ಹೊಲಕ್ಕೆ ದಾಳಿ: 24ಕೆಜಿ ಗಾಂಜಾ ವಶಕ್ಕೆ
Team Udayavani, Nov 7, 2021, 10:20 AM IST
ಚಿಂಚೋಳಿ: ತಾಲೂಕಿನ ಕುಂಚಾವರಂ ವನ್ಯಜೀವಿಧಾಮ ಅರಣ್ಯಪ್ರದೇಶಲ್ಲಿನ ಅಂತಾವರಂ ಗ್ರಾಮದ ತೊಗರಿ ಬೆಳೆ ಸಾಲಿನ ಮಧ್ಯೆ ಬೆಳೆದಿದ್ದ 52 ಸಾವಿರ ರೂ. ಮೌಲ್ಯದ 24ಕೆ.ಜಿ ಗಾಂಜಾವನ್ನು ಕುಂಚಾವರಂ ಪೊಲೀಸರು ದಾಳಿ ಮಾಡಿ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ಇಂದಿರಾ ಪಾಟೀಲ ತಿಳಿಸಿದ್ದಾರೆ.
ಅಂತಾವರಂ ಗ್ರಾಮದ ಆರೋಪಿ ರಾಜು ಅಂಜಣ್ಣ ಎನ್ನುವಾತನಿಗೆ ಸೇರಿದ ಸರ್ವೇ ನಂ.27ರಲ್ಲಿ ತೊಗರಿ ಬೆಳೆಯ ಸಾಲಿನ ಮಧ್ಯೆ ಅಕ್ರಮವಾಗಿ ಬೆಳೆದಿದ್ದ 49 ಹಸಿ ಗಾಂಜಾ ಗಿಡಗಳು ಒಟ್ಟು 52 ಸಾವಿರ ರೂ. ಮೌಲ್ಯದ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಎಸ್ಪಿ ಇಶಾ ಪಂತ, ಹೆಚ್ಚುವರಿ ಎಸ್ಪಿ ಪ್ರಸನ್ನಕುಮಾರ ದೇಸಾಯಿ ಮಾರ್ಗದರ್ಶನದಲ್ಲಿ ಚಿಂಚೋಳಿ ಡಿವೈಎಸ್ಪಿ ಬಸವೇಶ್ವರ ಹೀರಾ, ಸಿಪಿಐ ಮಹಾಂತೇಶ ಪಾಟೀಲ, ಎಎಸ್ಐ ಶರಣಪ್ಪ, ಪೊಲೀಸ್ ಪೇದೆಗಳಾದ ಪ್ರೇಮಕುಮಾರ ರಾಠೊಡ, ಮಂಜುನಾಥ, ವಿಶ್ವನಾಥ, ಸಂತೋಷ, ಮಲ್ಲಪ್ಪ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ ಎಂದು ಪಿಎಸ್ಐ ಇಂದಿರಾ ಪಾಟೀಲ ತಿಳಿಸಿದ್ದಾರೆ.
ಅಂತಾವರಂದಲ್ಲಿ 2016ರಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಕಬ್ಬಿನ ಬೆಳೆಯಲ್ಲಿ ಬೆಳೆದಿದ್ದ 55 ಲಕ್ಷ ರೂ. ಮೌಲ್ಯದ ಅಂದಾಜು 100 ಕ್ವಿಂಟಲ್ ಬೆಳೆದಿದ್ದ ಗಾಂಜಾ ವಶಪಡಿಸಿಕೊಂಡಿದ್ದನ್ನು ಸ್ಮರಿಸಬಹುದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್