ಮೊದಲ ದಿನವೇ ಸಾರಿಗೆ ನಿರೀಕ್ಷೆ ಹುಸಿ

ಈಶಾನ್ಯದಲ್ಲಿ ಬರೀ 281 ಬಸ್‌ಗಳ ಕಾರ್ಯಾಚರಣೆ |ಪ್ರಯಾಣಕ್ಕೆ ಆಸಕ್ತಿ ತೋರದ ಸಾರ್ವಜನಿಕರು

Team Udayavani, May 20, 2020, 10:51 AM IST

20-April-02

ಸಾಂದರ್ಭಿಕ ಚಿತ್ರ

ಕಲಬುರಗಿ: ಸಾರಿಗೆ ಬಸ್‌ ಸಂಚಾರ ಆರಂಭವಾದ ಮೊದಲ ದಿನವೇ ಪ್ರಯಾಣಿಕರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಪ್ರಯಾಣಿಸಲು ಸಾರ್ವಜನಿಕರು ಆಸಕ್ತಿ ತೋರದ ಕಾರಣ ನಿಲ್ದಾಣಗಳಲ್ಲೇ ಅನೇಕ ಬಸ್‌ಗಳು ನಿಂತವು. ಮಂಗಳವಾರ 1,200 ಬಸ್‌ ಗಳ ಓಡಾಟ ನಿರೀಕ್ಷೆ ಹೊಂದಿದ್ದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇವಲ 281 ಬಸ್‌ಗಳ ಕಾರ್ಯಾಚರಣೆ ನಡೆಸಿದವು.

ಈಶಾನ್ಯ ಸಾರಿಗೆ ವ್ಯಾಪ್ತಿಯ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯಪುರ ಜಿಲ್ಲೆಗಳಲ್ಲೇ ಬಹುತೇಕ ಬಸ್‌ಗಳು ಸಂಚರಿಸಿದ್ದು, ಬಳ್ಳಾರಿಯಿಂದ ಮಾತ್ರ ಬೆಂಗಳೂರಿಗೆ 5 ಬಸ್‌ಗಳು ಪ್ರಯಾಣಿಸಿದವು. ಉಳಿದಂತೆ ಅಕ್ಕ-ಪಕ್ಕದ ಜಿಲ್ಲೆಗಳಿಗೆ ಮಾತ್ರ ಬಸ್‌ ಸೀಮಿತವಾಗಿದ್ದವು.

ಬೆಳಿಗ್ಗೆ 7ಗಂಟೆಗೆ ಆರಂಭವಾದ ಬಸ್‌ ಸಂಚಾರ, ಸಂಜೆ 7ಗಂಟೆಗೆ ಅಂತ್ಯವಾಯಿತು. ಯಾವುದೇ ನಿಲ್ದಾಣದಿಂದ ಬಸ್‌ ಹೋದರೂ ಸಂಜೆ 7ಗಂಟೆ ತಲುಪುವ ಹಾಗೂ ಮರಳಿ ಬರುವ ಮಾರ್ಗಗಳಿಗೆ ಮಾತ್ರ ಬಿಡಲಾಯಿತು. ಹೀಗಾಗಿ ಸಮಯ ನಿಗದಿಯಿಂದ ಕಲಬುರಗಿಯಂತಹ ಕೇಂದ್ರ ಬಸ್‌ ನಿಲ್ದಾಣದಲ್ಲೂ 6 ಗಂಟೆ ವೇಳೆಗೆ ಸಂಚಾರ ನಿಲ್ಲಿಸುವ ಅನಿರ್ವಾಯತೆ ಎದುರಾಯಿತು. ಇಲ್ಲಿನ ಬಸ್‌ ನಿಲ್ದಾಣದಿಂದ ವಿವಿಧೆಡೆ ಸಂಚಾರಕ್ಕೆ 50 ಬಸ್‌ಗಳು ಸಿದ್ಧವಾಗಿದ್ದವು. ಆದರೆ, 31 ಬಸ್‌ಗಳು ಮಾತ್ರ ಸಂಚರಿಸಿದವು. ಬೀದರ-6, ವಿಜಯಪುರ-5, ಸುರಪುರ-4, ಯಾದಗಿರಿ-ಆಳಂದ ತಲಾ 2 ಹಾಗೂ ರಾಯಚೂರು, ಲಿಂಗಸೂಗುರು, ಅಫಜಲಪುರ, ಚಿತ್ತಾಪುರ, ಜೇವರ್ಗಿ, ಶಹಾಬಾದ್‌ಗೆ ಕೇವಲ 1
ಬಸ್‌ ಕಾರ್ಯಾಚರಣೆ ನಡೆಸಿತು. ಚಿಂಚೋಳಿ, ಸೇಡಂಗೆ ಬಸ್‌ಗಳು ಇದ್ದರೂ ಪ್ರಯಾಣಿಕರು ಇರಲಿಲ್ಲ. ಬಸ್‌ ನಿಲ್ದಾಣದಲ್ಲಿ ತುಂಬಾ ಪ್ರಯಾಣಿಕರಿಗಿಂತ ಹೆಚ್ಚು ಸಿಬ್ಬಂದಿಯೇ ಕಂಡು ಬಂದರು. ಆದ್ದರಿಂದ 25ರಿಂದ 30 ಜನ ತುಂಬಿದರೆ ಮಾತ್ರ ಬಸ್‌ ಓಡಿಸಲಾಯಿತು.

ಮಾರ್ಗ ಮಧ್ಯೆ ನಿಲ್ಲಲ್ಲ: ನಿಲ್ದಾಣದಿಂದ ನಿಲ್ದಾಣಕ್ಕೆ ನೇರವಾಗಿ ಬಸ್‌ಗಳ ಕಾರ್ಯಾಚರಣೆ ನಡೆಸಿದವು. ಮಾರ್ಗ ಮಧ್ಯೆಯಲ್ಲಿ ಬಸ್‌ನಿಂದ ಇಳಿಯಲು ಅವಕಾಶ ನೀಡಿದರೂ, ಪ್ರಯಾಣಿಕರನ್ನು ಹತ್ತುವಾಗಿರಲಿಲ್ಲ. ಈ ಬಗ್ಗೆ ಪ್ರಯಾಣಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಕಾಲೇಜಿನ ಕೆಲಸ ನಿಮಿತ್ತ ಚೌಡಾಪುರಕ್ಕೆ ತೆರಳ ಬೇಕಿತ್ತು. ಹೀಗಾಗಿ ಅಫಜಲಪುರ ಬಸ್‌ ಹತ್ತಲು ಹೋಗಿದ್ದೆ. ಹೋಗಬೇಕಾದರೆ ಚೌಡಾಪುರದಲ್ಲಿ ಇಳಿಸುತ್ತೇವೆ. ಆದರೆ, ಬರಬೇಕಾದರೆ ಬಸ್‌ ನಿಲ್ಲಿಸಲ್ಲ ಎಂದು ಹೇಳುತ್ತಾರೆ. ನಾವು ಮರಳಿ ಮನೆಗೆ ಬರುವುದು ಹೇಗೆ ಎಂದು ಖಾಸಗಿ ಕಾಲೇಜಿನ ಪ್ರಾಂಶುಪಾಲ ಶರಣಯ್ಯ ಹಿರೇಮಠ ಖಾರವಾಗಿ ಪ್ರಶ್ನಿಸಿದರು.

ಸಾಮಾಜಿಕ ಅಂತರಕ್ಕೆ ಒತ್ತು: ಬಸ್‌ ನಿಲ್ದಾಣ ಮತ್ತು ಬಸ್‌ಗಳಲ್ಲಿ ಪ್ರಯಾಣಿಸುವಾಗ ಸಾಮಾಜಿಕ ಅಂತರಕ್ಕೆ ಹೆಚ್ಚಿನ ಒತ್ತು ನೀಡಲಾಯಿತು. ಬಸ್‌ನೊಳಗೆ ಮೂರು ಆಸನಗಳ ವ್ಯವಸ್ಥೆ ಇರುವ ಕಡೆ ಇಬ್ಬರು ಮತ್ತು ಎರಡು ಆಸನದಲ್ಲಿ ಒಬ್ಬರೇ ಪ್ರಯಾಣಿಕರು ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಅದೇ ರೀತಿ ಬಸ್‌ ನಿಲ್ದಾಣದ ಕುಳಿತುಕೊಳ್ಳುವಲ್ಲೂ ಸಾಮಾಜಿಕ ಅಂತರ ಕಾಪಾಡಲು ಒಂದು ಬಿಟ್ಟು ಮತ್ತೊಂದು ಆಸನದಲ್ಲಿ ಗಟ್ಟಿ ಕಟ್ಟಲಾಗಿತ್ತು. ಬಸ್‌ ನಿಲ್ದಾಣದ ಆಗಮನ ಮತ್ತು ನಿರ್ಗಮನಕ್ಕೆ ಒಂದೇ ಪ್ರವೇಶ ದ್ವಾರದ ಮಾಡಲಾಯಿತು. ಸೋಂಕು ನಿವಾರಕ ಔಷಧಿ ಸಿಂಪಡಣೆ ಸುರಂಗ ಸ್ಥಾಪಿಸಿ, ಅದರ ಮುಖಾಂತರವೇ ಪ್ರಯಾಣಿಕರು ಪ್ರವೇಶಿಸಲು ವ್ಯವಸ್ಥೆ ಮಾಡಲಾಗಿತ್ತು. ಅಲ್ಲದೇ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿ, ಪ್ರತಿ ಪ್ರಯಾಣಿಕರು ಹೆಸರು, ಮೊಬೈಲ್‌ ನಂಬರ್‌ ದಾಖಲಿಸಿಕೊಳ್ಳಲಾಯಿತು.

ಇಂದು ಬೆಂಗಳೂರಿಗೆ ಬಸ್‌
ಮಂಗಳವಾರ ಬೆಂಗಳೂರಿಗೆ ತೆರಳಲು ಪ್ರಯಾಣಿಕರಿದ್ದರೂ ಬಸ್‌ಗಳ ವ್ಯವಸ್ಥೆ ಇರಲಿಲ್ಲ. ಬೆಂಗಳೂರಿನ ವ್ಯವಸ್ಥೆ ಮಾಹಿತಿ ಪಡೆಯಲು ನೌಕರರು, ವರ್ತಕರು ಬಸ್‌ ನಿಲ್ದಾಣಕ್ಕೆ ಬಂದಿದ್ದರು. ಹೀಗಾಗಿ ಬುಧವಾರದಿಂದ ಕಲಬುರಗಿ ಸೇರಿದಂತೆ ವಿವಿಧ ಬಸ್‌ ನಿಲ್ದಾಣಗಳಿಂದ ಬೆಂಗಳೂರಿಗೆ ಬಸ್‌ಗಳಿಗೆ ಕಾರ್ಯಾಚರಣೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹುಬ್ಬಳ್ಳಿ, ಬೆಳಗಾವಿ, ದಾವಣಗೆರೆ, ಶಿವಮೊಗ್ಗ, ಬಾಗಲಕೋಟೆ, ಮೈಸೂರಿಗೂ ಬಸ್‌ ಸಂಚರಿಸಲಿವೆ ಎಂದು ಎನ್‌ಇಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಡಿ.ಕೊಟ್ರಪ್ಪ ತಿಳಿಸಿದ್ದಾರೆ.

ಮೊದಲ ದಿನ ನಿರೀಕ್ಷೆಯಿಂದ ಕಡಿಮೆ ಪ್ರಮಾಣದಲ್ಲಿ ಬಸ್‌ಗಳು ಕಾರ್ಯಾಚರಣೆ ನಡೆಸಿವೆ. ಮಂಗಳವಾರ ಸಹ ಹಲವು ಜಿಲ್ಲೆಗಳಲ್ಲಿ ಕೋವಿಡ್ ಪ್ರಕರಣಗಳು ಕಂಡು ಬಂದಿದ್ದರಿಂದ ಸಾರ್ವಜನಿಕರು ಪ್ರಯಾಣಿಸಲು ಮುಂದೆ ಬಂದಿಲ್ಲ ಎಂದೆನಿಸುತ್ತದೆ.
ಜಹೀರಾ ನಸೀಂ,
ವ್ಯವಸ್ಥಾಪಕ ನಿರ್ದೇಶಕಿ, ಎನ್‌ಇಕೆಆರ್‌ಟಿಸಿ

ಟಾಪ್ ನ್ಯೂಸ್

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್‌

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೇವು?: ಖಂಡ್ರೆ

Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.‌ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ

1-wqeqwewq

Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Son claims Mukhtar Ansari was given ‘slow poison’

Banda; ಗ್ಯಾಂಗ್‌ಸ್ಟರ್‌ ಮುಖ್ತಾರ್ ಅನ್ಸಾರಿಗೆ ವಿಷಪ್ರಾಶನ: ಪುತ್ರನ ಆರೋಪ

6-good-friday

Good Friday: ಕ್ರೈಸ್ತರಿಂದ ಕೊನೆಯ ಭೋಜನದ ಸ್ಮರಣೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.