ಅಲ್ಲಿಯೇ ಹಣ್ಣಾಗಿ ನಾಶವಾಗುತ್ತಿವೆ. ಎರಡು ಕೊಳವೆಬಾವಿಗಳ ಮೂಲಕ ಹನಿ ನೀರಾವರಿಯೊಂದಿಗೆ ರಸಗೊಬ್ಬರ ಸಿಂಪಡಿಸಿ, ಸಮಯಕ್ಕೆ ಸರಿಯಾಗಿ ಕಳೆ ತೆಗೆದು, ಇವು ಬೆಳೆಸುವಲ್ಲಿ ಮತ್ತೂಬ್ಬ ರೈತನಿಗೆ ಮಾದರಿಯಾಗಿರುವನು. ಅಲ್ಲಿ ಇಲ್ಲಿ ಬಡವರಿಗೆ ಕೊಟ್ಟು ನಾಶವಾಗದಂತೆ ಮಾಡುವ ಕರ್ತವ್ಯ ಇವನದಾಗಿದೆ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಪರಿಹಾರ ಧನ ನೀಡಿದರೆ ರೈತರಿಗೆ ಅನುಕೂಲವಾಗುವುದು. ಇಲ್ಲವಾದರೆ ಅನ್ನದಾತ ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಸಾಲ ಮಾಡಿ ನಿಂಬೆ ಗಿಡ ಹಚ್ಚಿದ್ದು, ಮಕ್ಕಳಂತೆ ಪೋಷಿಸುತ್ತ ಬಂದಿರುವೆ. ಇತ್ತೀಚಿನ ದಿನಗಳಲ್ಲಿ ಉತ್ತಮ ಬೆಲೆ ಬರುತ್ತಿತ್ತು. ಆದರೆ, ಲಾಕ್ಡೌನ್ ಪರಿಣಾಮ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ಇದರಿಂದ ನನಗೆ ಸುಮಾರು 2 ಲಕ್ಷದಷ್ಟು ಹಾನಿಯಾಗಿದೆ. ದಿನಂಪ್ರತಿ ಸಾವಿರಾರು ಹಣ್ಣುಗಳು ನಾಶವಾಗುತ್ತಿವೆ. ಭರಪೂರ ಕಾಯಿ ಇದ್ದರೂ ಸಿಕ್ಕ ಬೆಲೆಗೆ ಮಾರುವ ಪ್ರಸಂಗ ಬಂದಿದೆ. ಸರಕಾರ ರೈತರ ಸಮಸ್ಯೆ ಗುರುತಿಸಿ ಸೂಕ್ತ ಪರಿಹಾರ ನೀಡಿದರೆ ನೆಮ್ಮದಿ ದೊರೆಯಬಹುದು.
ಚನ್ನಪ್ಪ ಕರಜಗಿ,
ನಿಂಬೆ ಬೆಳೆದ ರೈತ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ
Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್
BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ
SSLC ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿನಿಗೆ ಎದೆನೋವು… ಆಸ್ಪತ್ರೆಗೆ ದಾಖಲು
MUST WATCH
ಹೊಸ ಸೇರ್ಪಡೆ
Lok Sabha Election: ಮಹಿಳೆ ಅಡುಗೆ ಮನೆಗಷ್ಟೇ ಸೀಮಿತವಲ್ಲ: ಗಾಯತ್ರಿ ಸಿದ್ದೇಶ್ವರ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA