ಆಧುನಿಕ ಕೃಷಿ ಅರಿವು ರೈತರಿಗೆ ಅಗತ್ಯ
Team Udayavani, Apr 12, 2022, 1:34 PM IST
ಅಫಜಲಪುರ: ಜಗತ್ತು ಬದಲಾಗುತ್ತಿದೆ. ವಿವಿಧ ಕ್ಷೇತ್ರಗಳಲ್ಲಿ ಸಾಕಷ್ಟು ಬದಲಾವಣೆಗಳಾಗಿ ಇಂದು ಉತ್ತುಂಗಕ್ಕೇರಿವೆ ಈಗ ಕೃಷಿಕರು ಕೂಡ ಸಾಂಪ್ರದಾಯಿಕ ಕೃಷಿಯ ಜೊತೆಗೆ ಆಧುನಿಕ ಕೃಷಿಯ ಬಗ್ಗೆ ಅರಿತುಕೊಂಡು ಕೃಷಿ ಕಾಯಕ ಮಾಡಬೇಕು ಎಂದು ಡಾ| ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರು ಹೇಳಿದರು.
ತಾಲೂಕಿನ ಬಡದಾಳ ಗ್ರಾಮದ ರೈತ ಉತ್ಪಾದಕ ಸಂಘದಿಂದ ಮೂರು ದಿನಗಳ ಕಾಲ ರೈತ ಅಧ್ಯಯನ ಪ್ರವಾಸದ ಬಸ್ಸಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಅನೇಕ ಸರ್ಕಾರಗಳು ರೈತರ ಬದುಕು ಬದಲಿಸುತ್ತೇವೆ ಎಂದು ಅ ಧಿಕಾರಕ್ಕೆ ಬರುತ್ತವೆ, ಅಧಿ ಕಾರಕ್ಕೆ ಬಂದ ಬಳಿಕ ರೈತರ ಹಿತ ಮರೆಯತ್ತವೆ. ಹೀಗಾಗಿಯೇ ಇಂದು ರೈತರು ಸರಿಯಾದ ಕೃಷಿ ಕಾಯಕ ಮಾಡಲಾಗುತ್ತಿಲ್ಲ. ಅನೇಕ ರೈತರು ಸಾಲಬಾಧೆಯಿಂದ ಸಾವನ್ನಪ್ಪುತ್ತಿದ್ದಾರೆ. ಅವುಗಳನ್ನು ತಪ್ಪಿಸಲು ಸರ್ಕಾರಗಳು ಸಮರ್ಪಕ ಕೃಷಿ ನೀತಿಗಳನ್ನು ಜಾರಿಗೆ ತರಬೇಕು. ರೈತರಿಗೆ ಬೇಕಾದ ವಿದ್ಯುತ್, ನೀರು ಪೂರೈಕೆ ಮಾಡಬೇಕು. ಕೃಷಿ ಅಧ್ಯಯನ ಪ್ರವಾಸ ಯಶಸ್ವಿಯಾಗಲಿ, ಪ್ರವಾಸಕ್ಕೆ ಹೋದವರೆಲ್ಲ ಸರಿಯಾದ ಮಾಹಿತಿ ಪಡೆದುಕೊಂಡು ಬರುವ ದಿನಗಳಲ್ಲಿ ಅಳವಡಿಸಿಕೊಂಡು ಯಶಸ್ವಿಯಾಗಿ ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಶ್ರೀಕಾಂತ ನಿಂಬಾಳ ಮಾತನಾಡಿ, ಸರ್ಕಾರದ ಸಹಕಾರದಿಂದ ಮೂರು ದಿನಗಳ ಕಾಲ ಗೋಕಾಕ, ಹುನಗುಂದ ಹಾಗೂ ಕಲಾದಗಿ ಗಳಿಗೆ ಅಧ್ಯಯನ ಪ್ರವಾಸ ಕೈಗೊಂಡಿದ್ದೇವೆ. ಈ ಮೂರು ದಿನಗಳಲ್ಲಿ ಅಲ್ಲಿನ ರೈತ ಉತ್ಪಾದಕ ಸಂಘಗಳು ಹೇಗೆ ಅಭಿವೃದ್ಧಿ ಹೊಂದಿವೆ, ಯಾವ ಪದ್ಧತಿಯ ಕೃಷಿಯನ್ನು ಮಾಡಿ ಸಾಧನೆ ಮಾಡುತ್ತಿದ್ದಾರೆ. ಅವರಲ್ಲಿರುವ ತಂತ್ರಜ್ಞಾನ ಬಳಕೆ ಹೇಗಿದೆ ಎಂಬಿತ್ಯಾದಿ ಅಂಶಗಳನ್ನು ಅರಿತುಕೊಳ್ಳಲಾಗುತ್ತದೆ. ಸುಮಾರು 45 ರೈತರು ಪ್ರವಾಸದಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ರಾಜಶೇಖರ ಜಮಾಣಿ, ರಾಘವೇಂದ್ರ ಕಲಶೇಟ್ಟಿ, ಗುಂಡುರಾವ ಪಾಟೀಲ್, ಭೀಮರಾವ್ ಪಾಟೀಲ್, ಶ್ರೀಮಂತ ಪಾಟೀಲ್, ಮಹಾಂತೇಶ ಅತನೂರ, ಪುತ್ರು ಕುರುಬತಳ್ಳಿ, ಬಸಮ್ಮ ಗುತ್ತೇದಾರ, ಆನಂದ ಕುಂಬಾರ ಸೇರಿದಂತೆ ಅನೇಕರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
Minister ಪ್ರಿಯಾಂಕ ಖರ್ಗೆ ಉದ್ಧಟತನ ಅತಿಯಾಗಿದೆ: ಸಂಸದ ಡಾ.ಜಾಧವ್