ಗ್ರಾಮೀಣದಲ್ಲಿ ಶೌಚಾಲಯ ಬಳಕೆ ಜಾಗೃತಿ ಮೂಡಲಿ
Team Udayavani, Jan 15, 2022, 11:40 AM IST
ಅಫಜಲಪುರ: ಗ್ರಾಮೀಣ ಭಾಗದ ಜನರಲ್ಲಿ ಇನ್ನಾದರೂ ಶೌಚಾಲಯ ಬಳಕೆ ಜಾಗೃತಿ ಮೂಡಲಿ ಎಂದು ಮಾಜಿ ಶಾಸಕ ಮಾಲೀಕಯ್ಯ ಗುತ್ತೇದಾರ ಹೇಳಿದರು.
ತಾಲೂಕಿನ ದೇವಲ ಗಾಣಗಾಪುರ ಗ್ರಾಮದ ಯತಿರಾಜ್ ಶಿಕ್ಷಣ ಸಂಸ್ಥೆಯಲ್ಲಿ ಆತ್ಮ ನಿರ್ಭರ ಭಾರತ, ಸ್ವತ್ಛ ಭಾರತ ಅಭಿಯಾನದಡಿ ನೂತನವಾಗಿ ನಿರ್ಮಿಸಲಾಗಿರುವ ನಾರಿ ನಿರ್ಮಲ ನಿಲಯ ಉದ್ಘಾಟನೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಾರತ ಸ್ವತ್ಛವಾಗಬೇಕು. ಜನರ ಜೀವನ ಶೈಲಿ ಸುಧಾರಿಸಬೇಕು ಎನ್ನುವುದು ಪ್ರಧಾನಿ ನರೇಂದ್ರ ಮೋದಿ ಮಹತ್ವಾಕಾಂಕ್ಷಿಯಾಗಿದೆ. ಅದರಂತೆ ಅವರು ಯೋಜನೆ ರೂಪಿಸುತ್ತಿದ್ದಾರೆ. ಅವರ ಕನಸು ನನಸಾಗಬೇಕಾದರೆ ಇಂತಹ ಕ್ರಿಯಾತ್ಮಕ ಕೆಲಸಗಳು ಹೆಚ್ಚು ನಡೆಯಬೇಕು. ಯತಿರಾಜ್ ಶಿಕ್ಷಣ ಸಂಸ್ಥೆ ಶೌಚಾಲಯಕ್ಕೆ ನಾರಿ ನಿರ್ಮಲ ನಿಲಯವೆಂದು ಹೆಸರಿಟ್ಟು ಪ್ರಧಾನಿಗೆ ಸಮರ್ಪಸಿದ್ದು ನಿಜಕ್ಕೂ ಖುಷಿ ತಂದಿದೆ ಎಂದರು.
ಸಂಸ್ಥೆ ಸಂಸ್ಥಾಪಕ ಭೀಮರಾವ್ ಚೌಡಾಪುರಕರ್, ಅಧ್ಯಕ್ಷೆ ಮೀರಾ ಚವಡಾಪುರಕರ, ಗ್ರಾ.ಪಂ ಉಪಾಧ್ಯಕ್ಷ ಕರುಣಾಕರ ಭಟ್ ಪೂಜಾರಿ, ಮಾಜಿ ಅಧ್ಯಕ್ಷ ನಂದಕುಮಾರ ಕೆ. ಪೂಜಾರಿ, ದೇವಿಂದ್ರ ಜಮಾದಾರ, ಬಲವಂತ ಜಕಬಾ, ಮಲ್ಲುಸಾಹುಕಾರ ಕಣ್ಣಿ ತೆಲ್ಲೂರ, ನಂದಕುಮಾರ ಪೂಜಾರಿ, ಚಂದ್ರವಿಲಾಸ ಪೂಜಾರಿ, ಗೋವಿಂದರಾವ್ ಚೌಡಾಪುರಕರ್ ಹಾಗೂ ಸಂಸ್ಥೆ ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್
Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ
Kalaburagi; ಕಾರುಗಳ ಮುಖಾಮುಖಿ ಢಿಕ್ಕಿ: ಮಠಾಧೀಶ ವಿಧಿವಶ
Lok Sabha elections ನಂತರ ರಾಜ್ಯ ವಿಧಾನಸಭೆ ವಿಸರ್ಜನೆಯಾದರೂ ಆಶ್ಚರ್ಯವಿಲ್ಲ: ಯತ್ನಾಳ್
Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ ಸಾವು