ಅತಿಥಿ ಉಪನ್ಯಾಸಕರ ಕಾಯಂಗೆ ಆಗ್ರಹ
Team Udayavani, Dec 25, 2021, 10:52 AM IST
ಅಫಜಲಪುರ: ರಾಜ್ಯದಲ್ಲಿ ಸುದೀರ್ಘ ವರ್ಷಗಳ ಕಾಲ ಯಾವುದೇ ಭದ್ರತೆಯಿಲ್ಲದೇ ಕಡಿಮೆ ವೇತನದಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕು ಎಂದು ಅಫಜಲಪುರ, ಕರಜಗಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರು ತಹಶೀಲ್ದಾರ್ ನಾಗಮ್ಮ ಕೆ. ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಿದರು.
ನಂತರ ಅಫಜಲಪುರ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರಾದ ಡಾ| ಸಂಗಣ್ಣ ಸಿಂಗೆ, ಡಾ| ಸುರೇಖಾ ಮಾತನಾಡಿ, ರಾಜ್ಯದ ಒಟ್ಟು 430 ಸರ್ಕಾರಿ ಪ್ರಥಮ ದರ್ಜೆ ಕಾಜೇಜುಗಳಲ್ಲಿ 14564 ಅತಿಥಿ ಉಪನ್ಯಾಸಕರು ಕನಿಷ್ಟ ವೇತನ ಪಡೆದು ಸೇವೆಸಲ್ಲಿಸುತ್ತಿದ್ದಾರೆ. ಹೀಗಾಗಿ ಸರ್ಕಾರ ಅತಿಥಿ ಉಪನ್ಯಾಸಕರ ನ್ಯಾಯಯುತ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿದರು.
ಕರಜಗಿ ಕಾಲೇಜಿನ ಅತಿಥಿ ಉಪನ್ಯಾಸಕ ಡಾ| ಗುಂಡಪ್ಪ ಸಿಂಗೆ ಮಾತನಾಡಿ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕರು ಸರ್ಕಾರಗಳು ನೀಡುತ್ತಿರುವ ಭರವಸೆಗಳನ್ನು ನಂಬಿಕೊಂಡು ಹಲವು ವರ್ಷಗಳಿಂದ ಯಾವುದೇ ಭದ್ರತೆಯಿಲ್ಲದೆ ಸೇವೆಸಲ್ಲಿಸುತ್ತಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಈ ಹಿಂದೆ ಶಿಕ್ಷಣ ಸಚಿವ ಗೋವಿಂದೇಗೌಡ ಕೈಗೊಂಡ ಐತಿಹಾಸಿಕ ಕ್ರಮವನ್ನು ತಾವು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ತಾಲೂಕು ಅತಿಥಿ ಉಪನ್ಯಾಸಕ ಸಂಘದ ಅದ್ಯಕ್ಷ ವೈಜನಾಥ ಭಾವಿ ತಹಶೀಲ್ದಾರ್ ನಾಗಮ್ಮ ಕೆ.ಗೆ ಮನವಿ ಪತ್ರ ಸಲ್ಲಿಸಿದರು. ಅತಿಥಿ ಉಪನ್ಯಾಸಕರಾದ ಬಾಬುರಾವ್ ಮಲ್ಲೇಶಿ, ಗೌರಿಶಂಕರ ಬೂರೆ, ಸುರೇಶ ಮುಗಳಿ, ಪ್ರೇಮಲತಾ ಕಲ್ಲೂರ, ಅಭೀಷೇಕ ಸಂಗೊಳ್ಳಿ, ಅಮೋಘಸಿದ್ಧ ಪೂಜಾರಿ, ಪವನಕುಮಾರ ನೈಕೊಡಿ, ಗೌತಮ ಸಕ್ಕರಗಿ, ಸಂತೋಷ ಡಾಂಗೆ, ಭೀಮಶಾಗೌಡ, ಚಂದ್ರಕಾಂತ ಚವಾಣ, ಬಜರಂಗ ಶಂಕರ, ಸಂದೀಪ ಪಾರಗೊಂಡ, ಬಸವರಾಜೇಶ್ವರಿ, ಡಾ| ಶಾಮಲಾ, ಉತ್ತಮ ಚವಾಣ, ಕೃಷ್ಣಪ್ಪ ಸಿಂಗೆ, ಸಂತೋಷ ಬಡಿಗೇರ, ಉಮೇಶ ಎನ್., ಶ್ವೇತಾ ಗಜಕೋಶ, ತಳವಾರ ನಾಗೇಶ, ನಾಗಭೂಷಣ ಟಿ., ಡಾ| ರಾಜೇಶ ಆಲಮೇಲಕರ್, ರಮೇಶ ಹಾಗೂ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಶೋಕಿಗಾಗಿ ನಕಲಿ ಪಿಸ್ತೂಲ್ ಹಿಡಿದ ಪೋಟೋ ವೈರಲ್: ಪ್ರಕರಣ ದಾಖಲು
Kalaburagi: ನನ್ನ ಹೆಣದ ಮೇಲೆ ಬಿಜೆಪಿ ಚುನಾವಣೆ ಮಾಡಲು ಹೊರಟಿದೆ: ಪ್ರಿಯಾಂಕ್
Mallikarjun Kharge ಕ್ಷೇತ್ರದಲ್ಲಿ 19 ಚುನಾವಣೆಯಲ್ಲಿ 16 ಬಾರಿ ಗೆದ್ದ ಕಾಂಗ್ರೆಸ್
Kalaburagi; ಪಾಪರ್ ಆಗಿದ್ದರೆ KKRDB ಅಭಿವೃದ್ದಿಗೆ ಹೇಗೆ ಹಣ ಕೊಡುತ್ತಿದ್ದೆವು?: ಖಂಡ್ರೆ
Kalaburagi; ಸೋಲಿನ ಭಯದಿಂದ ಹಿಂದೆ ಸರಿದ ಡಾ.ಖರ್ಗೆ: ವಿಪಕ್ಷ ನಾಯಕ ಆರ್ ಅಶೋಕ
MUST WATCH
ಹೊಸ ಸೇರ್ಪಡೆ
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್
Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ