ಇಂದು ವಿಮಾನ ಹಾರಾಟ ತರಬೇತಿಗೆ ಚಾಲನೆ
Team Udayavani, Aug 15, 2021, 1:26 PM IST
ಕಲಬುರಗಿ: ಸ್ವಾತಂತ್ರ್ಯೋತ್ಸವ ದಿನವಾದ ಆ.15ರಂದುಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಥಮ ಬಾರಿಗೆವಿಮಾನ ಹಾರಾಟ ತರಬೇತಿಗೆ ಚಾಲನೆ ನೀಡಲಾಗುತ್ತಿದೆ.
ರವಿವಾರದಿಂದಲೇ ಎರಡು ಅಕಾಡೆಮಿಗಳುಕಾರ್ಯಾರಂಭ ಮಾಡಲಿವೆ.ರಾಜ್ಯದ ಕಲಬುರಗಿ ಹಾಗೂ ಬೆಳಗಾವಿ ವಿಮಾನನಿಲ್ದಾಣದಲ್ಲಿ ತಲಾ ಎರಡು ವಿಮಾನ ಹಾರಾಟ ತರಬೇತಿಸಂಸ್ಥೆಗಳ ಆರಂಭಕ್ಕೆ ಮೇ 31ರಂದು ಕೇಂದ್ರ ಸರ್ಕಾರಅನುಮತಿ ನೀಡಿತ್ತು. ಕಲಬುರಗಿ ವಿಮಾನ ನಿಲ್ದಾಣದಲ್ಲಿಹೈದರಾಬಾದ್ನ ಏಷ್ಯಾ ಪೆಸ್ಟಿಕ್ ಫ್ಲೆ çಟ್ ಟ್ರೈನಿಂಗ್ಅಕಾಡೆಮಿ, ದೆಹಲಿಯ ರೆಡ್ಬರ್ಡ್ ಏವಿಯೇಷನ್ ಅಕಾಡೆಮಿ ತಮ್ಮ ಕೇಂದ್ರಗಳನ್ನು ಆರಂಭಿಸಲಿವೆ.
ತರಬೇತಿ ಆರಂಭಿಸುವ ಮುನ್ನ ಅಕಾಡೆಮಿಗಳುತಮಗೆ ಬೇಕಾದ ಕಚೇರಿ, ತರಗತಿಗಳ ಕೊಠಡಿ ಸೇರಿದಂತೆಮಾಡಿಕೊಳ್ಳಲು ಒಂದು ವರ್ಷದ ಕಾಲಾವಕಾಶ ಇದೆ.ಆದರೆ, ವಿಮಾನ ನಿಲ್ದಾಣದಲ್ಲಿ ಈಗಾಗಲೇ ಲಭ್ಯವಿರುವಸೌಲಭ್ಯಗಳನ್ನು ಬಳಸಿಕೊಂಡು ರವಿವಾರದಿಂದಲೇಎರಡೂ ಅಕಾಡೆಮಿಗಳನ್ನು ಕಾರ್ಯಾರಂಭಿಸಲು ಉದ್ದೇಶಿಸಲಾಗಿದೆ. ರವಿವಾರ ಮಧ್ಯಾಹ್ನ 3:30ಕ್ಕೆ ಕೇಂದ್ರವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಪ್ರದೀಪ್ಸಿಂಗ್ ಖರೋಲಾ ಉಭಯ ಅಕಾಡೆಮಿಗಳ ವಿಮಾನಹಾರಾಟ ತರಬೇತಿಗೆ ಅಧಿಕೃತ ಚಾಲನೆ ನೀಡಲಿದ್ದಾರೆ.
ಕಲಬುರಗಿಯಲ್ಲಿ ವಿಮಾನ ಹಾರಾಟ ತರಬೇತಿಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡುಅಕಾಡೆಮಿಗಳಲ್ಲಿ ಬೇರೆ-ಬೇರೆ ಕಡೆ ವಿದ್ಯಾರ್ಥಿಗಳುತರಬೇತಿ ಪಡೆಯುತ್ತಿದ್ದಾರೆ. ಹೈದರಾಬಾದ್ ಹಾಗೂಮಹಾರಾಷ್ಟÅದಲ್ಲಿ ಈಗಾಗಲೇ ತರಬೇತಿ ನಿರತವಿದ್ಯಾರ್ಥಿಗಳನ್ನು ಇಲ್ಲಿಗೆ ಸ್ಥಳಾಂತರ ಮಾಡಲಾಗುತ್ತಿದೆ.ಈ ವಿದ್ಯಾರ್ಥಿಗಳ ಮುಂದಿನ ತರಬೇತಿ ಕಲಬುರಗಿಯಲ್ಲಿನಡೆಯಲಿದೆ ಎಂದು ವಿಮಾನ ನಿಲ್ದಾಣದ ನಿರ್ದೇಶಕಜ್ಞಾನೇಶ್ವರರಾವ್ ತಿಳಿಸಿದ್ದಾರೆ.
ಈ ಹಿಂದೆ ಉತ್ತರ ಭಾರತದಲ್ಲಿ ಹವಾಮಾನ ವೈಪರೀತ್ಯಕಾರಣದಿಂದ ಅಲ್ಲಿ ನಡೆಯಬೇಕಿದ್ದ ತರಬೇತಿಯನ್ನುಕಲಬುರಗಿಗೆ ಸ್ಥಳಾಂತರ ಮಾಡಲಾಗಿತ್ತು. ವಿಮಾನಹಾರಾಟ ಸಂಸ್ಥೆಯಾದ ಇಂದಿರಾ ಗಾಂಧಿ ರಾಷ್ಟ್ರೀಯಉರಾನ್ ಅಕಾಡೆಮಿ ವಿದ್ಯಾರ್ಥಿಗಳು ಇಲ್ಲಿ ಎರಡುತಿಂಗಳ ಕಾಲ ತರಬೇತಿ ಪಡೆದಿದ್ದರು.
ಈ ಅವಧಿಯಲ್ಲಿಬರೋಬ್ಬರಿ 750 ಗಂಟೆಗಳ ಕಾಲ ಯಶಸ್ವಿಯಾಗಿತರಬೇತಿಯನ್ನು ವಿದ್ಯಾರ್ಥಿಗಳು ಪಡೆದಿದ್ದರು. ಇದುವಿಮಾನ ಹಾರಾಟ ತರಬೇತಿಗೆ ಮುನ್ನಡಿ ಹಾಕಿತ್ತುಎಂದೇ ಹೇಳಬಹುದು.ಈಗ ವಿಮಾನ ಹಾರಾಟ ತರಬೇತಿಗೆ ಆಯ್ಕೆಯಾಗಿರುವ ಏಷ್ಯಾ ಪೆಸಿμಕ್ ಫ್ಲೆ çಟ್ ಟ್ರೈನಿಂಗ್ಅಕಾಡೆಮಿ ಹಾಗೂ ರೆಡ್ಬರ್ಡ್ ಏವಿಯೇಷನ್ಅಕಾಡೆಮಿಗೆ ಈಗಾಗಲೇ ತಲಾ ಐದು ಸಾವಿರ ಚದರಮೀಟರ್ ಜಾಗ ಹಸ್ತಾಂತರ ಮಾಡಲಾಗಿದೆ.
ಕಟ್ಟಡದವಿನ್ಯಾಸ, ನಿರ್ಮಾಣ, ತರಗತಿ ಕೊಠಡಿಗಳು, ಪಾರ್ಕಿಂಗ್ಬೇಸ್ ಮತ್ತು ಅಗತ್ಯವಾದ ಸೌಕರ್ಯಗಳನ್ನು ಸಂಸ್ಥೆಯವರೇನೋಡಿಕೊಳ್ಳಬೇಕಿದೆ. ಪ್ರತಿ ಸಂಸ್ಥೆಯು ಒಂದು ವರ್ಷಕ್ಕೆಮೂರು ಸಾವಿರ ಗಂಟೆ ಹಾರಾಟ ತರಬೇತಿ ನೀಡಲಿವೆ.ಈ ಎರಡೂ ಅಕಾಡೆಮಿಗಳು 30 ವರ್ಷ ಕಾಲ ಕಾರ್ಯನಿರ್ವಹಿಸಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ