ಆರ್ಎಸ್ಎಸ್ನಿಂದ ಸ್ವಚ್ಛತಾ ಕಾರ್ಯ
Team Udayavani, Dec 22, 2021, 3:01 PM IST
ಚಿಂಚೋಳಿ: ರಾಷ್ಟ್ರೀಯ ಸ್ವಯಂ ಸೇವಾ ಸಂಘದ ವತಿಯಿಂದ ಸೇವಾ ಮಹಾ ದಿನ ಪ್ರಯುಕ್ತ ಸ್ವಯಂಸೇವಕರು ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸುತ್ತಮುತ್ತ ಸ್ವಚ್ಛತೆ ಕಾರ್ಯ ಕೈಗೊಂಡರು.
ಪಟ್ಟಣದ ಸರ್ಕಾರಿ ಆಸ್ಪತ್ರೆ ಗಾರ್ಡ್ನ್, ಆಕ್ಸಿಜನ್ ಕೇಂದ್ರದ ಹತ್ತಿರ ಮತ್ತು ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹತ್ತಿರ, ಆಸ್ಪತ್ರೆ ಬಳಿಯ ಪ್ರಮುಖ ರಸ್ತೆಗಳಲ್ಲಿ ಬೆಳೆದು ನಿಂತಿದ್ದ ಹುಲ್ಲು ಕಿತ್ತು ಹಾಕಿದರು. ಆಸ್ಪತ್ರೆ ಸುತ್ತಮುತ್ತ ಬಿದ್ದಿದ್ದ ಹಳೆ ವಸ್ತುಗಳು, ಪ್ಲಾಸ್ಟಿಕ್ ಬಾಟಲಿ, ಬಳಸಿದ ಸೂಜಿ, ಇಂಜೆಕ್ಷನ್, ಕಾಗದದ ಡಬ್ಬಿಗಳನ್ನು ಗೂಡಿಸಿ, ಸುಟ್ಟು ಹಾಕಲಾಯಿತು.
ಸ್ವಯಂಸೇವಕ ರೇವಣಸಿದ್ಧಪ್ಪ ಮೋಘಾ, ಸೇವಾ ಪ್ರಮುಖ ಶ್ರೀನಿವಾಸ ಪಾಟೀಲ, ಶ್ರೀಹರಿ ಕಾಟಾಪುರ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಜಗದೀಶಸಿಂಗ್ ಠಾಕೂರ, ತಾಲೂಕು ಬಿಜೆಪಿ ಅಧ್ಯಕ್ಷ ಸಂತೋಷ ಗಡಂತಿ, ಯುವ ಅಧ್ಯಕ್ಷ ಸತೀಶರೆಡ್ಡಿ ತಾಜಲಾಪುರ ಆಸ್ಪತ್ರೆ, ವೈದ್ಯರಾದ ಡಾ| ಸಂತೋಷಪಾಟೀಲ, ತಾಲೂಕು ಆರೋಗ್ಯಾಧಿಕಾರಿ ಡಾ| ಮಹಮ್ಮದ್ ಗಫಾರ್, ಅಹೆಮದ್, ಕೆ.ಎಂ. ಬಾರಿ, ಪ್ರೇಮಸಿಂಗ್ ಜಾಧವ, ಲಕ್ಷ್ಮಣ ಆವಂಟಿ, ಗಿರಿರಾಜ ನಾಟೀಕಾರ, ಅಲ್ಲಮಪ್ರಭು ಹುಲಿ, ಮಲ್ಲು ಕೊಡಂಬಲ, ಜುನೇದಖಾನ್ ಇನ್ನಿತರರು ಭಾಗವಹಿಸಿದ್ದರು. ಸೇವಾ ಮಹಾದಿನದ ಪ್ರಯುಕ್ತ ಬೂಟ್ ಪಾಲೀಷ್, ಹೇರ್ ಕಟಿಂಗ್, ಶೌಚಾಲಯ ಸ್ವಚ್ಛತೆ ಮಾಡುವ ಪುರಸಭೆ ಕಾರ್ಮಿಕರು, ಮಧ್ಯಪ್ರದೇಶದಿಂದ ಬಂದಿದ್ದ ಬೈಲಗಂಬರ್ ಅವರನ್ನು ಸನ್ಮಾನಿಸಲಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು