ಈಜಿಪ್ತ್ ನ ಮನೆ ಮಹಡಿ ಮೇಲೆ ದೇಶಿ ತರಕಾರಿ ಬೆಳೆಸಿದ ಕನ್ನಡಿಗ


Team Udayavani, May 7, 2020, 12:09 PM IST

7-May-06

ಮುದ್ದೇಬಿಹಾಳ: ಈಜಿಪ್ತ್ ನ ಕೈರೋದ ತಮ್ಮ ಮನೆಯ ಟೆರೇಸಿನಲ್ಲಿ ಡಾ| ಚಂದ್ರಶೇಖರ ಬಿರಾದಾರ ಅವರು ಬೆಳೆಸಿರುವ ತರಕಾರಿ.

ಮುದ್ದೇಬಿಹಾಳ: ಕೋವಿಡ್ ವಿಶ್ವವನ್ನೇ ತಲ್ಲಣಗೊಳಿಸಿದೆ. ಲಾಕ್‌ಡೌನ್‌ದಿಂದಾಗಿ ಮನೆಯಲ್ಲೇ ಕುಳಿತು ಕೆಲಸ ಮಾಡುವ ಅನಿವಾರ್ಯತೆ ಅನೇಕರಿಗೆ ಇದೆ. ಇದನ್ನು ಸದಉಪಯೋಗ ಪಡಿಸಿಕೊಂಡ ಈಜಿಪ್ತ್ ನ ಕೈರೋದ ವಿಶ್ವವಿಖ್ಯಾತ ಪಿರ್ಯಾಮಿಡ್‌ ಬಳಿ ವಾಸವಿರುವ ಕನ್ನಡಿಗ, ವಿಜಯಪುರ ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಢವಳಗಿ ಗ್ರಾಮದ ಡಾ| ಚಂದ್ರಶೇಖರ ಬಿರಾದಾರ ಮನೆ ಟರೇಸ್‌ ಮೇಲೆ ವಿವಿಧ ತರಕಾರಿ ಬೆಳೆದು ಗಮನ ಸೆಳೆದಿದ್ದಾರೆ.

ಢವಳಗಿ ಗ್ರಾಮದ ಡಾ| ಚಂದ್ರಶೇಖರ ಬಿರಾದಾರ ಕೃಷಿ ವಿಜ್ಞಾನಿಯಾಗಿದ್ದಾರೆ. ವಿವಿಧ ವಿದೇಶಿ ಕಂಪನಿಗಳಲ್ಲಿ ಭಾರತದ ಪ್ರತಿನಿಧಿಯಾಗಿ ಮಹತ್ವದ ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ. ಕೋವಿಡ್ ನಿಂದಾಗಿ ಮನೆಯಿಂದಲೇ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದು, ಅಲ್ಲಿನ ಕೋವಿಡ್ ಸ್ಥಿತಿಗತಿ ಕುರಿತು ಈಜಿಪ್ತ್ನಿಂದಲೇ ಉದಯವಾಣಿ ಜತೆ ಮಾತನಾಡಿದ್ದಾರೆ. ಈಜಿಪ್ತ್ನಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲೂ ಕೋವಿಡ್ ಹಾವಳಿ ಇದೆ. ಕನ್ನಡಿಗರೆಲ್ಲ ಒಂದೇ ಕಡೆ ನೆಲೆಸಿದ್ದೇವೆ. ಎಲ್ಲರೂ ಸರ್ಕಾರದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸೋಂಕಿನಿಂದ ಸುರಕ್ಷಿತವಾಗಿದ್ದೇವೆ. ನಾವೆಲ್ಲ ಮನೆಯಿಂದಲೇ ಕೆಲಸ ಮಾಡುತ್ತಿದ್ದೇವೆ. ಬಿಡುವಿನ ಅವಧಿಯಲ್ಲಿ ಮನೆಯ ಟೆರೇಸ್‌ ಸೇರಿದಂತೆ ಲಭ್ಯ ಜಾಗದಲ್ಲಿ ಹೂವು, ತರಕಾರಿ ಬೆಳೆಯುತ್ತಿದ್ದೇವೆ. ಈ ಮೂಲಕ ದೇಶೀಯತೆಗೆ ಹೆಚ್ಚಿನ ಮಹತ್ವ ಕೊಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಮನೆಯಲ್ಲಿ ಸಣ್ಣ ಸ್ಥಳ ಇದ್ದರೆ ಸಾಕು ಅಂದಾಜು 50 ತರಹದ ತರಕಾರಿ ಬೆಳೆಯಬಹುದು. ಬಳಕೆ ಇಲ್ಲದ ಕಂಟೇನರ್‌ಗಳನ್ನು ಇದಕ್ಕಾಗಿ ಉಪಯೋಗಿಸಬಹುದು. 5 ಹಂತ ಮಾಡಿಕೊಂಡು ಮೊದಲ ಹಂತದಲ್ಲಿ ಗಜ್ಜರಿ, ಬೀಟರೂಟ್‌, ಈರುಳ್ಳಿ, ಬಳ್ಳೊಳ್ಳಿ, ಬಟಾಟಿ, ಮೂಲಂಗಿ, ಅರಿಷಿಣ, ಶುಂಠಿ, ಹೂಕೋಸು, ಗೆಣಸು, ಎರಡನೇ ಹಂತದಲ್ಲಿ ಎಲೆ ಬಿಡುವ ತರಕಾರಿಗಳಾದ ಮೆಂತೆಪಲ್ಲೆ, ಕೊತ್ತಂಬರಿ, ಸಬ್ಬಸಿಗೆ, ರಾಜಗಿರಿ, ಕಿರಕ್‌ ಸಾಲಿ, ದೊಡ್ಡಗೋಣಿ ಸೊಪ್ಪು, ಪಾಲಕ್‌, ಅರ್ಗುಲಾ, ಹುಣಸಿಕಿ ಮುಂತಾದ ಹಸಿರು ತರಕಾರಿ, ಮೂರನೇ ಹಂತದಲ್ಲಿ ಬದನೆಕಾಯಿ, ಮೆಣಸಿನಕಾಯಿ, ಬೀನ್ಸ್‌, ಟೊಮ್ಯಾಟೊ, ಕಾಲಿಫ್ಲವರ್‌, ಬಟಾಣಿ, ಕೋಸುಗಡ್ಡೆ, ಬ್ರೂಸೆಲ್‌ ಮೊಗ್ಗು, ಖಲೋರ್ಬಿ ಮುಂತಾದವು, ನಾಲ್ಕನೇ ಹಂತದಲ್ಲಿ ತೊಂಡೆ, ಸವತಿಕಾಯಿ, ಅವರೆ, ಚಳ್ಳಂಬರಿ ಸೇರಿ ಬಳ್ಳಿಯಲ್ಲಿ ಬೆಳೆಯುವ ತರಕಾರಿ. ಐದನೇ ಹಂತದಲ್ಲಿ ನುಗ್ಗೇಕಾಯಿ ಸೇರಿ ಎತ್ತರದಲ್ಲಿ ಬೆಳೆಯುವ ತರಕಾರಿ ಹೀಗೆ ಹತ್ತು ಹಲವು ಬಗೆಹ ತರಕಾರಿ ಬೆಳೆಯಬಹುದು ಎನ್ನುತ್ತಾರೆ ಅವರು.

ಈ ರೀತಿ ಮಾಡುವುದರಿಂದ ಮನೆಯ ವಾತಾವರಣವೂ ತಂಪಾಗಿರುತ್ತದೆ. ಆಹ್ಲಾದಕರ ಗಾಳಿ ಬೀಸುತ್ತಿರುತ್ತದೆ. ಈ ಪದ್ಧತಿಯಲ್ಲಿ ಬೆಳೆದ ತರಕಾರಿಗಳಲ್ಲಿ ಹೆಚ್ಚಿನ ಫಲ ಕೊಡುವ ಶಕ್ತಿ ಇರುತ್ತದೆ ಜೊತೆಗೆ ರುಚಿ, ಗುಣಮಟ್ಟ, ಬಾಳಿಕೆ ಮತ್ತು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಸಾಮರ್ಥ್ಯ ಇರುತ್ತದೆ. ಇಂಥ ಪರಿಸರ ಮನೆಯಲ್ಲಿ ನಿರ್ಮಿಸುವುದರಿಂದ ಹಕ್ಕಿಗಳು ಅಲ್ಲಿ ಬಂದು ಹೋಗಿ ಮಾಡುವುದರಿಂದ ಪಕ್ಷಿಗಳ ಕಲರವವೂ ಮನಕ್ಕೆ ಮುದ ನೀಡುವಂತಿರುತ್ತದೆ. ಕೊರೊನಾ ರೋಗದಿಂದ ಪಾರಾಗಲು ಇದು ಸೂಕ್ತ ಕ್ರಮವಾಗಿದೆ ಎಂದಿದ್ದಾರೆ.

ಡಿ.ಬಿ.ವಡವಡಗಿ

ಟಾಪ್ ನ್ಯೂಸ್

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-

Muddebihal: ಅಪರಿಚಿತ ವಾಹನ ಡಿಕ್ಕಿ: ಯುವಕ ಸಾವು

Vijayapura; Complaint to Election Commission against Yatnal: Shivananda Patil

Vijayapura; ಯತ್ನಾಳ್ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು: ಶಿವಾನಂದ ಪಾಟೀಲ

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

Vijayapura; ಚುನಾವಣಾ ಬಾಂಡ್ ತನಿಖೆಯಾದರೆ ಮೋದಿ ಜೈಲಿಗೆ: ಎಂ.ಬಿ. ಪಾಟೀಲ್

1-wqqw

Vijayapura: ಬಿರುಗಾಳಿ-ಸಿಡಿಲ ಅಬ್ಬರದ ಮಳೆಯ ಅವಾಂತರ

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

Lok Sabha Polls; ಎ. 26: ವಿಜಯಪುರಕ್ಕೆ ರಾಹುಲ್‌ ಗಾಂಧಿ 

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Rajveer Diler: ಬಿಜೆಪಿ ಸಂಸದ ರಾಜವೀರ್ ದಿಲೇರ್ ಹೃದಯಾಘಾತದಿಂದ ನಿಧನ

Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್‌ವೀರ್ ದಿಲೇರ್ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.