ಸಾಹಿತಿಗಳ ಆಶಯಕ್ಕೆ ಕಸಾಪ ಮನ್ನಣೆ
Team Udayavani, Jan 17, 2022, 10:29 AM IST
ಆಳಂದ: ಜನಾತ್ಮಕವಾಗಿರುವ ಸಾಹಿತ್ಯವನ್ನು ಪೋಷಿಸಿಕೊಂಡು ಸಾಹಿತಿಗಳ ಆಶಯದಂತೆ ತಾಲೂಕಿನಲ್ಲಿ ಕನ್ನಡ ನಾಡು-ನುಡಿ ಆದ್ಯತೆಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಲಾಗುವುದು ಎಂದು ಆಳಂದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಣಮಂತ ಶೇರಿ ಹೇಳಿದರು.
ಪಟ್ಟಣದಲ್ಲಿ ಸಮಾನ ಮನಸ್ಕ ಸಾಹಿತ್ಯ ಆಸಕ್ತ ಶಿಕ್ಷಕರು ಹಮ್ಮಿಕೊಂಡಿದ್ದ ಗೌರವ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಾಲೂಕಿನಲ್ಲಿ ಕನ್ನಡದ ಕಾರ್ಯಗಳು ನಿರಂತರವಾಗಿರುವಂತೆ ಮಾಡುವುದರ ಜೊತೆಗೆ ಪರಿಷತ್ ವತಿಯಿಂದ ಪ್ರಕಟಣೆ, ಪ್ರೋತ್ಸಾಹ, ವಿಚಾರ ಸಂಕಿರಣ, ಕಾರ್ಯಾಗಾರ ಸೇರಿದಂತೆ ವಿಶಿಷ್ಟ ಕಾರ್ಯ ರೂಪಿಸಲಾಗುವುದು ಎಂದರು.
ಹಿರಿಯ ಶಿಕ್ಷಕ ಪಂಚಪ್ಪ ಪಾಟೀಲ ಮಾತನಾಡಿ, ತಾಲೂಕಿನ ಶಿಕ್ಷಕ ಸಮುದಾಯದಲ್ಲಿಯೂ ಹಲವಾರು ಜನ ಪ್ರತಿಭಾವಂತ ಸಾಹಿತಿಗಳಿದ್ದಾರೆ. ಅವರನ್ನು ಬಳಸಿಕೊಂಡು ಕನ್ನಡ ಭಾಷೆ ಬೆಳವಣಿಗೆಗೆ ಜೊತೆಯಾಗಿ ಸಾಗೋಣ ಎಂದು ಆಶಯ ವ್ಯಕ್ತಪಡಿಸಿದರು.
ಶಿಕ್ಷಕ ಸಾಹಿತಿ ಅಂಬಾರಾಯ ಕಾಂಬಳೆ ಮಾತನಾಡಿದರು. ಸಿಆರ್ಪಿ ನಾಗೇಂದ್ರಪ್ಪ ಗಾಡೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಹಿರಿಯ ಶಿಕ್ಷಕ ವಿಶ್ವನಾಥ ಘೋಡಕೆ, ಶಿಕ್ಷಕರ ಸಂಘದ ಖಜಾಂಚಿ ಮಹಾದೇವ ಗುಣಕಿ, ರಾಜಕುಮಾರ ಕೋಷ್ಟಿ, ಶಿಕ್ಷಕರಾದ ಪ್ರಫುಲಕುಮಾರ, ವಿನಾಯಕ ಚೋಳಕೆ, ಸುರೇಶ ಹಂಚಿನಾಳ, ಪರಮಾನಂದ ಜಮಾದಾರ, ಶಿಕ್ಷಕರ ಸಂಘದ ಕಾರ್ಯದರ್ಶಿ ವೆಂಕಟೇಶ ಇಳಿಗಾರ, ಮಾರುತಿ, ಶ್ರೀನಾಥ ನಾಗೂರ, ಶಿವುಕುಮಾರ ಮೇಟಿ, ಅನಿಲ ಹಾಗೂ ಶಿಕ್ಷಕರು ಇದ್ದರು. ಚಂದ್ರಶೇಖರ ನಿರೂಪಿಸಿ, ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
Kalaburgi: ಮಹಿಳೆಯ ಬಾತ್ ರೂಮ್ ವಿಡಿಯೋ ರೆಕಾರ್ಡ್ ಮಾಡಿದ ಸೆಕ್ಯೂರಿಟಿ ಗಾರ್ಡ್
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ