ಹೆಚ್ಚುತ್ತಿರುವ ಕಳ್ಳತನಕ್ಕೆ ಕಡಿವಾಣ ಹಾಕಿ
Team Udayavani, Jan 14, 2022, 10:31 AM IST
ಆಳಂದ: ಪಟ್ಟಣದಲ್ಲಿ ಮೇಲಿಂದ ಮೇಲೆ ಬೈಕ್ ಕಳ್ಳತನ, ಸರಗಳ್ಳತನ, ಪಿಕ್ಪಾಕೇಟ್ ಆಗುತ್ತಿದ್ದು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಬಸ್ ನಿಲ್ದಾಣ ಮುಖ್ಯದ್ವಾರದಲ್ಲೇ ಪೊಲೀಸ್ ಪಾಯಿಂಟ್ ಇದ್ದು, ಇಲ್ಲಿ ದಿನವಿಡಿ ಪೊಲೀಸ್ ಸಿಬ್ಬಂದಿ ದಂಡೇ ಇರುತ್ತದೆ. ಹೀಗಿದ್ದರೂ ಗುರುವಾರ ಪೊಲೀಸರಿದ್ದ 50 ಅಡಿ ಅಂತರದಲ್ಲೇ ಕಳ್ಳರು ದ್ವಿಚಕ್ರವಾಹನವೊಂದು ಕದ್ದೊಯ್ದ ಘಟನೆ ನಡೆದಿದೆ. ತಾಲೂಕಿನ ತಡೋಳಾ ಗ್ರಾಮದ ವಿಶ್ವನಾಥ ವೆಂಕಟರಾವ್ ಪಾಟೀಲ ಎನ್ನುವರು ದ್ವಿಚಕ್ರವಾಹನ ನಿಲ್ಲಿಸಿ ಹೋಟೆಲ್ನಲ್ಲಿ ಚಹಾ ಕುಡಿದು ಬರುವರಷ್ಟರನ್ನೇ ವಾಹನ ನಾಪತ್ತೆಯಾಗಿದೆ. ಈ ಕುರಿತು ವೆಂಕಟರಾವ್ ತಕ್ಷಣವೇ ಪೊಲೀಸರನ್ನು ಸಂಪರ್ಕಿಸಿದಾಗ, ಬಸ್ ನಿಲ್ದಾಣದೊಳಗಿನ ಸಿಸಿ ಕ್ಯಾಮೆರಾ ತಪಾಸಣೆಗೆ ಒಳಪಡಿಸಲಾಯಿತು. ಆದರೆ ಈ ವೇಳೆ ವಿದ್ಯುತ್ ಕಡಿತವಾಗಿತ್ತು.
ಹೀಗಾಗಿ ಕಳ್ಳರು ಚಾಲಾಕಿತನ ಪ್ರದರ್ಶಿಸಿದ್ದಾರೆ. ರೇವಣಸಿದ್ಧೇಶ್ವರ ಕಾಲೋನಿ ನಿವಾಸಿ ತೀರ್ಥ ಶಾಲೆ ಶಿಕ್ಷಕ ನಿಂಗಣ್ಣ ಪೂಜಾರಿ ಅವರ ಸ್ಥಳೀಯ ಮನೆ ಎದುರು ನಿಲ್ಲಿಸಿದ್ದ ದ್ವಿಚಕ್ರವಾಹನ ಕಳೆದ ಡಿ. 30ರಂದು ಕಳ್ಳತನವಾಗಿದೆ. ಈ ಕುರಿತು ದೂರು ನೀಡಿದ್ದರೂ ಇನ್ನುವರೆಗೂ ಪತ್ತೆಯಾಗಿಲ್ಲ.
ತಹಶೀಲ್ದಾರ್ ಕಚೇರಿ, ಬಸ್ ನಿಲ್ದಾಣ ಪ್ರದೇಶಗಳಲ್ಲಿ ಅವ್ಯಾಹತವಾಗಿ ಬೈಕ್ ಕಳ್ಳತನಗಳು ನಡೆಯುತ್ತಲೇ ಇವೆ. ಪ್ರತಿ ಗುರುವಾರಕ್ಕೊಮ್ಮೆ ಪಟ್ಟಣದಲ್ಲಿ ನಡೆಯುವ ಸಂತೆಯಲ್ಲಿ ಸಾರ್ವಜನಿಕರ ಹಣ, ವಸ್ತು, ಆಭರಣ ದೋಚಿದ ಘಟನೆಗಳು ನಡೆದಿವೆ. ಈ ಕುರಿತು ಕೆಲವರು ದೂರು ನೀಡಿದ್ದರೆ, ಇನ್ನು ಕೆಲವರು ನೀಡಿಲ್ಲ. ಈ ಹಿಂದೆ ಪೊಲೀಸರು ಪಟ್ಟಣದಲ್ಲಿ ಗಸ್ತು ತಿರುಗುತ್ತಿದ್ದರು. ಆದರೀಗ ಒಮ್ಮೆಯೂ ಪಟ್ಟಣದಲ್ಲಿ ಬರುತ್ತಿಲ್ಲ. ಪ್ರತಿನಿತ್ಯ ಆಟೋ, ಬೀದಿ ವ್ಯಾಪರಿಗಳು, ತಳ್ಳೋ ಗಾಡಿಗಳ ಮಧ್ಯೆ ಸಂಚಾರಕ್ಕೆ ಜನತೆ ಪರದಾಡುತ್ತಿದ್ದು, ಜೇಬುಗಳ್ಳರು, ಸರಗಳ್ಳರಿಗೆ ಈ ವಾತಾವರಣ ಅನುಕೂಲಕರವಾಗಿದೆ. ನಿಂಬರಗಾದ ಆರಾಧ್ಯ ದೈವ ಶ್ರೀ ಶರಣ ಬಸವೇಶ್ವರ ಬೆಳ್ಳಿ ಮೂರ್ತಿಗಳು ಕಳ್ಳತನವಾಗಿ ಹಲವು ದಿನಗಳಾದರೂ ಕಳ್ಳರು ಪತ್ತೆಯಾಗಿಲ್ಲ. ಈ ಕುರಿತು ಪೊಲೀಸರು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂತ್ರಸ್ತರು ಮನವಿ ಮಾಡಿದ್ದಾರೆ.
ಕಳ್ಳತನ ಪ್ರಕರಣಗಳನ್ನು ಮಟ್ಟ ಹಾಕಲು ಪೊಲೀಸ್ ಸಿಬ್ಬಂದಿಗಳನ್ನು ಗಸ್ತಿಗೆ ನಿಯೋಜಿಸಲಾಗುವುದು. ಕಳ್ಳರನ್ನು ಹಿಡಿಯಲು ಜಾಲ ಬೀಸಲಾಗುವುದು. ಬಸ್ ನಿಲ್ದಾಣದಲ್ಲಿ ಸರಿಯಾಗಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ. ಇದರಿಂದ ವಾಹನ ಕಳ್ಳತನ ಯಾರು ಮಾಡುತ್ತಿದ್ದಾರೆ ಎನ್ನುವುದು ಅರಿವಿಗೆ ಬಾರದೇ ಇಂತ ಪ್ರಮಾದಗಳು ನಡೆಯುತ್ತಿವೆ. ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಿಬ್ಬಂದಿಗೆ ಸೂಚಿಸಲಾಗುವುದು. -ಮಂಜುನಾಥ, ಸಿಪಿಐ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ
Kalaburagi;ಆನೆ ಪ್ರತಿಮೆ ಏರಿ ನಾಮಪತ್ರ ಸಲ್ಲಿಸಲು ಬಂದ ಹುಚ್ಚಪ್ಪ
ಸಚಿವರು ಲೀಡ್ ಕೊಡಿಸದಿದ್ದರೆ ಪದತ್ಯಾಗ ಅನಿವಾರ್ಯ: ಪ್ರಿಯಾಂಕ್
ಮೋದಿ ರಾಷ್ಟ್ರ ಮಟ್ಟದಲ್ಲಿ ಸುಳ್ಳು ಹೇಳಿದರೆ, ಜಾಧವ್ ಜಿಲ್ಲಾ ಮಟ್ಟದಲ್ಲಿ… ಖರ್ಗೆ ವಾಗ್ದಾಳಿ
Kalaburagi; ಮೋದಿ ಗ್ಯಾರಂಟಿಗೆ ನೋ ವಾರಂಟಿ: ಸಚಿವ ಪ್ರಿಯಾಂಕ್ ಖರ್ಗೆ ಟೀಕೆ
MUST WATCH
ಹೊಸ ಸೇರ್ಪಡೆ
Drama: ಪ್ರೇಕ್ಷಕರ ಮನಗೆದ್ದ “ಸೀತಾರಾಮ ಚರಿತಾ”
Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ
Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ
Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್
Belagavi; ಕಾಂಗ್ರೆಸ್ ಸರ್ಕಾರದ ಓಲೈಕೆಯಿಂದ ಜಿಹಾದಿ ಕೃತ್ಯಗಳು ಹೆಚ್ಚುತ್ತಿದೆ: ಶೆಟ್ಟರ್