ಕಸಾಪ ಅಭ್ಯರ್ಥಿ ನಿರಗುಡಿ ಪ್ರಚಾರ
Team Udayavani, Nov 9, 2021, 11:47 AM IST
ಆಳಂದ: ನ.21ರಂದು ನಡೆಯಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯ ಅಭ್ಯರ್ಥಿ ಬಿ.ಎಚ್. ನಿರಗುಡಿ ಅವರು ತಾಲೂಕಿನ ಹಲವಡೆ ತಮ್ಮ ಬೆಂಬಲಿಗರೊಂದಿಗೆ ಮತದಾರರ ಮನೆ-ಮನೆಗೆ ತೆರಳಿ ಮತಯಾಚನೆ ನಡೆಸಿದರು.
ಸರಸಂಬಾ, ಕಿಣ್ಣಿ ಸುಲ್ತಾನ್, ಸಕ್ಕರಗಾ, ಖಜೂರಿ, ಆಳಂದ ಪಟ್ಟಣ ಸೇರಿ ಮತ್ತಿತರ ಕಡೆ ಕಸಾಪ ಮತದಾರರಲ್ಲಿ ತೆರಳಿದ ನಿರಗುಡಿ ಅವರು, ಇದೊಂದು ಬಾರಿ ಜಿಲ್ಲಾ ಕಸಾಪ ಸೇವೆಗೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಇದೇ ವೇಳೆ ಮಾತನಾಡಿದ ಅಭ್ಯರ್ಥಿ ಬಿ.ಎಚ್. ನಿರಗುಡಿ, ಜಿಲ್ಲಾದ್ಯಂತ 3ನೇ ಹಂತದ ಪ್ರವಾಸ ಕೈಗೊಂಡಿದ್ದು, ಮತದಾರರು ಹೆಚ್ಚಿನ ಮತಗಳನ್ನು ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಬಾರಿ ಆಳಂದ ತಾಲೂಕಿನಿಂದ ಹೆಚ್ಚಿನ ಮತಗಳ ಪಡೆದು ಗೆಲ್ಲುವ ಆಸೆಯಿದೆ. ಇದಕ್ಕೆ ತಾಲೂಕಿನ ಮತದಾರರು ಸಹ ಹುಮ್ಮಸ್ಸು ತೋರಿಸಿದ್ದಾರೆ ಎಂದರು.
ಸರಸಂಬಾ ಗ್ರಾಮದಲ್ಲಿ ಸಹಕಾರಿ ಧುರೀಣ ಹಾಗೂ ಕಸಾಪ ಸದಸ್ಯ ಮಹಾಂತಪ್ಪ ಆಲೂರ, ಪ್ರಕಾಶ ಕುಂಬಾರ, ವಿಜಯಕುಮಾರ ಗುಂಜೋಟಿ, ಶಿವಲಿಂಗಪ್ಪ ಕುಂಬಾರ, ಪರಮೇಶ್ವರ ಗೌಂಡಿ, ಸುರೇಶ ಕಾಳೆ, ನಾಮದೇವ ಶಖಾಪುರೆ ಮತ್ತಿತರು ನಿರಗುಡಿ ಅವರನ್ನು ಬೆಂಬಲಿಸುತ್ತೇವೆ ಎಂದು ಭರವಸೆ ನೀಡಿದರು. ಪ್ರಮುಖ ರಾಜೇಂದ್ರ ಯರನಾಳೆ, ಜಿ.ಎಸ್. ಮಾಲಿಪಾಟೀಲ, ಶರಣಗೌಡ ಪಾಳಾ, ಲಾಡಪ್ಪ ಮೂಲಗೆ, ಸಿದ್ರಾಮ ಬೇತಾಳೆ ಮತ್ತಿತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Kollywood: ಅಜಿತ್ ಹುಟ್ಟುಹಬ್ಬಕ್ಕೆ ಸೂಪರ್ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್ ಖುಷ್
Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ