ಆಸೆಗಣ್ಣಲ್ಲಿ ‘ನೀರಾಹಾರ’ ದಾಹ
Team Udayavani, May 3, 2020, 10:37 AM IST
ಕಲಬುರಗಿ: 46 ದಿನಗಳ ಬಳಿಕ ಲಾಕ್ ಡೌನ್ ಸಡಿಲಿಕೆ ಮಾಡಿ ಸರ್ಕಾರ ವಲಸೆ ಕಾರ್ಮಿಕರ ಪ್ರವಾಸಕ್ಕೆ ಅನುವು ಮಾಡಿಕೊಟ್ಟಿದೆ. ಹೊಟ್ಟೆ ಪಾಡಿಗಾಗಿ ದೂರದ ಊರಿಗಳಿಗೆ ಹೋದವರು ಮತ್ತೆ ತಮ್ಮೂರಗಳತ್ತ ಧಾವಿಸುವ ತವಕದಲ್ಲಿದ್ದಾರೆ.
ಎಲ್ಲಿಂದಲೋ ಬಂದು ಸ್ವಲ್ಪ ಹೊತ್ತಲ್ಲೇ ಮನೆಯ ಗೂಡು ಸೇರುತ್ತೇವೆ ಎಂಬ ಬಡ ಜೀವಗಳ ಆಸೆಗಣ್ಣಗಳಲ್ಲಿ “ನೀರಾಹಾರ’ದ ದಾಹ ಕಾಡುತ್ತಿತ್ತು. ಹೌದು, ಕೂಲಿ ಅರಸಿ ಗುಳೆ ಹೋದ
ಕೂಲಿ ಕಾರ್ಮಿಕರು ಶನಿವಾರ ತಮ್ಮ “ತವರು’ ಜಿಲ್ಲೆಗೆ ಆಗಮಿಸಿದ್ದರು. ಇನ್ನೇನು ಮನೆ ಸೇರುವ ಹತ್ತಿರದಲ್ಲಿದ್ದೇವೆ ಎನ್ನುವ ಸಮಾಧಾನ ಅವರ ಮನದಲ್ಲಿ ಮನೆ ಮಾಡಿತ್ತು. ಆದರೆ, ರಾತ್ರಿಯಿಂದ ಹಸಿದ ಹೊಟ್ಟೆ ಅವರನ್ನು ಬಾಧಿಸುತ್ತಲೇ ಇತ್ತು. ಹುಬ್ಬಳ್ಳಿ-ಧಾರವಾಡದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಹೊತ್ತ ತಂದ ಬಸ್ಗಳಲ್ಲೇ ಅವರ ಹಸಿವಿನ ಬಾಧೆ ಪ್ರತಿಧ್ವನಿಸಿತ್ತು.
ಕೂಗಳತೆ ದೂರದಲ್ಲೇ ಇದ್ದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೂ ಇದು ಮುಟ್ಟಲಿಲ್ಲ. ಲಾಕ್ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಸಿಲುಕಿದ್ದ ಜಿಲ್ಲೆಯ ಕೂಲಿ ಕಾರ್ಮಿಕರನ್ನು ಅಲ್ಲಿನ ಜಿಲ್ಲಾಡಳಿತ ಸ್ಥಳಾಂತರಿಸಿತ್ತು. ರಾತ್ರಿ 1ಗಂಟೆಗೆ ಅಲ್ಲಿಂದ ಮೊದಲ ಹಂತವಾಗಿ ಆರು ಬಸ್ ಗಳಲ್ಲಿ ಕಾರ್ಮಿಕರನ್ನು ಕಳುಹಿಸಲಾಗಿತ್ತು. ಆರೋಗ್ಯ ತಪಾಸಣೆಗಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಎಲ್ಲರನ್ನೂ ಕರೆ ತರಲಾಗಿತ್ತು. ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣಕ್ಕೆ ಬಂದಿದ್ದರೂ, ಮಧ್ಯಾಹ್ನ 12 ಗಂಟೆಯಾದರೂ ಅವರಿನ್ನು ಬಸ್ನಲ್ಲೇ ಉಳಿದಿದ್ದರು. ಬಸ್ನಿಂದ ಕೆಳಗೆ ಇಳಿಯದಂತೆ ಎಲ್ಲರೂ ಬಸ್ಸಿನಲ್ಲೇ ಇರಬೇಕು ಎಂದು ಹೇಳಿ ಪೊಲೀಸರು ಕಾವಲು ನಿಂತಿದ್ದರು. ಹೀಗಾಗಿ ಊಟ, ನೀರು ಇಲ್ಲದೇ ಎಲ್ಲರೂ ಬಸ್ನಲ್ಲಿ ಕುಳಿತು ಸಂಕಟಪಡಬೇಕಾಯಿತು.
ಇಲ್ಲಿ ಇದ್ದಿದ್ದು ಬರೀ ಹಿರಿಯರಷ್ಟೇ ಅಲ್ಲ, ಸಣ್ಣ ಮಕ್ಕಳು, ಗರ್ಭಿಣಿಯರು ಇದ್ದರು. ಒಂದು ಬಸ್ನಲ್ಲಿ 21 ಜನರಂತೆ ಆರು ಬಸ್ಗಳಲ್ಲಿ 120 ಮಂದಿ ಹಸಿವಿನಿಂದ ಬಳಲಿದರು. ಒಂದೂವರೆ ತಿಂಗಳಿಂದ ಸಂಕಟದ ಬದುಕು ಕಂಡಿದ್ದೇವೆ. ಈಗ ಮನೆ ಸೇರುವ ಹೊತ್ತಲ್ಲೂ ನಮಗೆ ಕಾಯಲು ಆಗಿಲ್ಲ. ದೊಡ್ಡವರಿಗೆ ಆಹಾರ ಕೊಡದೇ ಹೋದರೂ, ಮಕ್ಕಳು ಹಸಿವಿನಿಂದ ನರಳುತ್ತಿದ್ದು, ಅವರಿಗಾದರೂ ಏನಾದರೂ ತಿನ್ನಲು ಕೊಡಿ ಎಂದು ಹಲವರು ಗೋಗರೆದರು.
ರಂಗಪ್ಪ ಗಧಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು