ಮತ್ತೆ ಮೂರು ಕೋವಿಡ್ ಸೋಂಕು
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆ ಹೋಂ ಕ್ವಾರಂಟೈನ್ನಲ್ಲಿದ್ದ ವ್ಯಕ್ತಿಗೂ ಹೆಮ್ಮಾರಿ ದೃಢ
Team Udayavani, Apr 17, 2020, 10:37 AM IST
ಕಲಬುರಗಿ: ನಗರದ ಎಲ್ಲೆಡೆ ಪೊಲೀಸರು ಲಾಠಿ ಹಿಡಿದು ಸಂಚರಿಸಿದರು.
ಕಲಬುರಗಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಗುರುವಾರ ಐದು ವರ್ಷದ ಮಗು ಸೇರಿದಂತೆ ಮತ್ತೆ ಮೂವರಲ್ಲಿ ಮಹಾಮಾರಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ಕಲಬುರಗಿ ತಾಲೂಕು, ಅಫಜಲಪುರ ಮತ ಕ್ಷೇತ್ರದ ಕವಲಗಾ (ಬಿ) ಗ್ರಾಮದ ಒಂದು ವರ್ಷದ ಗಂಡು ಮಗುವಿನ ನೇರ ಸಂಪರ್ಕಕ್ಕೆ ಬಂದಿದ್ದ 23 ವರ್ಷದ ಯುವತಿಗೆ ಗುರುವಾರ ಕೊರೊನಾ ಸೋಂಕು ಇರುವುದಾಗಿ ಪ್ರಯೋಗಾಲಯದ ವರದಿ ಬಂದಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ಈ ಮಗುವಿಗೆ ಸೋಂಕು ತಗುಲಿರುವ ಹಿನ್ನೆಲೆ ಹಾಗೂ ಪ್ರವಾಸ ಪರಿಶೀಲಿಸಿದಾಗ ಇತ್ತೀಚೆಗೆ ಮಗುವಿನೊಂದಿಗೆ ತಂದೆಯೂ ಬೆಂಗಳೂರಿನಿಂದ ಬಂದಿರುವ ಮಾಹಿತಿ ಇದೆ. ತಂದೆಗೆ ಸೋಂಕು ಇಲ್ಲ. ಆದರೆ, ಮಗನಿಗೆ ಸೋಂಕು ಬಂದಿದೆ. ಈ ಕುರಿತು ಇನ್ನುಷ್ಟು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಸಿಇಒ ಡಾ| ರಾಜಾ ಪಿ. ಮಾಹಿತಿ ನೀಡಿದ್ದಾರೆ.
ಮತ್ತೊಂದು ಮಗುವಿಗೆ ಹೆಮ್ಮಾರಿ: ಕವಲಗಾ (ಬಿ)ದ ಒಂದು ವರ್ಷದ ಗಂಡು ಮಗು ಹಾಗೂ ವಾಡಿ ಪಟ್ಟಣದ ಎರಡು ವರ್ಷದ ಗಂಡು ಮಗುವಿಗೆ ಹೆಮ್ಮಾರಿ ಸೋಂಕು ದೃಢಪಟ್ಟಿದ್ದು, ಗುರುವಾರ ಕಲಬುರಗಿ ನಗರದ ಐದು ವರ್ಷದ ಗಂಡು ಮಗುವಿನಲ್ಲೂ ಕಾಣಿಸಿಕೊಂಡಿದೆ. ಮಂಗಳವಾರ 10 ವರ್ಷದ ಬಾಲಕಿಗೂ ಕೊರೊನಾ ಪತ್ತೆಯಾಗಿತ್ತು. ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಘಿ-ಎ-ಜಮಾತ್ ಸಭೆಯಲ್ಲಿ ಪಾಲ್ಗೊಂಡು ಮರಳಿ ಬಂದವರೊಂದಿಗೆ ಸಂಪರ್ಕ ಹೊಂದಿ, ಏ.13ರಂದು ಮೃತಪಟ್ಟ ಬಟ್ಟೆ ವ್ಯಾಪಾರಿಯ ಸಂಪರ್ಕಕ್ಕೆ ಈ ಐದು ವರ್ಷದ ಮಗು ಸಂಪರ್ಕಕ್ಕೆ ಬಂದಿತ್ತು. ಈ ಹಿಂದೆ ಬಟ್ಟೆ ವ್ಯಾಪಾರಿಯ 51 ವರ್ಷದ ಸಹೋದರ ಹಾಗೂ ಸಹೋದರನ ಪುತ್ರಿಯಾದ 10 ವರ್ಷದ ಬಾಲಕಿಗೆ ಸೋಂಕು ಖಚಿತವಾಗಿತ್ತು.
ಬೆಂಗಳೂರಿಂದ ಮರಳಿದ ವ್ಯಕ್ತಿಗೂ ಸೋಂಕು: ಬೆಂಗಳೂರಿನಿಂದ ಮರಳಿದ್ದ 32 ವರ್ಷದ ವ್ಯಕ್ತಿಗೂ ಗುರುವಾರ ಸೋಂಕು ದೃಢಪಟ್ಟಿದೆ. ಮಾ.24ರಂದೇ ನಗರಕ್ಕೆ ಮರಳಿದ್ದ ಈತನನ್ನು ಈ ಹಿಂದೆಯೇ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಈತನಿಗೆ ಕೋವಿಡ್ ನೆಗೆಟಿವ್ ಎಂದು ಪ್ರಯೋಗಾಲಯದ ವರದಿ ಬಂದಿತ್ತು. ಮಾ.30ರಿಂದ ಈ ವ್ಯಕ್ತಿಯನ್ನು ಹೋಮ್ ಕ್ವಾರಂಟೈನ್ ನಲ್ಲಿ ಇರಿಸಲಾಗಿತ್ತು. ಏ.14ರಂದು ಜ್ವರ ಮತ್ತೆ ಕಾಣಿಸಿಕೊಂಡ ಪರಿಣಾಮ ಮತ್ತೂಮ್ಮೆ ಗಂಟಲು ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ರವಾನಿಸಿತ್ತು. ಇದೀಗ ಆತನಿಗೆ ಕೊರೊನಾ ಪಾಸಿವಿಟ್ ಇರುವುದು ಖಚಿತವಾಗಿದೆ. ಈತ ಬೆಂಗಳೂರಿನಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಎಂದು ಗೊತ್ತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್