ಮಕ್ಕಳಿಗೆ ದೇಶಮುಖ ಸಂಸ್ಥಾನ ಇತಿಹಾಸ ಅರಿಕೆ
Team Udayavani, Oct 13, 2021, 11:53 AM IST
ಆಳಂದ: ಎರಡನೂರು ವರ್ಷ ಪರಂಪರೆ ಹೊಂದಿರುವ ನಿರಗುಡಿ ಗ್ರಾಮದ ದೇಶಮುಖರ ಸಂಸ್ಥಾನದ ಇತಿಹಾಸವನ್ನು ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಗೆ ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕ ಜೀತೇಂದ್ರ ತಳವಾರ ಪರಿಚಯಿಸಿದರು.
ಮಾಣಿಕರಾವ್ ದೇಶಮುಖ ಆಡಳಿತ ನಡೆಸುವಾಗ ಕವಲಗಾ, ಖಾತ್ರಾಬಾದ, ನಿರಗುಡಿ, ಚಿಂಚೋಳಿ ಗ್ರಾಮಗಳು ದೇಶಮುಖರ ಸಂಸ್ಥಾನಕ್ಕೆ ಒಳಪಟ್ಟಿದ್ದವು. ಈ ಇತಿಹಾಸವನ್ನು ಮಾಣಿಕರಾವ್ ಅವರ ವಾರಸುದಾರರಾದ ಸಿದ್ಧಣ್ಣ ದೇಶಮುಖ, ಶಂಕರರಾವ್ ದೇಶಮುಖ ವಿವರಿಸಿದರು. ನಂತರ ಗ್ರಾಮದ ಪುರಾತನವಾದ ಕರಿಕಲ್ಲಿನ ಎತ್ತರದ ಗೋಡೆಯನ್ನು ಮಕ್ಕಳಿಗೆ ತೋರಿಸಲಾಯಿತು.
ಈ ಗೋಡೆ ಒಳಗೆ ಇಂಗ್ಲೆಂಡಿನ ಎಲಿಜಬೆಥ್ ರಾಣಿ ಹಾಗೂ ರಾಜ, ಇಂದಿರಾಗಾಂಧಿ ಅವರು ಸೊಲ್ಲಾಪುರಕ್ಕೆ ಬಂದಾಗ ಮಾಣಿಕ್ರಾವ್ ಅವರು ಇಲಕಲ್ ಸೀರೆ ನೀಡಿ ಗೌರವಿಸಿದ ಭಾವಚಿತ್ರದ ಕುರಿತು ತಿಳಿಸಲಾಯಿತು. ಇದೇ ವೇಳೆ ಗೋಡೆ ಮೇಲಿದ್ದ ನಿಜಾಮರ ಭಾವಚಿತ್ರ, ನೇಣುಗಂಬ, ಕೈದಿಗಳನ್ನು ಬಂಧಿಸಿ ಇಡುತ್ತಿದ್ದ ಕೋಣೆ, ಶ್ವಾನ, ಕುದುರೆ, ಜಿಂಕೆ, ಕೋತಿ ಹಾಗೂ ಪಕ್ಷಿಗಳಲ್ಲಿ ಗಿಳಿ, ನವಿಲುಗಳನ್ನು ಸಾಕಿ ಬೆಳೆಸಿದ ಪಂಜರದ ಸ್ಥಳಗಳನ್ನು ಮಕ್ಕಳು ವೀಕ್ಷಿಸಿದರು.
1942ರಲ್ಲಿ ಗ್ರಾಮದ ದ್ವಾರಬಾಗಿಲನ್ನು ಮರು ಸಂಸ್ಕರಣ ಮಾಡಲಾಗಿತ್ತು. ಈ ಗೋಡೆಯ ಮೇಲಿರುವ ಹುಲಿ ವಿಗ್ರಹ, ಚಿರತೆ ಹಾಗೂ ವಿವಿಧ ಹೂವಿನ ಕುಂಡಲಗಳು ಮಕ್ಕಳನ್ನು ಆಕರ್ಷಿಸಿದವು. ನಂತರ ಮಕ್ಕಳು ಗ್ರಾಮದೇವತೆ ಶ್ರೀ ಸಿದ್ಧೇಶ್ವರ ಪ್ರತಿಮೆಯನ್ನು ವೀಕ್ಷಿಸಿ, ಅದರ ಇತಿಹಾಸವನ್ನು ತಿಳಿದುಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್
MUST WATCH
ಹೊಸ ಸೇರ್ಪಡೆ
Politics: ಚಿತ್ರದುರ್ಗ ರಾಜಕೀಯ ನಿರಾಶ್ರಿತರ ಕೇಂದ್ರವೇ?: ರಘುಚಂದನ್
PSI re-examination: ಪಿಎಸ್ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ
Mandya: ಬಿಜೆಪಿ ಮುಖಂಡರಿಗೆ ವೇದಿಕೆ ಬಿಟ್ಟು ಕೆಳಗೆ ಕುಳಿತ ಮಂಡ್ಯ ದಳಪತಿಗಳು!
Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್ ಮಧ್ವರಾಜ್
Hassan Lok sabha Constituency: ಪ್ರಜ್ವಲ್ ರೇವಣ್ಣ ನಾಮಪತ್ರ ಸಲ್ಲಿಕೆ