ಛಾಯಾಗ್ರಹಣ ದಿನಾಚರಣೆ; ಪುರಸ್ಕೃತರಿಗೆ ಸನ್ಮಾನ
Team Udayavani, Aug 20, 2022, 11:36 AM IST
ಅಫಜಲಪುರ: ಪ್ರಕೃತಿಯಲ್ಲಿ ನೋಡುವ ಎಲ್ಲವೂ ನಮಗೆ ವಿಶೇಷ ಎನಿಸುವುದಿಲ್ಲ. ಆದರೆ ಕ್ಯಾಮರಾ ಕೈಚಳಕದಿಂದ ತೆಗೆದ ಚಿತ್ರಗಳಿಂದ ನಮಗೆ ಸುಂದರ ದೃಶ್ಯ ನೋಡಲು ಸಿಗುತ್ತದೆ ಎಂದು ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ನುಡಿದರು.
ಪಟ್ಟಣದ ಸಿದ್ಧರಾಮೇಶ್ವರ ಕಲ್ಯಾಣ ಮಂಟಪದಲ್ಲಿ ವಿಶ್ವ ಛಾಯಾಗ್ರಹಣ ದಿನದ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪ್ರಕೃತಿ ವಿಸ್ಮಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದು ನಮಗೆಲ್ಲ ಅದ್ಭುತವಾದ ಚಿತ್ರಗಳನ್ನು ನೀಡುವ ಛಾಯಾಗ್ರಹಕರು ಯಾವಾಗಲೂ ವಿಶೇಷವಾಗಿ ಕಾಣುತ್ತಾರೆ ಎಂದರು.
ಕಲಬುರಗಿಯ ಚಂದನ ಕಲರ್ ಲ್ಯಾಬ್ ಮಾಲೀಕ ಎಂ.ಎನ್. ಎಸ್ ಶಾಸ್ತ್ರಿ ಮಾತನಾಡಿ, ಆಧುನಿಕತೆ ಮುಂದುವರಿದಂತೆ ಮೊಬೈಲ್ಗಳ ಹಾವಳಿ ಹೆಚ್ಚಾಗಿದ್ದರಿಂದ ಕ್ಯಾಮೆರಾಮನ್ಗಳು ಕಷ್ಟ ಪಡುವಂತಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಹಿರಿಯ ಫೋಟೊಗ್ರಫರ್ಗಳು ಮತ್ತು ರಾಜ್ಯ ಮಟ್ಟದ ಪ್ರಶಸ್ತಿ ಪಡೆದವರನ್ನು ಸನ್ಮಾನಿಸಲಾಯಿತು. ತಾಲೂಕು ಅಧ್ಯಕ್ಷ ಈರಣ್ಣ ಕಿರಣಗಿ, ಕಾರ್ಯದರ್ಶಿ ಬಸವರಾಜ ಅಳ್ಳಗಿ, ಖಜಾಂಚಿ ವೈಜನಾಥ ಆಲೆಗಾಂವ್, ಛಾಯಾಗ್ರಹಕ ಪವನ್ ಅಲಬಾಳ, ವೀರು ಹಿರೇಮಠ, ಮುಖಂಡರಾದ ರಮೇಶ ಬಾಕೆ, ಶಿವಾನಂದ ಗಾಡಿ, ಚಂದು ದೇಸಾಯಿ, ಪಾಶಾ ಮಣೂರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು
MUST WATCH
ಹೊಸ ಸೇರ್ಪಡೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು